ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸಮಾಜದ ಪ್ರಗತಿಗೆ ಪ್ರಯೋಜನಕಾರಿಯಾದ ಕಾರ್ಯಗಳಿಗೆ ವಿಐಎಸ್’ಎಲ್ VISL ಸದಾ ಸಕ್ರಿಯವಾಗಿ ಭಾಗಿಯಾಗುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಎಲ್. ಚಂದ್ವಾನಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಅಂಗವಿಕಲರ ದಿನಾಚರಣೆ ಅಂಗವಾಗಿ ವಿಶೇಷಚೇತನರಿಗೆ ಸೈಲ್-ವಿಐಎಸ್ಎಲ್ ಕೊಡುಗೆಯ ಭಾಗವಾಗಿ, ತರಂಗ ಶಾಲೆಯ ವಿದ್ಯಾರ್ಥಿಗಳಿಗೆ ಅಂದಾಜು ರೂ.1.5 ಲಕ್ಷ ವೆಚ್ಚದ 22 ಜೋಡಿ ಶ್ರವಣ ಸಾಧನಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ಸಮಾಜದ ಪ್ರಗತಿಗೆ ಪ್ರಯೋಜನಕಾರಿಯಾದ ಮತ್ತು ವಿಶೇಷಚೇತನರ ಸಬಲೀಕರಣ ನೀಡುವ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ ಎಂದರು.
ವಿಶೇಷಚೇತನರ ಕೌಶಲ್ಯಾಭಿವೃದ್ದಿಯ ಮೂಲಕ ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಮೂಲಕ ಅವರನ್ನು ಸಾಮಾನ್ಯ ಸಮಾಜಕ್ಕೆ ಒಪ್ಪಿಸುವಂತೆ ಮಾಡುವಲ್ಲಿ ತರಂಗ ಶಾಲೆ, ಸಿಬ್ಬಂದಿ ಮತ್ತು ಟ್ರಸ್ಟ್ ಸದಸ್ಯರು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು.
ವಿಐಎಸ್’ಎಲ್ ಸಹಾಯಕ ಪ್ರಬಂಧಕರಾದ (ಸಿಬ್ಬಂದಿ) ಕೆ.ಎಸ್. ಶೋಭಾ ಮಾತನಾಡಿ, 2021-22 ಮತ್ತು ಪ್ರಸಕ್ತ ವರ್ಷ 2022-23 ಸಾಲಿನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸೈಲ್-ವಿಐಎಸ್ಎಲ್ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ಅಡಿಯಲ್ಲಿ ಕೈಗೊಂಡ ಚಟುವಟಿಕೆಗಳ ಬಗ್ಗೆ ಹಾಗೂ ವಿಶೇಷಚೇತನರ ಉನ್ನತಿಗೆ ಸೈಲ್ ಕೊಡುಗೆಗಳ ಅಂಗವಾಗಿ ದೇಶದಾದ್ಯಂತ ಸೈಲ್ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ವೈಯಕ್ತಿಕವಾಗಿ ಶ್ರೀಮತಿ ದುಲಾರಿ ಚಾಂದ್ವಾನಿರವರು ದವಸ ಧಾನ್ಯಗಳನ್ನು ಶೇಖರಿಸಿ ಇಡುವ ನಾಲ್ಕು ಲೋಹದ ಕಂಟೈನರುಗಳ ಕೊಡುಗೆ ನೀಡಿದರು. ಮುಖ್ಯ ಮಹಾಪ್ರವಬಂಧಕರಾದ(ಸ್ಥಾವರ) ಕೆ.ಎಸ್. ಸುರೇಶ್, ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ.ಜಿ. ರಾಜು, ಶಿವಭದ್ರ ಟ್ರಸ್ಟ್ ಅಧ್ಯಕ್ಷ ಡಾ. ಟಿ. ನರೇಂದ್ರ ಭಟ್, ತರಂಗ ಶಾಲಾ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಅನಂತಕೃಷ್ಣ ನಾಯಕ್ ಇದ್ದರು.
ಆಲ್ ಇಂಡಿಯಾ ಲಿಂಬ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ ಪ್ರತಿನಿಧಿ ಇರ್ಫಾನಾ, ಆಡಿಯೋಲಾಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ ಅವರು ವಿಶೇಷವಾಗಿ ಶ್ರವಣ ಸಾಧನಗಳ ತಾಂತ್ರಿಕ ಕಾರ್ಯಕ್ಷಮತೆಯನ್ನು ಖಚಿತಪಡಿಸಿದರು.
ಶಿಕ್ಷಕ ಆರ್. ವೀಣಾ ಪ್ರಾರ್ಥಿಸಿ, ಡಾ. ನರೇಂದ್ರ ಭಟ್ ಸ್ವಾಗತಿಸಿದರು. ಡಾ.ಆರ್. ನಟರಾಜ್ ಧನ್ಯವಾದಗಳನ್ನು ಅರ್ಪಿಸಿದರು. ತರಂಗ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಎಲ್. ತಾರಾಮಣಿ, ಶಿವಭದ್ರ ಟ್ರಸ್ಟ್ನ ಕಾರ್ಯದರ್ಶಿ ಶುಭಾಷ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post