Saturday, June 14, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಭಕ್ತರ ಜಿಹ್ವೆಯೊಳೆಂದಿಗೂ ಅಕ್ರೂರವರದೋ ಕೃಷ್ಣ

September 2, 2018
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 3 minutes

ಅದು ಸಿಂಹ ಮಾಸದ ಬಹುಳ ಅಷ್ಟಮಿ. ಮಧ್ಯರಾತ್ರೆಯ ಸಮಯವದು. ಯದುವಂಶದ ವಸುದೇವನು ತನ್ನೆರಡು ಕೈಗಳನ್ನು ತಲೆಯ ಮೇಲಿಟ್ಟು ಸೆರೆಮನೆಯ ಒಂದು ಮೂಲೆಯಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದ. ಪ್ರಸವ ವೇದನೆಯಲ್ಲಿದ್ದ ಪತ್ನಿ ದೇವಕಿಯನ್ನು ಸಾಂತ್ವನ ಮಾಡುವುದೋ, ಮುಂಬರುವ ದುರಂತಗಳನ್ನು ನೋಡುವುದೋ ಎಂಬ ಚಿಂತೆ. ಸೂಲಗಿತ್ತಿಯು ದೇವಕಿಯ ಸುಖ ಪ್ರಸವಕ್ಕೆ ಶುಶ್ರೂಶೆ ನೀಡುತ್ತಿದ್ದಳು.

ಚಂದ್ರೋದಯವಾಗುತ್ತಲೇ ನಗುತ್ತಾ ಭಗವಂತನು ಧರೆಗಿಳಿದ. ದೇವತೆಗಳು ಪುಷ್ಪ ವೃಷ್ಟಿ ಮಾಡಿದರು. ವಸುದೇವನು ಭಗವಂತನ ಮುಖ ನೋಡಲೂ ಇಚ್ಚಿಸಲಿಲ್ಲ. ಇದಕ್ಕೆ ಕಾರಣವೂ ಇದೆ. ದೇವಕಿಯ ಅಷ್ಟಮ ಗರ್ಭದಲ್ಲಿ ಜನಿಸುವ ಸುತನಿಂದ ಅವಳ ಸಹೋದರ ಕಂಸನಿಗೆ ಮರಣ ಎಂದು ವಸುದೇವ ದೇವಕಿಯರ ವಿವಾಹದಂದೇ ಅಶರೀರವಾಣಿಯಾಗಿತ್ತು. ಹಸೆಮಣೆಯಿಂದ ಮಧುಚಂದ್ರಕ್ಕೆ ಹೋಗಬೇಕಾದ ಈ ದಂಪತಿಗಳು ಸೇರಿದ್ದು ಸೆರೆಮನೆಗೆ.

ಮೊದಲ ಏಳು ಮಕ್ಕಳು ಕಂಸನ ಖಡ್ಗಕ್ಕೆ ಬಲಿಯಾಗಿದ್ದುದನ್ನು ಕಣ್ಣಾರೆ ಕಂಡ ವಸುದೇವನಿಗೆ ಈ ಸಲದ ಮಗುವಿನ ಮುಖ ನೋಡಲೂ ಮನಸ್ಸಿರಲಿಲ್ಲ. ಸೂಲಗಿತ್ತಿ ಕೂಗಿ ಹೇಳುತ್ತಿದ್ದಳು. ‘ಪ್ರಭೂ ನೀಲವರ್ಣದ ಮಗು ಭಗವಂತನ ಅವತಾರವೇ ಆಗಿದೆ. ಜಗದ ಕಕ್ಷೆಗೆ ಪ್ರವೇಶಿಸುತ್ತಿದ್ದಂತೆ ಅಳುತ್ತಿರುವ ಕಂದಮ್ಮಗಳನ್ನು ಈ ವರೆಗೆ ನೋಡಿದ್ದೇನೆಯೇ ಹೊರತು, ಈ ತರಹ ಕಿಲಕಿಲ ನಗುವ ಕಂದನನು ನಾ ನೋಡಿಲ್ಲ ಪ್ರಭೂ’ ಎಂದು ಸೂಲಗಿತ್ತಿ ಹೇಳುತ್ತಿದ್ದುದು ವಸುದೇವನನ್ನು ಶೂಲದಿಂದ ತಿವಿದ ಹಾಗುತ್ತಿತ್ತು. ಎಷ್ಟಾದರೇನು? ಕಂಸನ ಖಡ್ಗಕ್ಕೆ ಆಹುತಿಯಾಗುವವನಲ್ಲವೇ ಎಂದು ಮನದೊಳಗೆ ಮರುಗುತ್ತಿದ್ದ ವಸುದೇವ. ಆದರೆ ದೈವಪ್ರೇರಣೆಯೇ ಬೇರೆ.

