ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ Bhadravathi Halenagara Raghavendra Swamy Mutt ಎ.25ರಿಂದ 29ರವರೆಗೂ ವಸಂತ ಧಾರ್ಮಿಕ ಶಿಬಿರವನ್ನು ಆಯೋಜಿಸಲಾಗಿದೆ.
ಅಖಿಲ ಭಾರತ ಮಾಧ್ವ ಮಹಾ ಮಂಡಳಿಯ ಭದ್ರಾವತಿ ಶಾಖೆಯ ವತಿಯಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷರಾದ ವಿ. ಜಯತೀರ್ಥ ಮಾಹಿತಿ ನೀಡಿದ್ದಾರೆ.
ಎ.25ರಿಂದ 29ರವರೆಗೂ ಶಿಬಿರ ನಡೆಯಲಿದ್ದು, ಪುರುಷರಿಗೆ ಬೆಳಗ್ಗೆ 9 ಗಂಟೆಯಿಂದ 10.30ರವರೆಗೂ ಹಾಗೂ ಮಹಿಳೆಯರು-ಮಕ್ಕಳಿಗೆ ಮಧ್ಯಾಹ್ನ 2.30ರಿಂದ 5.30ರವರೆಗೂ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಪ್ರತಿದಿನ ಸಂಜೆ 6.30ರಿಂದ 8 ಗಂಟೆಯವರೆಗೂ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಮುಖ್ಯ ಪಂಡಿತರು ಉಪನ್ಯಾಸ ನಡೆಸಿಕೊಡಲಿದ್ದಾರೆ. ಎ.29ರಂದು ಮಧ್ಯಾಹ್ನ 2.30ರಿಂದ ಸಮಾರೋಪ ಸಮಾರಂಭ ಹಾಗೂ ಧಾರ್ಮಿ ಸಂವಾದ ನಡೆಯಲಿದೆ ಎಂದು ತಿಳಿಸಿದ್ದಾರೆ.
Also read: ಸಂತೋಷ್ ಪ್ರಕರಣದಲ್ಲಿ ನನ್ನ ತಪ್ಪಿಲ್ಲ, ನಿರ್ದೋಷಿಯಾಗಿ ಹೊರ ಬರುತ್ತೇನೆ: ಈಶ್ವರಪ್ಪ ವಿಶ್ವಾಸ
ಹೆಚ್ಚಿನ ಮಾಹಿತಿಗಾಗಿ ಜಯತೀರ್ಥ(9035956316), ಶ್ರೀನಿವಾಸಾಚಾರ್(9980941580), ಕೆ.ಆರ್. ವೆಂಕಟೇಶ್(7411576936), ಎನ್.ಎಸ್. ಶ್ರೀಕಾಂತ್(9945983598), ಡಾ.ಸುದರ್ಶನ್ ಆಚಾರ್(9964278800) ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post