ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ VISL Factory ಕಾರ್ಯಪಾಲಕ ನಿರ್ದೇಶಕರಾಗಿ ಬಿ.ಎಲ್ ಚಂದ್ವಾನಿ ನೇಮಕಗೊಂಡಿದ್ದಾರೆ.
ಅವರು ಇಂದು ನಗರದ ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕರಾದ ಶ್ರೀನಿವಾಸನ್ ರವರು ದೇವಸ್ಥಾನದ ಚರಿತ್ರೆಯನ್ನು ಅವರಿಗೆ ತಿಳಿಸಿ, ನಂತರ ಶಾಲು ಹೊದಿಸಿ ಗೌರವಿಸಿದರು
ಈ ಸಂದರ್ಭದಲ್ಲಿ ಅಧಿಕಾರಿ ಪ್ರವೀಣ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.
ಚಂದ್ವಾನಿ ಅವರ ಪರಿಚಯ:
ಬಿ.ಎಲ್ ಚಂದ್ವಾನಿಯವರು ಮಾ.30, 1967ರಲ್ಲಿ ಭಿಲಾಯಿ ಸಮೀಪದ ಕುಟೇಲಭತದಲ್ಲಿ ಜನಿಸಿದ್ದು, ಕಮ್ಹಾರಿಯಾದ ಸರ್ಕಾರಿ ಶಾಲೆ ಮತ್ತು ದುರ್ಗಿನ ಸರ್ಕಾರಿ ವಿವಿಧೋದ್ದೇಶ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದಾರೆ. 1988ರಲ್ಲಿ ಭೋಪಾಲ್ ಮೌಲಾನಾ ಆಜಾದ್ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಬಿ.ಇ. (ಮೆಕ್ಯಾನಿಕಲ್) ಪದವಿ ಪಡೆದುಕೊಂಡಿದ್ದಾರೆ.
Also read: ಗುಜರಾತ್ ಗಲಭೆ ಪ್ರಕರಣ: ಎಸ್ಐಟಿ ವರದಿ ಎತ್ತಿಹಿಡಿದ ಸುಪ್ರೀಂ! ಪ್ರಧಾನಿ ಮೋದಿಗೆ ಕ್ಲೀನ್ಚೀಟ್
ಚಂದ್ವಾನಿಯವರು ಆರಂಭದಲ್ಲಿ ಭಿಲಾಯ್ ಸ್ಟೀಲ್ ಪ್ಲಾಂಟ್ಗೆ ಮ್ಯಾನೇಜ್ಮೆಂಟ್ ಟ್ರೈನಿ/ ಗ್ರಾಜ್ಯುಯೇಟ್ ಇಂಜಿನಿಯರ್ ಹುದ್ದೆಗೆ 1989ರಲ್ಲಿ ಸೇರಿದ್ದು, 2018ರಲ್ಲಿ ಮುಖ್ಯ ಜನರಲ್ ಮ್ಯಾನೇಜರ್ ಹುದ್ದೆಗೆ ಮುಂಬಡ್ತಿ ಹೊಂದಿದರು. ಇವರು ಭಿಲಾಯ್ ಸ್ಟೀಲ್ ಪ್ಲಾಂಟ್ನಲ್ಲಿ ಕೋಕ್ ಓವನ್, ಸ್ಟೀಲ್ ಮೇಕಿಂಗ್ ಶಾಪ್, ಮೈನ್ಸ್, ಬ್ಲಾಸ್ಟ್ ಫರ್ನೇಸ್ನ (ಮೆಕ್ಯಾನಿಕಲ್) ವಿಭಾಗ ಮತ್ತು ಅದಿರು ನಿರ್ವಹಣೆ ಸ್ಥಾವರದಲ್ಲಿ ಕೆಲಸ ಮಾಡಿದ ಹೆಚ್ಚಿನ ಅನುಭವ ಹೊಂದಿದ್ದಾರೆ. ಅಲ್ಲದೆ 2005ರಲ್ಲಿ ಇಂಗ್ಲೆಂಡ್ನಲ್ಲಿ ವಿದೇಶಿ ತರಬೇತಿ ಪಡೆದುಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post