ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ವತಿಯಿಂದ 35 ವಾರ್ಡ್ಗಳ ವ್ಯಾಪ್ತಿಯಲ್ಲಿ ತೆರೆಯಲಾಗಿರುವ ಕೋವಿಡ್-19 ಲಸಿಕಾ ಕೇಂದ್ರಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
ಇತ್ತೀಚೆಗೆ ನಗರಸಭೆ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ನಗರಸಭೆ ವ್ಯಾಪ್ತಿಯ 1, 2 ರಿಂದ 3 ಹಾಗೂ 3 ರಿಂದ 4 ವಾರ್ಡ್ಗಳು ಒಳಗೊಂಡಂತೆ ಒಟ್ಟು 12 ಲಸಿಕಾ ಕೇಂದ್ರಗಳನ್ನು ಆರಂಭಿಸಲಾಗಿದೆ.
ಲಸಿಕಾ ಕೇಂದ್ರಗಳ ಮಾಹಿತಿ ಹೀಗಿದೆ:
ವಾರ್ಡ್ ನಂ.1, 2 ಮತ್ತು 35ರ ವ್ಯಾಪ್ತಿಯ ಹೆಬ್ಬಂಡಿ, ಕಡದಕಟ್ಟೆ, ಶಿವರಾಮನಗರ, ವಿಶ್ವೇಶ್ವರಾಯ ನಗರ, ಭಂಡಾರಹಳ್ಳಿ, ಜೇಡಿಕಟ್ಟೆ, ಲಕ್ಷ್ಮೀಪುರ, ಕವಲಗುಂದಿ ಹಾಗೂ ಲೋಯರ್ ಹುತ್ತಾ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಬಿ.ಎಚ್ ರಸ್ತೆಯ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಕಡದಕಟ್ಟೆ ಎಚ್ಪಿಎಸ್ ಶಾಲೆಯ ಸಹ ಶಿಕ್ಷಕ ನಾಗೇಶ್ನಾಯ್ಕ, ನ್ಯೂಟೌನ್ ಎಸ್ಎವಿ ಶಾಲೆ ಸಹ ಶಿಕ್ಷಕ ಖಂಡೋಜಿರಾವ್, ಪದ್ಮೇನಹಳ್ಳಿ ಎಚ್ಪಿಎಸ್ ಶಾಲೆ ಸಹ ಶಿಕ್ಷಕ ಎಚ್. ತಿಮ್ಮಪ್ಪ ಹಾಗೂ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ವಾರ್ಡ್ ನಂ.28, 29 ಮತ್ತು 30ರ ವ್ಯಾಪ್ತಿಯ ಹೊಸ ಹಾಗು ಹಳೇ ಸಿದ್ದಾಪುರ, ಸಿದ್ದಾಪುರ ತಾಂಡ, ಹೊಸೂರು, ಸಂಕ್ಲಿಪುರ ಮತ್ತು ಜನ್ನಾಪುರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಜನ್ನಾಪುರ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ರಬ್ಬರ್ಕಾಡು ಜಿಎಚ್ಪಿಎಸ್ ಶಾಲೆಯ ಸಹ ಶಿಕ್ಷಕ ಶಿವಕುಮಾರ ಸ್ವಾಮಿ, ದೇವರ ನರಸೀಪುರ ಜಿಎಚ್ಪಿಎಸ್ ಶಾಲೆಯ ಸಹ ಶಿಕ್ಷಕ ದೇವೇಂದ್ರ ನಾಯ್ಕ, ಹಾಗಲಮನೆ ಜಿಎಚ್ಪಿಎಸ್ ಶಾಲೆಯ ಸಹ ಶಿಕ್ಷಕ ನಾರಾಯಣ ನಾಯ್ಕ ಹಾಗೂ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ವಾರ್ಡ್ ನಂ.20, 26 ಮತ್ತು 27ರ ವ್ಯಾಪ್ತಿಯ ಸುರಗೀತೋಪು, ಬಾಲಭಾರತಿ, ಬೆಣ್ಣೆ ಕೃಷ್ಣ ಸರ್ಕಲ್, ಆಂಜನೇಯ ಅಗ್ರಹಾರ, ಕೂಲಿ ಬ್ಲಾಕ್ ಶೆಡ್ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ನ್ಯೂಟೌನ್ ಸರ್ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಚಿಕ್ಕಗೊಪ್ಪೇನಹಳ್ಳಿ ಜಿಎಚ್ಪಿಎಸ್ ಸರ್ಕಾರಿ ಸಹ ಶಿಕ್ಷಕ ನಾಗರಾಜ ನಾಯ್ಕ, ವಿಶ್ವಭಾರತಿ ವಿದ್ಯಾಸಂಸ್ಥೆಯ ಎಚ್ಪಿಎಸ್ ಶಾಲೆಯ ಸಹ ಶಿಕ್ಷಕ ಟಿ. ಸುರೇಶ್, ಸಿದ್ದಾಪುರ ತಾಂಡ ಜಿಎಚ್ಪಿಎಸ್ ಶಾಲೆಯ ಸಹ ಶಿಕ್ಷಕ ಪುರುಷೋತ್ತಮ್ ಮತ್ತು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ವಾರ್ಡ್ ನಂ. 4, 5 ಮತ್ತು 6ರ ವ್ಯಾಪ್ತಿಯ ಕನಕಮಂಟಪ ಪ್ರದೇಶ, ಕೋಟೆ ಏರಿಯಾ, ಖಾಜಿ ಮೊಹಲ್ಲಾ, ಖಂಡೇರಾವ್ ಕೊಪ್ಪಲ್, ಸಿದ್ದಾರೂಢ ನಗರ, ಹಳದಮ್ಮ ಬೀದಿ, ಸಣ್ಣ ಮತ್ತು ದೊಡ್ಡ ಕುರುಬರ ಬೀದಿ, ಸೀಗೆಹಟ್ಟಿ, ರಥಬೀದಿ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಕನಕ ವಿದ್ಯಾಸಂಸ್ಥೆ ಎಚ್ಪಿಎಸ್ ಶಾಲೆಯ ಸಹ ಶಿಕ್ಷಕರಾದ ಎಚ್. ಶ್ರೀನಿವಾಸ್, ಇಮ್ರಾನ್ ಆಲಿ ಮತ್ತು ಗಾಂಧಿನಗರ ವಿಜಯ ಶಾಲೆಯ ಸಹ ಶಿಕ್ಷಕ ಎಚ್. ಹನುಮಂತಪ್ಪ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ವಾರ್ಡ್ ನಂ.10, 11 ಮತ್ತು 12ರ ವ್ಯಾಪ್ತಿಯ ಕಬಳಿಕಟ್ಟೆ, ಹನುಮಂತ ನಗರ, ಅಶ್ವಥ್ ನಗರ, ಸುಭಾಷ್ ನಗರ ಮತ್ತು ಅಣ್ಣಾ ನಗರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಸುಭಾಷ್ ನಗರದ ಅಕ್ಕಮಹಾದೇವಿ ವಿದ್ಯಾ ಸಂಸ್ಥೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಅರಳಿಹಳ್ಳಿ ಜ್ಞಾನೋದಯ ಶಾಲೆಯ ಸಹ ಶಿಕ್ಷಕರಾದ ಎಸ್.ಆರ್ ಸ್ವಾಮಿ, ಇ. ದಿನೇಶ್ ಮತ್ತು ಕುಮಾರಿ ನಾರಾಯಣ ಪುರ ಜಿಎಲ್ಪಿಎಸ್ ಶಾಲೆಯ ಸಹ ಶಿಕ್ಷಕ ಗದಿಗ ಸ್ವಾಮಿ ಹಾಗು ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ಶೃತಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ವಾರ್ಡ್ ನಂ.7, 8 ಮತ್ತು 9ರ ವ್ಯಾಪ್ತಿಯ ದುರ್ಗಿನಗರ, ಕಲಂದರ್ ನಗರ, ಜೈ ಭೀಮಾ ನಗರ, ಅನ್ವರ್ ಕಾಲೋನಿ, ಸೀಗೆಬಾಗಿ, ಭದ್ರಾ ಕಾಲೋನಿ ಮತ್ತು ಕಣಕಟ್ಟೆ ಪ್ರದೇಶದ ನಿವಾಸಿಗಳಿಗೆ ಅನುಕೂಲವಾಗುವಂತೆ ಸೀಗೆಬಾಗಿ ರಾಜೀವ್ಗಾಂಧಿ ಬಿ.