ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕಿನ ಡಿಜಿ ಹಳ್ಳಿ ನಿವಾಸಿ ದೇವಿಪ್ರಸಾದ್ (73) ಎನ್ನುವವರು ಕಾಣೆಯಾಗಿದ್ದು, ಈ ಕುರಿತಂತೆ ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಜಿ ಹಳ್ಳಿ ನಿವಾಸಿ ಎಚ್.ಡಿ. ವಿಶ್ವನಾಥ್ ಎನ್ನುವವರು ತಮ್ಮ ತಂದೆ ಕಾಣೆಯಾಗಿರುವ ಕುರಿತಾಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆಲವು ತಿಂಗಳಿನಿಂದ ಮಾನಸಿಕ ಅಸ್ವಸ್ಥರಾಗಿದ್ದ ದೇವಿಪ್ರಸಾದ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮನೆಯ ಮುಂದೆ ಎಂದಿನಂತೆ ಕುಳಿತಿದ್ದ ಅವರು ಕಾಣೆಯಾಗಿದ್ದಾರೆ. ಇವರ ಬಗ್ಗೆ ಬಹಳಷ್ಟು ಹುಡುಕಿದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ ವಿಶ್ವನಾಥ್ ಅವರು ಪೇಪರ್ ಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Also read: ಒಣ ಗಾಂಜಾ ಮಾರಾಟ ಹಿನ್ನೆಲೆ: ಓರ್ವನ ಬಂಧನ
ದೇವಿಪ್ರಸಾದ್ ಅವರು ಕಾಣೆಯಾಗುವ ವೇಳೆ ಬಿಳಿ ಶರ್ಟ್ ಧರಿಸಿದ್ದು, ಕನ್ನಡ ಹಾಗೂ ಹಿಂದಿ ಮಾತನಾಡುತ್ತಾರೆ. ಇವರ ಕುರಿತಾಗಿ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಹತ್ತಿರದ ಠಾಣೆಗೆ ಅಥವಾ 9739488105 ಸಂಖ್ಯೆಗೆ ಮಾಹಿತಿ ನೀಡಿ ಎಂದು ಕುಟಂಬಸ್ಥರು ಮನವಿ ಮಾಡಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















