ಕಲ್ಪ ಮೀಡಿಯಾ ಹೌಸ್ | ಬೀದರ್ |
ಹಸಿರು ಕ್ರಾಂತಿಯ ಹರಿಕಾರ ಎಂಬ ಖ್ಯಾತಿ ಪಡೆದಿದ್ದ ಮೊಂಕೊಂಬು ಸಾಂಬಶಿವನ್ (ಎಮ್.ಎಸ್) ಸ್ವಾಮಿನಾಥನ್ ರವರ ನಿಧನಕ್ಕೆ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ Bandeppa Khashempur ಸಂತಾಪ ವ್ಯಕ್ತಪಡಿಸಿದ್ದಾರೆ.
ಹೋರಾಟ ನಡೆಸುತ್ತಿರುವ ರಾಷ್ಟ್ರದ ಬಹುತೇಕ ರೈತರು ಸ್ವಾಮಿನಾಥನ್ ರವರ ವರದಿಯನ್ವಯ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ವರದಿಯನ್ನು ಅನುಷ್ಠಾನಕ್ಕೆ ತರಬೇಕು. ಆ ಮೂಲಕ ರೈತರಿಗೆ ನೆರವಾಗಬೇಕು ಎಂದು ಸರ್ಕಾರಗಳಿಗೆ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಸ್ವಾಮಿನಾಥನ್ ರವರು ರೈತರ ಒಳಿತಿಗಾಗಿಯೇ ಕನಿಷ್ಠ ಬೆಂಬಲ ಬೆಲೆಯ ಫಾರ್ಮುಲಾವನ್ನು ಪರಿಚಯಿಸಿದ್ದರು. 2006ರಲ್ಲಿನ ಸಮ್ಮಿಶ್ರ ಸರ್ಕಾರದಲ್ಲಿ ನಾನು ಕೃಷಿ ಸಚಿವನಾಗಿದ್ದಾಗ ರಾಜ್ಯದಲ್ಲಿ ನೂತನ ಕೃಷಿ ನೀತಿ ಜಾರಿಗೆ ತರಲು ಮುಂದಾಗಿದ್ದೆ. ಆ ವಿಷಯಕ್ಕೆ ಸಂಬಂಧಿಸಿದಂತೆ ಎಮ್.ಎಸ್ ಸ್ವಾಮಿನಾಥನ್ ರವರು ಮೂರು ಬಾರಿ ನಮ್ಮ ರಾಜ್ಯಕ್ಕೆ ಬಂದು, ನನಗೆ ಅತ್ಯುತ್ತಮ ಸಲಹೆಗಳನ್ನು ನೀಡಿದ್ದರು. ಅವರ ಸಲಹೆಗಳನ್ನು ನಾನು ನಮ್ಮ ಕೃಷಿ ನೀತಿಯಲ್ಲಿ ಅಳವಡಿಸಿದ್ದೆ.
Also read: ರನ್ನ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಟೆಂಡರ್ ಆಹ್ವಾನಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ
ಕೃಷಿ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳನ್ನು ನಡೆಸಿ, ರಾಷ್ಟ್ರದ ಆಹಾರ ಭದ್ರತೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿ, ಹಸಿರು ಕ್ರಾಂತಿಯ ಹರಿಕಾರರು, ಹವಾಮಾನ ತಜ್ಞರು, ಕೃಷಿ, ಸಸ್ಯ ತಳಿ ವಿಜ್ಞಾನಿಯೂ ಆಗಿ ಮಹತ್ವದ ಸಾಧನೆಗೈದಿದ್ದ ಹಿರಿಯ ವಿಜ್ಞಾನಿ ಎಮ್.ಎಸ್ ಸ್ವಾಮಿನಾಥನ್ ರವರು ಚೆನ್ನೈನಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಕೇಳಿ ದುಃಖವಾಗುತ್ತಿದೆ.
Discussion about this post