ಎಡ್ ಕಾಲೇಜಿನಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಗುಡ್ಡದನೇರಲಕೆರೆ ಜಿಎಚ್ಪಿಎಸ್ ಶಾಲೆಯ ಸಹ ಶಿಕ್ಷಕ ಎಸ್. ಶಂಕರಪ್ಪ, ಕಡದಕಟ್ಟೆ ನವಚೇತನ ಎಚ್ಪಿಎಸ್ ಶಾಲೆಯ ಸಹ ಶಿಕ್ಷಕ ನಾಗೇಂದ್ರಪ್ಪ, ಕೆಜಿಆರ್ ಪ್ರೌಢಶಾಲೆ ಸಹ ಶಿಕ್ಷಕ ಮಂಜುನಾಥ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ವಾರ್ಡ್ ನಂ.31, 32, 33 ಮತ್ತು 34ರ ವ್ಯಾಪ್ತಿಯ ಜಿಂಕ್ಲೈನ್, ಜನ್ನಾಪುರ, ಹುತ್ತಾಕಾಲೋನಿ ಮತ್ತು ಅಪ್ಪರ್ಹುತ್ತಾ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಉಂಬ್ಳೆಬೈಲು ರಸ್ತೆಯಲ್ಲಿರುವ ಸೇಂಟ್ ಚಾರ್ಲ್ಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಹೊಸೂರು ಸಿದ್ದಾಪುರ ಜಿವಿಎಚ್ಪಿಎಸ್ ಶಾಲೆಯ ಸಹ ಶಿಕ್ಷಕರಾದ ಕೆ. ನಾಗರಾಜ, ಇಮ್ರಾನ್ ಆಲಿ, ಭಂಡಾರಹಳ್ಳಿ ಜಿಎಚ್ಪಿಎಸ್ ಶಾಲೆಯ ಸಹ ಶಿಕ್ಷಕ ರವಿಕುಮಾರ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ವಾರ್ಡ್ ನಂ. 19, 21 ಮತ್ತು 22ರ ವ್ಯಾಪ್ತಿಯ ಎಂಪಿಎಂ ಆಸ್ಪತ್ರೆ ಏರಿಯಾ, ಎಂಪಿಎಂ 6 ಮತ್ತು 8ನೇ ವಾರ್ಡ್, ಉಜ್ಜನಿಪುರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಕಾಗದ ನಗರದ ಪಶ್ಚಿಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಅರಳಿಹಳ್ಳಿ ಸರ್ಕಾರಿ ಶಾಲೆಯ ಸಹ ಶಿಕ್ಷಕ ಬಸವರಾಜಪ್ಪ, ಸುಣ್ಣದಹಳ್ಳಿ ಸರ್ಕಾರಿ ಶಾಲೆಯ ಸಹ ಶಿಕ್ಷಕ ಕಮಲರಾಜ್, ಹಳ್ಳಿಕೆರೆ ಜಿಎಚ್ಪಿಎಸ್ ಶಾಲೆಯ ಸಹ ಶಿಕ್ಷಕ ಕೆ. ನಾಗರಾಜ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ವಾರ್ಡ್ ನಂ.23, 24 ಮತ್ತು 25ರ ವ್ಯಾಪ್ತಿಯ ತಿಮ್ಲಾಪುರ, ದೊಡ್ಡಗೊಪ್ಪೇನಹಳ್ಳಿ, ಬೊಮ್ಮನಕಟ್ಟೆ, ಹುಡ್ಕೋ ಕಾಲೋನಿ, ಮೂಲೆಕಟ್ಟೆ ಮತ್ತು ಹೊಸಬುಳ್ಳಾಪುರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಬೊಮ್ಮನಕಟ್ಟೆ ಎಚ್ಪಿಎಸ್ ಶಾಲೆಯ ಸಹ ಶಿಕ್ಷಕರಾದ ಎ. ತಿಪ್ಪೇಸ್ವಾಮಿ, ಜಿ.ಸಿ ವಿಶ್ವನಾಥ್, ವಿಶ್ವ ಭಾರತಿ ಶಾಲೆಯ ಸಹ ಶಿಕ್ಷಕ ಬಿ.