ಕಲ್ಪ ಮೀಡಿಯಾ ಹೌಸ್
ಭದ್ರಾವತಿ : ಗಂಡ ಮಾಡಿದ ಸಾಲದಿಂದ ಬೇಸತ್ತ ಮಹಿಳೆ ಮತ್ತು ಆಕೆಯ ಮಗಳು ಒಂದೇ ಸೀರೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಸುಭಾಷ್ ನಗರದಲ್ಲಿ ನಡೆದಿದೆ.
ಸುಭಾಷ್ ನಗರ ನಿವಾಸಿ ಧನಶೇಖರ್ ಎಂಬುವರ ಪತ್ನಿ ಸಂಗೀತ (40) ಹಾಗೂ 11 ವರ್ಷದ ಮಗಳು ಆತ್ಮಹತ್ಯೆಗೆ ಶರಣಾದವರು.
ಘಟನೆ ಹಿನ್ನೆಲೆ:
ಸಗಟು ವ್ಯಾಪಾರ ನಡೆಸುತ್ತಿದ್ದ ಧನಶೇಖರ್ ಕೊರೋನಾ ಹಿನ್ನೆಲೆಯಲ್ಲಿ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಸುಮಾರು 20 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲಗಾರರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದುದರ ಪರಿಣಾಮ ಬೇಸತ್ತು ಸಂಗೀತ ಮೊದಲು ತನ್ನ ಮಗಳಿಗೆ ಸೀರೆಯಲ್ಲಿ ನೇಣು ಬಿಗಿದು. ನಂತರ ಅದೇ ಸೀರೆಯಲ್ಲಿ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post