No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Friday, August 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರಗಳಿಗೆ ಬೆಂಬಲ ಒದಗಿಸಲು ಕರ್ನಾಟಕದಲ್ಲಿ ಮತ್ತಷ್ಟು ಹೂಡಿಕೆ ಮಾಡಿದ ABB

ಬೆಂಗಳೂರಿನ ಉತ್ಪಾದನಾ ಮತ್ತು ತಾಂತ್ರಿಕ ಪ್ರತಿಭೆಗಳ ಬಳಕೆಗೆ ಹೊಸ ಘಟಕಗಳ ಸ್ಥಾಪನೆ

kalpa News by kalpa News
March 12, 2026
in Special Articles
0
ABB deepens Karnataka footprint with new investments to serve high growth emerging sectors
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ನೆಲಮಂಗಲ  |

ಎಲೆಕ್ಟ್ರಿಫಿಕೇಶನ್ ಮತ್ತು ಆಟೋಮೇಷನ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ, ಜಾಗತಿಕ ತಂತ್ರಜ್ಞಾನ ನಾಯಕನಾಗಿರುವ ABB ಸಂಸ್ಥೆಯು, ಬೆಂಗಳೂರಿನಲ್ಲಿ ಹೊಸ ‘ಗ್ರೀನ್‌ ಫೀಲ್ಡ್ ಕ್ಯಾಂಪಸ್’ಗಳು, ಉತ್ಪಾದನಾ ಘಟಕಗಳು, ಹೊಸ ಉತ್ಪನ್ನ ಶ್ರೇಣಿಗಳು ಹಾಗೂ ಸೇವಾ ಮತ್ತು ತರಬೇತಿ ಕೇಂದ್ರಗಳ ಮೂಲಕ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ. ಈ ವಿಸ್ತರಣೆಯ ಭಾಗವಾಗಿ ABB ಸಮೂಹದ ಸಿಇಓ ಮಾರ್ಟನ್ ವಿಯೆರೋಡ್ ಅವರು ಪೀಣ್ಯದಲ್ಲಿ ಹೊಸ ಸಮಗ್ರ ಮೋಷನ್ ಘಟಕಕ್ಕೆ ಭೂಮಿಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅವರು ಕುಣಿಗಲ್ ರಸ್ತೆಯಲ್ಲಿರುವ ‘ಎಲೆಕ್ಟ್ರಿಫಿಕೇಷನ್ ಆಂಡ್ ಅಟೋಮೇಷನ್ ನೆಲಮಂಗಲ ಕ್ಯಾಂಪಸ್ 2’ ಅನ್ನು ಉದ್ಘಾಟಿಸಿದರು.

