ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಇಂದು ತಾಲೂಕಿನ ಸಮಸ್ತ ನಾಗರಿಕರು ನೆನಪಿನಲ್ಲಿಟ್ಟುಕೊಳ್ಳುವ ಒಬ್ಬ ಮಹಾನ್ ವ್ಯಕ್ತಿ ಹಾಗೂ ಭದ್ರಾವತಿ ಜನತೆಯ ಅನ್ನದಾತರಾದ ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮದಿನ. ಮುಂದಿನ ದಿನಗಳಲ್ಲಿ ಸ್ನೇಹಜೀವಿ ಬಳಗವು ಸೆ.15 ವಿಶ್ವೇಶ್ವರಯ್ಯನವರ ಜನ್ಮದಿನದಂದು ಭದ್ರಾವತಿಯ ಹಬ್ಬವಾಗಿ ಆಚರಿಸಲು ನಿರ್ಧರಿಸಿದೆ ಎಂದು ಸ್ನೇಹ ಜೀವಿ ಬಳಗದ ಉಮೇಶ್ ಹೇಳಿದ್ದಾರೆ.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ಸರ್ ಎಮ್. ವಿಶ್ವೇಶ್ವರಯ್ಯನವರ ಪುತ್ಥಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಭದ್ರಾವತಿಯ ಜನತೆಗೆ ವಿಶ್ವೇಶ್ವರಯ್ಯ ಅವರು ನೀಡಿರುವ ಕೊಡುಗೆ ಅಪಾರ. ಈ ವಿಚಾರವನ್ನು ಸಮಸ್ತ ನಾಗರಿಕರು ಅಂದರೆ ಕೂಲಿ ಕಾರ್ಮಿಕರು ರೈತಾಪಿ ಜನ ಚಾಲಕರು ವ್ಯಾಪಾರಸ್ಥರು, ಮುಖ್ಯವಾಗಿ ಕಾರ್ಮಿಕರು ಹಾಗೂ ಅವರ ಮಕ್ಕಳು ಎಂದಿಗೂ ಮರೆಯಲಾಗದು ಎಂದಿದ್ದಾರೆ.
ಆದರೆ ಇಂದು ಕೆಲವು ಆಟೋ ಚಾಲಕರು ಮಾತ್ರ ಅಲ್ಲಿ ಇಲ್ಲಿ ಈ ಮಹಾನ್ ವ್ಯಕ್ತಿಯನ್ನು ಪೂಜಿಸಿರುತ್ತಾರೆ. ಹೊರತು ಆ ಮಹಾನ್ ವ್ಯಕ್ತಿಯನ್ನು ಮರೆತಿರುವ ನಾವೆಲ್ಲರೂ ದುರದೃಷ್ಟರು ಎಂದು ಹೇಳಿದ್ದಾರೆ.
ನಮ್ಮ ಭದ್ರಾವತಿ ಆಳುವ ನಾಯಕರುಗಳು ಚುನಾವಣೆ ಬಂತು ಎಂದರೆ ಭದ್ರಾವತಿಯ ಎಲ್ಲಾ ಕಡೆ ಕಾಣಿಸಿಕೊಳ್ಳುವ ನಾಯಕರುಗಳು ಇಂದು ಎಲ್ಲಿದ್ದಾರೆ? ಇಂಥಹ ಮಹಾನ್ ವ್ಯಕ್ತಿಯನ್ನು ನಮ್ಮ ಊರಿನ ನಾಯಕರೇ ಮರೆತಿರುವಾಗ ಇನ್ನೂ ಜನ ಸಾಮಾನ್ಯರು ಹೇಗೆ ನೆನೆದುಕೊಳ್ಳುತ್ತಾರೆ ಎಂದಿದ್ದಾರೆ.
ಸ್ನೇಹ ಜೀವಿ ಬಳಗದ ಅಧ್ಯಕ್ಷರಾಗಿದ್ದ ಎಸ್. ಸತೀಶ್ ಅವರ ಅಕಾಲಿಕ ಮರಣದ ನೋವು ಮಾಸದೆ ಇದ್ದ ಕಾರಣ ಈ ಬಾರಿ ಸ್ನೇಹಜೀವಿ ಬಳಗದ ವತಿಯಿಂದ ಈ ಮಹಾನ್ ವ್ಯಕ್ತಿ, ಅನ್ನದಾತನ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಸ್ನೇಹಜೀವಿ ಬಳಗವು ಈ ಸೆ.15 ವಿಶ್ವೇಶ್ವರಯ್ಯನವರ ಜನ್ಮದಿನದಂದು ಭದ್ರಾವತಿಯ ಹಬ್ಬವಾಗಿ ಆಚರಿಸಲು ನಿರ್ಧರಿಸಿದ್ದು, ಇದಕ್ಕೆ ಭದ್ರಾವತಿಯ ಎಲ್ಲಾ ನಾಗರಿಕರು ಜಾತಿ ಧರ್ಮ ಪಕ್ಷಗಳನ್ನು ಮರೆತು ಎಲ್ಲರೂ ಕೈಜೋಡಿಸಿ ವಿಶ್ವೇಶ್ವರಯ್ಯನವರ ಹುಟ್ಟುಹಬ್ಬವನ್ನು ಒಗ್ಗಟ್ಟಾಗಿ ಆಚರಿಸೋಣ ಎಂದು ಸ್ನೇಹಜೀವಿ ಬಳಗ ಉಮೇಶ್ ವಿನಂತಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post