ಕೆ ರವೀಶ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ವಾರ್ಡ್ ನಂ.13, 17 ಮತ್ತು 18ರ ವ್ಯಾಪ್ತಿಯ ಭೂತನಗುಡಿ, ನೆಹರು ನಗರ, ಎಂ.ಎಂ ಕಾಂಪೌಂಡ್, ಯಕಿನ್ ಷಾ ಕಾಲೋನಿ, ಸುಣ್ಣದಹಳ್ಳಿ, ಸಾದತ್ ಕಾಲೋನಿ, ಬಸಾಪುರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ನಗರದ ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಸಾದತ್ ಕಾಲೋನಿ ಜಿಯುಎಲ್ಪಿಎಸ್ ಶಾಲೆಯ ಸಹ ಶಿಕ್ಷಕರಾದ ದಾದಾಪೀರ್, ಪಿ. ಶಿವಪ್ಪ, ಮೊಸರಹಳ್ಳಿ ಜಿಎಲ್ಪಿಎಸ್ ಶಾಲೆಯ ಸಹ ಶಿಕ್ಷಕ ಆರ್. ರಂಗನಾಥ್ ಮತ್ತು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ವಾರ್ಡ್ ನಂ.14, 15 ಮತ್ತು 16ರ ವ್ಯಾಪ್ತಿಯ ಭೋವಿ ಕಾಲೋನಿ, ಹೊಸಮನೆ, ಅಶ್ವಥ್ ನಗರ ಬಲಭಾಗ, ಗಾಂಧಿನಗರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಭೋವಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಹೊಸಮನೆ ಜಿಎಚ್ಪಿಎಸ್ ಶಾಲೆಯ ಸಹ ಶಿಕ್ಷಕರಾದ ಗಿರಿಧರ, ಮಂಜುನಾಥ್, ಎನ್ಎಂಸಿ ಜಿಟಿಎಚ್ಪಿಎಸ್ ಶಾಲೆಯ ಸಹ ಶಿಕ್ಷಕ ಲಾರೆನ್ಸ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ಉಳಿದಂತೆ ವಾರ್ಡ್ ನಂ.3ರ ವ್ಯಾಪ್ತಿಯ ಬಿ.ಎಚ್ ರಸ್ತೆ ಎಡ ಮತ್ತು ಬಲ ಭಾಗ, ಚಾಮೇಗೌಡ ಏರಿಯಾ ನಿವಾಸಿಗಳಿಗೆ ಅನುಕೂಲವಾಗುವಂತೆ ಹಾಲಪ್ಪ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಹಾಲಪ್ಪ ವೃತ್ತ ಜಿಎಚ್ಪಿಎಸ್ ಶಾಲೆ ಸಹ ಶಿಕ್ಷಕರಾದ ಎಸ್. ಶಿವಕುಮಾರ್, ಕೆಂಚಪ್ಪ, ಬಸವೇಶ್ವರ ವಿದ್ಯಾಸಂಸ್ಥೆ ಎಚ್ಪಿಎಸ್ ಶಾಲೆಯ ಸಹ ಶಿಕ್ಷಕ ಶಶಿಕುಮಾರ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ಲಸಿಕಾ ಕೇಂದ್ರಗಳು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿವೆ. ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ. ಲಭ್ಯತೆ ಆಧಾರ ಮೇಲೆ ಟೋಕನ್ ನೀಡಲಾಗುವುದು. ನಿಗದಿತ ದಿನಾಂಕದಂದು ಮೊದಲು ಬಂದವರಿಗೆ ಲಸಿಕೆ ಹಾಕುವುದು. ಬೇರೆ ವಾರ್ಡ್ಗಳ ನಿವಾಸಿಗಳಿಗೆ ಅವಕಾಶ ವಿರುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post