ಸೆರೆಮನೆಯ ಬಾಗಿಲ ಬೀಗ ಕಳಚಿಕೊಂಡಿತು. ದ್ವಾರ ತೆರೆದುಕೊಂಡಿತು. ದೂತನೋರ್ವ ಬಂದು ವಸುದೇವರನ್ನು ಕುಲುಕುತ್ತಾ,’ ಬೇಗನೆ ಹೊರಡಿ ಪ್ರಭೂ. ಮಗುವನ್ನು ತೊಟ್ಟಿಲೊಳಗಿಟ್ಟು ಮಗುವಿನೊಂದಿಗೆ ಬೇಗನೆ ಇಲ್ಲಿಂದ ಹೊರಡಿ. ದಾರಿಯುದ್ದಕ್ಕೂ ಮುಂದಿನ ಪಯಣದ ಮಾರ್ಗದರ್ಶನ ಲಭಿಸಲಿದೆ. ಹೂಂ ಬೇಗನೆ ಹೊರಡಿ ಎಂದು ದೂತನು ಅಲ್ಲಿಂದ ಮಾಯವಾದ.

ವಸುದೇವನು ದೂತವಾಕ್ಯವನ್ನು ವಿಮರ್ಷೆ ಮಾಡದೆ ದೇವಕಿಗೂ ಹೇಳದೆ ಮಗುವಿನೊಡನೆ ಹೊರಟೇ ಬಿಟ್ಟ. ಯಮುನೆಯು ಸೀಳಾಗಿ ಪರಮಾತ್ಮನಿಗೆ ದಾರಿಮಾಡಿಕೊಟ್ಟಳು. ಕೆಲವು ಜಾವದೊಳಗೆ ನಂದಗೋಕುಲವನ್ನು ಸೇರಿದ. ಅಲ್ಲಿಯೂ ವ್ಯವಸ್ಥಿತ ಕಾರ್ಯಕ್ಕೆ ದೂತರಿದ್ದರು. ಆಗತಾನೇ ಪ್ರಸವಿಸಿದ್ದ ಯಶೋಧೆಯ ಪಕ್ಕದಲ್ಲಿದ್ದ ಹೆಣ್ಣು ಶಿಶುವನ್ನು ಎತ್ತಿ, ವಸುದೇವ ತಂದಿದ್ದ ಭಗವಂತನನ್ನು ಅಲ್ಲಿಟ್ಟರು. ಮತ್ತೆ ಕೆಲ ಸಮಯದ ಬಳಿಕ ವಸುದೇವನು ಸೆರೆಮನೆಗೆ ತಲುಪಿದ ಮುದ್ದು ಮೊಗದ ಹೆಣ್ಣು ಮಗುವಿನೊಡನೆ. ಇದು ಒಂದು ರಾತ್ರಿಯ ಅನಿರೀಕ್ಷಿತ ಕೆಲ ವಸುದೇವನದ್ದಾಯಿತು. ಯಾಕೆ ಏನು ಎತ್ತ ಎಂದು ಪ್ರಶ್ನಿಸುವ ಗೋಜಿಗೆ ಹೋಗದೆ, ಸಂದೇಶದಿಂದ ಸಂದೇಶದ ಮೂಲಕ ಭಗವಂತನ ಸ್ಥಾನ ಪಲ್ಲಟವಾಯಿತು.

