ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ಲಾಕ್ ಡೌನ್’ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಮಾಚೇನಹಳ್ಳಿಯ ಟಿಎಂಇಎ ಆಯುರ್ವೇದ ಕಾಲೇಜು ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.
ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಪಟ್ಟಾಧ್ಯಕ್ಷರಾಗಿರುವ ಶ್ರೀವರ ಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳ ಇಪ್ಪತ್ತೇಳನೆಯ ಜನ್ಮದಿನವನ್ನು ಈ ರೀತಿ ವಿಶಿಷ್ಟವಾಗಿ ಆಚರಿಸಲಾಯಿತು.
ಕಾಲೇಜಿನ ಆಡಳಿತಾಧಿಕಾರಿ ಶ್ರೀ ಜಿ.ವಿ.ಹಿರೇಮಠ್ ಅವರು ಕಿಟ್’ಗಳನ್ನು ವಿತರಿಸಿದರು. ನೂರು ಮಂದಿ ಸಂತ್ರಸ್ತರಿಗೆ ಪ್ರಸ್ತುತ ದಿನಸಿ ಕಿಟ್’ಗಳನ್ನು ನೀಡನ್ನುನ್ನ ಕಾಡುತ್ತಿರುವ ಕೊರೋನಾ ವ್ಯಾಧಿಯು ಬೇಗ ದೂರವಾಗಲಿ ಎಂಬ ಆಶಯವನ್ನು ಮಹಾಸ್ವಾಮಿಗಳು ಸಂದೇಶ ಮೂಲಕ ತಿಳಿಸಿದ್ದಾರೆ.
ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಶಾಂತ್ ಅವರೂ ಕೂಡ ಮಹಾಸ್ವಾಮಿಗಳ ಆಶಯದಂತೆ ಜನ್ಮದಿನವನ್ನು ಅದ್ಧೂರಿ ಬದಲು ಸಂತ್ರಸ್ತರಿಗೆ ನೆರವು ನೀಡುವ ಕಾರ್ಯಕ್ರಮವಾಗಿ ಮಾಡಲಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ ಸ್ವಾಮೀಜಿಯವರ ಜನ್ಮದಿನವನ್ನು ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದರೆ, ಈ ಬಾರಿ ಕೊರೋನಾ ವೈರಸ್’ನಿಂದ ದೇಶ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ಸ್ವಾಮೀಜಿಯವರು ಆಶಯದಂತೆ ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಸಾಮಾಜಿಕ ಕಳಕಳಿಯ ಕಾರ್ಯ ಮಾಡಿ, ಇದೇ ಭಗವಂತನ ಸೇವೆ ಎಂದು ಆಚರಿಸಿರುವುದು ನಿಜಕ್ಕೂ ಇಡಿಯ ಸಮಾಜಕ್ಕೆ ಮಾದರಿಯಾಗಿದೆ.
Get in Touch With Us info@kalpa.news Whatsapp: 9481252093
Discussion about this post