ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಶಿವಮೊಗ್ಗದಲ್ಲಿ ಜೂಜು ಅಡ್ಡೆ ಮೇಲೆ ದಾಳಿ ನಡೆದ ಬೆನ್ನಲ್ಲೇ ನಗರದ ಜೂಜು ಹಾಗೂ ಓಸಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರನ್ನು ಬಂಧಿಸಲಾಗಿದೆ.
ಜುಲೈ 20ರ ನಿನ್ನೆ ಮೂರು ಪ್ರತ್ಯೇಕ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ವಿಜಯನಗರ ರಸ್ತೆ ಬಳಿಯಲ್ಲಿ ಓಸಿ ಅಡ್ಡೆ ಮೇಲೆ ದಾಳಿ ಹೊಸಮನೆ ಪೊಲೀಸರು ದಾಳಿ ನಡೆಸಿ ಪ್ರವೀಣ್ ಕೊಂಡಿ(37) ಎಂಬಾತನನ್ನು ಬಂಧಿಸಿ, ರೂ. 4050 ಹಣ ವಶಪಡಿಸಿಕೊಂಡು ಓಸಿ ಚೀಟಿ ಹಾಗೂ ಬಾಲ್ ಪೆನ್ ವಶಕ್ಕೆ ಪಡೆಯಲಾಗಿದೆ.
ಇನ್ನು, ಮಾರ್ಕೆಟ್ ಬಳಿಯಿರುವ ಆಟೋ ಸ್ಟಾಂಡ್ ಹತ್ತಿರ ಓಲ್ಡ್ ಟೌನ್ ಪೊಲೀಸರು ದಾಳಿ ನಡೆಸಿದ್ದು, ಜಗದೀಶ್ ದೊಡ್ಡ(40) ಎಂಬ ಆರೋಪಿಯನ್ನು ಬಂಧಿಸಿ, ರೂ 4,320/- ನಗದು, ಓಸಿ ಚೀಟಿ ಹಾಗೂ ಬಾಲ್ ಪೆನ್ ವಶಕ್ಕೆ ಪಡೆಯಲಾಗಿದೆ.
ಕೂಲಿ ಬ್ಲಾಕ್ ಶೆಡ್’ನಲ್ಲಿ ನ್ಯೂಟೌನ್ ಪೊಲೀಸರು ದಾಳಿ ನಡೆಸಿದ್ದು, ಬಾಬು ಬಾಂಡ್ಲಿ(55) ಹಾಗೂ ವೆಂಕಟೇಶ್(38) ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಿಂದ ರೂ 12,150/- ನಗದು, ಓಸಿ ಚೀಟಿ ಹಾಗೂ ಬಾಲ್ ಪೆನ್ ವಶಕ್ಕೆ ಪಡೆಯಲಾಗಿದೆ.
Get In Touch With Us info@kalpa.news Whatsapp: 9481252093
Discussion about this post