ಇದು ರಾಜಕೀಯ ತಂತ್ರಗಾರಿಕೆ. ಭಗವಾನ್ ವೇದವ್ಯಾಸರು ಕಂಸನ ಮಂತ್ರಿ ಹರಿಭಕ್ತ ಅಕ್ರೂರನಿಗೆ,’ ಭಕ್ತಾ, ನಿನಗೊಂದು ದೇವ ಕಾರ್ಯ ಒಪ್ಪಿಸುತ್ತೇನೆ. ಧರ್ಮಸಂಸ್ಥಾಪನೆಗಾಗಿ ಮತ್ತೆ ಭಗವಂತನು ಶ್ರಾವಣ ಶುಕ್ಲದ ಅಷ್ಟಮಿಯ ದಿನ ರೋಹಿಣೀ ನಕ್ಷತ್ರದಲ್ಲಿ ಮಧ್ಯರಾತ್ರಿಯಲ್ಲಿ ದೇವಕಿಯ ಗರ್ಭದಿಂದ ಅವತರಿಸಲಿದ್ದಾನೆ. ಅವನನ್ನು ನೀನು ರಕ್ಷಿಸಿಕೊಂಡರೆ ಧರ್ಮೋ ರಕ್ಷತಿ ರಕ್ಷಿತಃ ಆಗುತ್ತದೆ’ ಎಂದರು.

ಅಕ್ರೂರನಿಗಾದ ಆನಂದ ಅಷ್ಟಿಷ್ಟಲ್ಲ. ನಮ್ಮನ್ನು ರಕ್ಷಿಸುವ ಭಗವಂತನನ್ನೇ ನಾನು ರಕ್ಷಣೆ ಮಾಡಬೇಕಾದರೆ ನನ್ನಂತಹ ಪುಣ್ಯ ಜೀವಿ ಇನ್ಯಾರಿದ್ದಾರೆ ಮಹರ್ಷಿಗಳೇ? ನಮೋನ್ನಮಃ’ ಎಂದು ದೇವರ ಕಾರ್ಯಕ್ಕೆ ಅಂದಿನಿಂದಲೇ ಸಂಕಲ್ಪ ಮಾಡಿದ. ಭಗವಂತನ ಅವತಾರವಾಗುತ್ತಲೇ ಸೆರೆಮನೆಯ ಸಕಲ ಸಿಬಂಧಿಗಳಿಗೂ ಮತ್ತು ಬರಿಸುವ ಪಾನೀಯ ವಿತರಿಸಿ, ಗಾಢ ನಿದ್ರೆಗೆ ಕಳುಹಿಸಿದ. ತನ್ನಾಪ್ತ ಸೇವಕರ ಮೂಲಕ ಭಗವಂತನನ್ನು ಮಧುರೆಯಿಂದ ನಂದಗೋಕುಲ ತಲುಪುವಂತೆಯೂ ಮಾಡಿದ. ಅಲ್ಲಿದ್ದ ದುರ್ಗಾಮಾತೆಯನ್ನು ಮಧುರೆಯ ಸೆರೆಮನೆಯಲ್ಲಿ ಇರಿಸುವಂತೆಯೂ ಮಾಡಿದ್ದ ಅಕ್ರೂರ.

ಕಂಸನ ಪ್ರವೇಶ ಸೆರೆಮನೆಯೊಳಗಾಯ್ತು. ಮಗುವನ್ನೆತ್ತಿ ನೋಡಿದ. ಅರೆ ಹೆಣ್ಣು? ಏನೇ ಇರಲಿ ಇದನ್ನು ಉಳಿಸುವುದು ಸರಿಯಲ್ಲ ಎಂದು ತನ್ನ ಖಡ್ಗ ಝಳಪಿಸಿ ತರಿದ. ಮೊದಲೇ ಅವಳು ದುರ್ಗೆ. ದುರ್ಗಾ ಎಂದರೆ ಕೋಟೆ, ಕೋಶ ಎಂಬ ಅರ್ಥಕ್ಕೆ ತಕ್ಕಂತೆ ನಡೆದಳು. ಕಂಸನ ಎದೆಗೆ ತುಳಿದು ಛಂಗನೆ ಅಲ್ಲಿಂದ ಹಾರಿ ಮಾಯವಾಗಿಬಿಟ್ಟಳು! ಭಗವಂತ ನಂದಗೋಕುಲದಲ್ಲಿ ಬೆಳೆದ. ಅಕ್ರೂರನ ನಿಷ್ಟೆಯು ಪರಮಾತ್ಮನಿಗೆ ಇಷ್ಟವಾಗಿ ಅಕ್ರೂರವರದೋ ಕೃಷ್ಣ ಎಂದು ಭಗವಂತನೊಳು ಐಕ್ಯವಾಯ್ತು.

