ಭದ್ರಾವತಿ: ದಾಖಲೆಯಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.2 ಲಕ್ಷ ರೂ. ಹಣವನ್ನು ತಾಲೂಕಿನ ಬಿಆರ್’ಪಿ ಚೆಕ್’ಪೋಸ್ಟ್’ನಲ್ಲಿ ವಶಕ್ಕೆ ಪಡೆಯಲಾಗಿದೆ.
ಇಂದು ಸಂಜೆ ಬಿಆರ್’ಪಿ ಕಡೆಯಿಂದ ಲಕ್ಕವಳ್ಳಿ ಕಡೆಗೆ ತೆರಳುತ್ತಿದ್ದ ಕಾರನ್ನು ಚುನಾವಣಾ ಚೆಕ್’ಪೋಸ್ಟ್ ಅಧಿಕಾರಿ ಶಿವಶಂಕರ್ ನೇತೃತ್ವದ ತಂಡ ತಪಾಸಣೆ ನಡೆಸಿದೆ. ಈ ವೇಳೆ 2 ಲಕ್ಷ ರೂ. ನಗದು ದೊರೆತಿದ್ದು, ಇದಕ್ಕೆ ಯಾವುದೇ ದಾಖಲೆಯಿಲ್ಲ ಎನ್ನಲಾಗಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬಸವನ ಗೌಡ ಎನ್ನುವವರು ಈ ಹಣವನ್ನು ಸಾಗಿಸುತ್ತಿದ್ದರು. ತಪಾಸಣೆ ವೇಳೆ ತಾವು ನೀರಾವರಿ ಇಲಾಖೆಯ ಗುತ್ತಿಗೆಯವರಾಗಿದ್ದು ಕಾರ್ಮಿಕರಿಗೆ ವೇತನ ಪಾವತಿ ಮಾಡುವ ಸಲುವಾಗಿ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಸೂಕ್ತ ದಾಖಲೆಯ ಇಲ್ಲದ ಕಾರಣ ಹಣವನ್ನು ಜಪ್ತಿ ಮಾಡಿ, ತಾಲೂಕು ಖಜಾನೆಗೆ ಒಪ್ಪಿಸಲಾಗಿದೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post