ಕರ್ನಾಟಕದಲ್ಲಿ ದೀರ್ಘಕಾಲದಿಂದ ಬಲವಾದ ಅಸ್ತಿತ್ವವನ್ನು ಹೊಂದಿರುವ ABB ಸಂಸ್ಥೆಗೆ ಬೆಂಗಳೂರು ಭಾರತದ ಪ್ರಮುಖ ಉತ್ಪಾದನಾ ಮತ್ತು ತಾಂತ್ರಿಕ ಕೇಂದ್ರವಾಗಿದೆ. ಈ ಇತ್ತೀಚಿನ ಹೂಡಿಕೆಯ ಮೂಲಕ ABB ರಾಜ್ಯದಲ್ಲಿ ಮೂರು ಪ್ರಮುಖ ಉತ್ಪಾದನಾ ಸ್ಥಳಗಳನ್ನು ಹೊಂದಲಿದ್ದು, ಇಲ್ಲಿನ ಉತ್ಪಾದನಾ ಚಟುವಟಿಕೆಗಳಲ್ಲಿ 3,000ಕ್ಕೂ ಹೆಚ್ಚು ಜನರು ಉದ್ಯೋಗ ಪಡೆಯಲಿದ್ದಾರೆ. ಈ ಹೊಸ ಘಟಕಗಳು ಡೇಟಾ ಸೆಂಟರ್‌ ಗಳು, ಮೆಟ್ರೋ ರೈಲು, ನವೀಕರಿಸಬಹುದಾದ ಇಂಧನ, ಮೂಲಸೌಕರ್ಯ ಮತ್ತು ಲೋಹದಂತಹ ಕ್ಷೇತ್ರಗಳಿಗೆ ಸೇವೆ ಒದಗಿಸಲಿದೆ.
ಈ ಕುರಿತು ಮಾತನಾಡಿದ ABB ಇಂಡಿಯಾದ ಕಂಟ್ರಿ ಹೆಡ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸಂಜೀವ್ ಶರ್ಮಾ ಅವರು, “ಈ ಕಾರ್ಯ ವಿಸ್ತರಣೆಯು ಭಾರತದ ಮೇಲೆ ABB ಹೊಂದಿರುವ ದೀರ್ಘಕಾಲೀನ ಬದ್ಧತೆ ಮತ್ತು ನಮ್ಮ ‘ಲೋಕಲ್- ಫಾರ್- ಲೋಕಲ್’ (ಸ್ಥಳೀಯರಿಗಾಗಿ ಸ್ಥಳೀಯ ಉತ್ಪಾದನೆ) ತಂತ್ರವನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕದಲ್ಲಿ ನಮ್ಮ ಉತ್ಪಾದನಾ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುವ ಮೂಲಕ, ನಾವು ಸುಧಾರಿತ ತಂತ್ರಜ್ಞಾನಗಳನ್ನು ಗ್ರಾಹಕರಿಗೆ ಹತ್ತಿರ ತರುತ್ತಿದ್ದೇವೆ. ಇದು ಕೈಗಾರಿಕೆಗಳ ಇಂಧನ ದಕ್ಷತೆಯನ್ನು ಸುಧಾರಿಸಲು, ಕಾರ್ಯಾಚರಣೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಭಾರತದ ಮೂಲಸೌಕರ್ಯ ಬೆಳವಣಿಗೆಗೆ ಬೆಂಬಲ ನೀಡಲು ನಮಗೆ ಸಹಾಯ ಮಾಡುತ್ತದೆ” ಎಂದು ತಿಳಿಸಿದರು.

ABB ಸಂಸ್ಥೆಯ ‘ಮೋಷನ್’ ವಿಭಾಗವು ಪೀಣ್ಯದಲ್ಲಿರುವ ತನ್ನ ಕ್ಯಾಂಪಸ್ ಅನ್ನು ಎರಡು ಹೊಸ ಉತ್ಪಾದನಾ ಘಟಕಗಳೊಂದಿಗೆ ವಿಸ್ತರಿಸುತ್ತಿದೆ. 6,100 ಚದರ ಮೀಟರ್ ವಿಸ್ತೀರ್ಣದ ಈ ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದಾಗ 330 ಉದ್ಯೋಗಿಗಳಿಗೆ ಅವಕಾಶ ನೀಡಲಿದೆ. ಇಲ್ಲಿ ‘ಫ್ಲೇಮ್‌ ಪ್ರೂಫ್’ (ಎಎಕ್ಸ್) ವಿನ್ಯಾಸಗಳು, ರೋಲರ್ ಟೇಬಲ್ ವೇರಿಯೆಂಟ್ ಗಳು ಮತ್ತು ದೊಡ್ಡ ಸ್ಮೋಕ್ ವೆಂಟಿಲೇಷನ್ ಮಾದರಿಗಳು ಸೇರಿದಂತೆ ವಿವಿಧ ರೀತಿಯ ಇಂಧನ ದಕ್ಷ ಮೋಟಾರ್‌ ಗಳನ್ನು ತಯಾರಿಸಲಾಗುತ್ತದೆ. ಇದರೊಂದಿಗೆ ಕಡಿಮೆ-ವೋಲ್ಟೇಜ್ ಡ್ರೈವ್‌ ಗಳು ಮತ್ತು ಪ್ರೋಗ್ರಾಮೇಬಲ್ ಲಾಜಿಕ್ ಕಂಟ್ರೋಲರ್‌ ಗಳನ್ನು (ಪಿ ಎಲ್ ಸಿಗಳು) ಇಲ್ಲಿ ಉತ್ಪಾದಿಸಲಾಗುತ್ತದೆ. ಈ ಕ್ಯಾಂಪಸ್‌ ನಲ್ಲಿ ಡಿಜಿಟಲ್ ಪರಿಕರಗಳು ಮತ್ತು ರಿಮೋಟ್ ಡಯಾಗ್ನೋಸ್ಟಿಕ್ಸ್ ಒಳಗೊಂಡ ಸೇವಾ ಮತ್ತು ತರಬೇತಿ ಕೇಂದ್ರವೂ ಇರಲಿದೆ. ಕಳೆದ 12 ವರ್ಷಗಳಲ್ಲಿ ಎಬಿಬಿ ಅಳವಡಿಸಿರುವ ಹೈ-ಎಫಿಷಿಯನ್ಸಿ ಮೋಟಾರ್‌ಗಳು ಮತ್ತು ಡ್ರೈವ್‌ ಗಳು ವಾರ್ಷಿಕವಾಗಿ ಸುಮಾರು 20 TWh ಇಂಧನವನ್ನು ಉಳಿಸಿದ್ದು, ಇದು ದೆಹಲಿಯ ವಾರ್ಷಿಕ ವಿದ್ಯುತ್ ಬಳಕೆಯ ಸುಮಾರು ಅರ್ಧದಷ್ಟು ಭಾಗಕ್ಕೆ ಸಮನಾಗಿದೆ.