ಭಕ್ತರ ಜಿಹ್ವೆಯಲ್ಲೂ ಇಂದಿಗೂ ಅಕ್ರೂರ ಸಹಿತ ಕೃಷ್ಣನ ಸ್ತೋತ್ರ ನುಲಿಯುತ್ತಿದೆ. ಅದರಂತೆ ಭಗವಂತನ ಈ ಕೃಷ್ಣಾವತಾರವು ಕೇವಲ ನಮ್ಮ ದೈನಂದಿನ ಜೀವನಕ್ಕೆ ದಾರಿತೋರುವ ಭಗವದ್ಗೀತೆಯ ಅಮೋಘ ಸಂದೇಶಕ್ಕಾಗಿಯೋ ಏನೋ ಇರಬಹುದು. ಒಂದು ಸತ್ಸಂದೇಶದ ಹಿಂದೆ ದೊಡ್ಡ ಪ್ರಮಾಣದ ಒಂದು ಕಥೆಯಡಗಿರುವುದನ್ನು ಮಹಾಭಾರತವು ತೋರಿಸಿದೆಯಲ್ಲವೇ?

॥ ಕೃಷ್ಣಾರ್ಪಣ ಮಸ್ತು ॥

-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Bhagawan VedavyasaKamsaKrishna Janmashtami 2018Lord Sri KrishnaPrakash AmmannayaSri Krishna
Previous Post

Hands on: Samsung Galaxy A5 2017 review

Next Post

ವೀಡಿಯೋ: ಶಿವಮೊಗ್ಗದ ಐತಿಹಾಸಿಕ ತುಂಗಾರತಿಯ ಗೀತಚಿತ್ರ ಮನದುಂಬಿಕೊಳ್ಳಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ವೀಡಿಯೋ: ಶಿವಮೊಗ್ಗದ ಐತಿಹಾಸಿಕ ತುಂಗಾರತಿಯ ಗೀತಚಿತ್ರ ಮನದುಂಬಿಕೊಳ್ಳಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸಧೃಡ ಭಾರತದ ನಿರ್ಮಾಣಕ್ಕೆ ನ್ಯಾಯಯುತ ಸಂಪನ್ಮೂಲ ಹಂಚಿಕೆ ಅತ್ಯಗತ್ಯ: ಸಿಎಂ

June 14, 2025

ಕೊಪ್ಪಳ | ನವವೃಂದಾವನ ಶ್ರೀರಘುವರ್ಯತೀರ್ಥರ ಅದ್ದೂರಿ ಆರಾಧನೆ | ಮೂರು ದಿನ ವಿದ್ವಾಂಸರ ಪ್ರವಚನ

June 14, 2025

ರಘುವರ್ಯೋ ಮುದಂ ದದ್ಯಾತ್ ಕಾಮಿತಾರ್ಥಪ್ರದಾಯಕಃ

June 14, 2025

ಜೂ.15 | ಆಶೀರ್ವಾದ ಕಣ್ಣಿನ ಆಸ್ಪತ್ರೆ ಉದ್ಘಾಟನೆ | ಕಣ್ಣಿನ ತಜ್ಞ ಡಾ.ಅರುಣ್

June 14, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸಧೃಡ ಭಾರತದ ನಿರ್ಮಾಣಕ್ಕೆ ನ್ಯಾಯಯುತ ಸಂಪನ್ಮೂಲ ಹಂಚಿಕೆ ಅತ್ಯಗತ್ಯ: ಸಿಎಂ

June 14, 2025

ಕೊಪ್ಪಳ | ನವವೃಂದಾವನ ಶ್ರೀರಘುವರ್ಯತೀರ್ಥರ ಅದ್ದೂರಿ ಆರಾಧನೆ | ಮೂರು ದಿನ ವಿದ್ವಾಂಸರ ಪ್ರವಚನ

June 14, 2025

ರಘುವರ್ಯೋ ಮುದಂ ದದ್ಯಾತ್ ಕಾಮಿತಾರ್ಥಪ್ರದಾಯಕಃ

June 14, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!