ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕು ಕಚೇರಿಯಲ್ಲಿ ಇಂದು ಸರ್ಕಾರದ ವತಿಯಿಂದ ಶ್ರೀ ಶಂಕರಾಚಾರ್ಯರ ಜಯಂತಿ Shri Shankaracharya Jayanthi ಉತ್ಸವವನ್ನು ಆಚರಿಸಲಾಯಿತು
ಶಂಕರಾಚಾರ್ಯರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾನತಾಡಿದ ತಹಶೀಲ್ದಾರ್ ಅವರು, ಸರ್ಕಾರದ ವತಿಯಿಂದ ಶಂಕರಾಚಾರ್ಯರ ಜಯಂತಿ ಆಚರಿಸಲು ನಿರ್ಧರಿಸಿದ್ದರು ಅದರಂತೆ ಈ ದಿನ ತಾಲೂಕು ಕಚೇರಿಯಲ್ಲಿ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರ್ಚಕರಾದ ಕೃಷ್ಣಮೂರ್ತಿ ಸೋಮಯಾಜಿ ಶಂಕರಾಚಾರ್ಯರ ಬಗ್ಗೆ ಉಪನ್ಯಾಸ ನೀಡಿದರು. ಅರ್ಚಕರಾದ ಶ್ರೀಮುರಳಿ ಭಟ್, ನಾಗರಾಜ್ ಭಟ್, ವಿಪ್ರ ಸಮಾಜದ ಅಧ್ಯಕ್ಷ ಜನಾರ್ಧನ ಅಯ್ಯಂಗಾರ್ ಹಾಗು ನರಸಿಂಹಾಚಾರ್ ಉಪಸ್ಥಿತರಿದ್ದರು.
Also read: ಮುಕ್ತಿ ಮಂದಿರ ಕಟ್ಟಿಸಲು ಜಾಗ ಮಂಜೂರು ಮಾಡಿ: ಪಾಲಿಕೆ ಮೇಯರ್ಗೆ ಮನವಿ
ಕಾರ್ಯಕ್ರಮದ ಕೊನೆಯಲ್ಲಿ ರಮಕಾಂತ್ ಅವರು ತಾಲ್ಲೂಕು ಆಡಳಿತ ವರ್ಗಕ್ಕೆ ಹಾಗೂ ಸರ್ಕಾರಕ್ಕೆ ಶಂಕರಜಯಂತಿ ಆಚರಿಸುವುದರಿಂದ ಅಭಿನಂದನೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post