ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕ್ರೈಸ್ತಧರ್ಮ ಅನುಸರಿಸುತ್ತಿದ್ದ ಯುವತಿಯೊಬ್ಬರು ಹಿಂದೂ ಧರ್ಮಕ್ಕೆ ಮರಳಿರುವ left Christianity and returned to Hinduism ಪ್ರಕರಣ ನಡೆದಿದೆ.
ಅಂತರಗಂಗೆ ನಿವಾಸಿ ಶಿವಕುಮಾರ್ ಎನ್ನುವವರ ಜೊತೆಯಲ್ಲಿ ಸೀಗೆಬಾಗಿಯ ಕ್ರಶ್ಚಿಯನ್ ಕುಟುಂಬದ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿದೆ. ಮೇ 24ರಂದು ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇವರ ಮದುವೆ ನಡೆಯಲಿದೆ.
ಆದರೆ, ಯುವತಿ ತಾನು ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ನಡೆಯಲಿರುವುದರಿಂದ ಹಾಗೆಯೇ ವಿವಾಹವಾಗಬೇಕಿದೆ. ಹೀಗಾಗಿ, ಯುವತಿಯ ಕುಟುಂಬಸ್ಥರು ಹಿಂದೂ ಧರ್ಮಕ್ಕೆ ಮರಳಿದ್ದಾರೆ.
Also read: ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಮಾಂಸದೂಟ ವಿತರಣೆ | ಕಾರಣವೇನು?
ಜನ್ನಾಪುರದ ಶ್ರೀ ಮಹಾಗಣಪತಿ ದೇವಾಲಯದ ಪ್ರಧಾನ ಅರ್ಚಕರು, ಧರ್ಮ ಜಾಗರಣಾ ಅರ್ಚಕರ ಮಹಾಸಭಾ ಸಂಸ್ಥಾ ಪಕ ಅಧ್ಯಕ್ಷ ವೇ.ಬ್ರ. ಕೃಷ್ಣಮೂರ್ತಿ ಸೋಮ ಯಾಜಿ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಸಲಾಯಿತು.
ಹಿಂದೂ ಧರ್ಮದ ಧಾರ್ಮಿಕ ವಿಧಿವಿಧಾನದ ಮೂಲಕ ಯುವತಿಯನ್ನು ಹಿಂದೂ ಧರ್ಮಕ್ಕೆ ಮರಳಿ ಕರೆತರಲಾಯಿತು. ಯುವತಿ ಕುಟುಂಬದವರು ಮೂಲತಃ ಹಿಂದೂ ಧರ್ಮಕ್ಕೆ ಸೇರಿದ್ದು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ್ದರು ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