ನೆಲಮಂಗಲದ ಎರಡನೇ ಕ್ಯಾಂಪಸ್‌ ನಲ್ಲಿ 16,470 ಚದರ ಮೀಟರ್ ವಿಸ್ತೀರ್ಣದ ಬಹು-ಉದ್ಯಮ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಎಲೆಕ್ಟ್ರಿಫಿಕೇಶನ್ ಮತ್ತು ಆಟೋಮೇಷನ್ ವ್ಯವಹಾರಗಳ ಉತ್ಪಾದನೆಯನ್ನು ಹೆಚ್ಚಿಸಲಿದೆ. ಈ ಘಟಕವು ಸ್ಮಾರ್ಟ್ ಪವರ್ ತಂತ್ರಜ್ಞಾನಗಳು, ಗ್ಯಾಸ್ ಅನಲೈಸರ್ ಉತ್ಪಾದನೆ, ಎಕ್ಸೈಟೇಶನ್ ಸಿಸ್ಟಮ್‌ ಗಳು ಮತ್ತು ಹೈ-ಪವರ್ ರೆಕ್ಟಿಫೈಯರ್‌ ಗಳನ್ನು ಒಳಗೊಂಡ ವಿಶಾಲವಾದ ಪೋರ್ಟ್‌ ಫೋಲಿಯೋಗೆ ಬೆಂಬಲ ನೀಡುತ್ತದೆ.
ವಿಶೇಷವಾಗಿ ಡೇಟಾ ಸೆಂಟರ್‌ ಗಳಿಗೆ ಅಗತ್ಯವಾದ ಪವರ್ ಮ್ಯಾನೇಜ್‌ ಮೆಂಟ್ ಉತ್ಪನ್ನಗಳ ಉತ್ಪಾದನೆಯು ಈ ಕ್ಯಾಂಪಸ್‌ ನಲ್ಲಿ ಸುಮಾರು ಹತ್ತು ಪಟ್ಟು ಹೆಚ್ಚಾಗಲಿದೆ. ಭಾರತದ ಶೇಕಡಾ 30 ಕ್ಕಿಂತ ಹೆಚ್ಚು ಹೈಪರ್‌ ಸ್ಕೇಲ್ ಡೇಟಾ ಸೆಂಟರ್‌ ಗಳು ಈಗಾಗಲೇ ABB ಸಂಸ್ಥೆಯ ಕಡಿಮೆ ಮತ್ತು ಮಧ್ಯಮ ವೋಲ್ಟೇಜ್ ಸಿಸ್ಟಮ್‌ ಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ. ಈ ಹೊಸ ಕ್ಯಾಂಪಸ್, ಲೂಬ್ರಿಕೆಂಟ್, ಪೇಂಟ್, ಪೇಪರ್ ಮತ್ತು ಪಲ್ಪ್ ಉದ್ಯಮಗಳಿಗೆ ಅಗತ್ಯವಾದ ‘ಬ್ಲೆಂಡಿಂಗ್ ಸೊಲ್ಯೂಷನ್ಸ್’ ಸೇರಿದಂತೆ ಎಬಿಬಿಯ ನಾವೀನ್ಯತೆ ಆಧಾರಿತ ‘ಮೇಕ್ ಇನ್ ಇಂಡಿಯಾ’ ಉತ್ಪನ್ನಗಳ ಶ್ರೇಣಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಇದಲ್ಲದೆ, ದೇಶದ ಶೇಕಡ 60ಕ್ಕಿಂತ ಹೆಚ್ಚು ‘ಕ್ಯಾಪ್ಟಿವ್’ ವಿದ್ಯುತ್ ಸ್ಥಾವರಗಳಲ್ಲಿ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುವ ‘ಎಕ್ಸೈಟೇಶನ್ ಸಿಸ್ಟಮ್‌ ಗಳ’ ಮೂಲಕ ABB ತನ್ನ ಪ್ರಬಲ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಈ ಹೂಡಿಕೆಯೊಂದಿಗೆ, ಇಲ್ಲಿಯವರೆಗೆ ಕೇವಲ ಸ್ಥಳೀಯ ರಾಸಾಯನಿಕ ಮತ್ತು ಲೋಹದ ಉದ್ಯಮದ ಗ್ರಾಹಕರಿಗೆ ಪೂರೈಕೆಯಾಗುತ್ತಿದ್ದ ‘ಹೈ-ಪವರ್ ರೆಕ್ಟಿಫೈಯರ್‌ ಗಳು’ ಇನ್ನು ಮುಂದೆ ಪ್ರಾದೇಶಿಕ ಮಾರುಕಟ್ಟೆಗಳಿಗೂ ವಿಸ್ತರಣೆಯಾಗಲಿವೆ.

