ಭದ್ರಾವತಿ: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿ ನೆನಪಿನ ಹಿನ್ನಲೆಯಲ್ಲಿ ನಗರದಲ್ಲಿ ಯುವಾ ಬ್ರಿಗೇಡ್ ನೂರಾರು ಕಾರ್ಯಕರ್ತರು ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ನಡೆಸಿ ಸಂಭ್ರಮಿಸಿದರು.
ಬ್ರಿಗೇಡ್ ಕಾರ್ಯಕರ್ತರ ಶೋಭಾಯಾತ್ರೆಯು ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಬೃಹತ್ ಮೆರವಣಿಗೆ ಹೊರಟು ಮುಖ್ಯ ಬಸ್ನಿಲ್ದಾಣ, ಡಾ.ಅಂಬೇಡ್ಕರ್ ವೃತ್ತ, ಹಾಲಪ್ಪವೃತ್ತ, ಡಾ.ರಾಜಕುಮಾರ್ ರಸ್ತೆ, ಮಾಧವಚಾರ್ ವೃತ್ತದ ಮೂಲಕ ರಂಗಪ್ಪ ವೃತ್ತ ತಲುಪಿತು. ರಸ್ತೆಯ ಉದ್ದಕ್ಕೂ ಅಭಿಮಾನಿಗಳು ಪುಷ್ಪವೃಷ್ಟಿ ಮಾಡುವ ಮೂಲಕ ವಿಶೇಷತೆ ಮೆರೆದರು.
ಯುವ ಬ್ರಿಗೇಡ್ ಮುಖ್ಯಸ್ಥ ಭಾನುಪ್ರಕಾಶ್ ಆಚಾರ್ಯ ಯಾತ್ರೆಯ ನೇತೃತ್ವ ವಹಿಸಿದ್ದರು. ಎಬಿವಿಪಿಯ ಮನು, ಧನುಷ್, ಹಿಂದೂ ಪಡೆಯ ಸುಪ್ರೀತ್, ರಾಮಸೇನೆಯ ಉಮೇಶ್, ವಿಶ್ವ ಹಿಂದೂ ಪರಿಷತ್ ಹಾ.ರಾಮಪ್ಪ, ಬಿಜೆಪಿ ನಗರಾಧ್ಯಕ್ಷ ಜಿ. ಆನಂದಕುಮಾರ್, ಗ್ರಾಮಾಂತರ ಅಧ್ಯಕ್ಷ ಮಂಗೋಟೆ ರುದ್ರೇಶ್ ಮುಖಂಡರಾದ ಧರ್ಮಪ್ರಸಾದ್, ಸತೀಶ್, ಐತಾಳ್, ಸುನಿಲ್, ಪತಾಂಜಲಿ ಯೋಗ ಸಮಿತಿಯ ಅನ್ನಪೂರ್ಣಸತೀಶ್ ಸೇರಿದಂತೆ ನಗರದ ವಿವಿಧ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ನಂತರ ರಂಗಪ್ಪವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗಿದ್ದ ಹೂವಿನ ರಾಶಿಯನ್ನು ಕಾರ್ಯಕರ್ತರು ಸ್ವಚ್ಚ ಗೊಳಿಸಿದ್ದು, ಮಾದರಿಯಾಗಿತ್ತು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post