ಸಾಫ್ಟ್‌ ವೇರ್, ಉತ್ಪಾದನೆ ಮತ್ತು ಆರ್ ಅಂಡ್ ಡಿ ಕ್ಷೇತ್ರಗಳಲ್ಲಿ ಕರ್ನಾಟಕವು ದೀರ್ಘಕಾಲದಿಂದ ತಾಂತ್ರಿಕ ಪ್ರತಿಭೆಗಳ ಕೇಂದ್ರವಾಗಿದೆ. ABBಯ ಈ ನಿರಂತರ ಹೂಡಿಕೆಗಳು ಸ್ಥಳೀಯ ಉತ್ಪಾದನೆಯನ್ನು ವಿಸ್ತರಿಸುವ ಮೂಲಕ, ವಿಶೇಷ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತು ಈ ಪ್ರದೇಶದ ಪೂರೈಕೆದಾರರ ಜಾಲವನ್ನು ಬೆಂಬಲಿಸುವ ಮೂಲಕ ರಾಜ್ಯದ ಕೈಗಾರಿಕಾ ವ್ಯವಸ್ಥೆಯನ್ನು ಬಲಪಡಿಸುತ್ತವೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: ABBBengaluru/NelamangalaKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಬೆಂಗಳೂರು/ನೆಲಮಂಗಲ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿಕಾರಿಪುರ | ಅಂಕದ ಕುರಿತು ಅತಿಯಾದ ಚಿಂತನೆ ಅವಶ್ಯಕತೆ ಇರುವುದಿಲ್ಲ | ಶಿವಕುಮಾರ್ ಅಭಿಮತ

Next Post

ಮೂತ್ರಪಿಂಡದ ಕಾಯಿಲೆ | ಒಂದು ನಿಶಬ್ದ ಹಂತಕ, ಇದನ್ನು ನೀವು ತಡೆಯಬಹುದು | ಹೇಗೆ?

kalpa News

kalpa News

Next Post
ಮೂತ್ರಪಿಂಡದ ಕಾಯಿಲೆ | ಒಂದು ನಿಶಬ್ದ ಹಂತಕ, ಇದನ್ನು ನೀವು ತಡೆಯಬಹುದು | ಹೇಗೆ?

ಮೂತ್ರಪಿಂಡದ ಕಾಯಿಲೆ | ಒಂದು ನಿಶಬ್ದ ಹಂತಕ, ಇದನ್ನು ನೀವು ತಡೆಯಬಹುದು | ಹೇಗೆ?

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL