ನವದೆಹಲಿ: 1975ರ ತುರ್ತು ಪರಿಸ್ಥಿತಿಯ ವೇಳೆ ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ ಎಂಬ ಸ್ಲೋಗನ್ ಅನ್ನು ಬಳಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ದೇಶದ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
Also Read: ಸ್ವತಂತ್ರ್ಯ ಭಾರತದಲ್ಲಿ ಜನರ ಸ್ವಾತಂತ್ರ್ಯ ಕಸಿದಿದ್ದ ಸರ್ವಾಧಿಕಾರಿ ಮನಃಸ್ಥಿತಿ
https://kalpa.news/independence-india-is-a-dictators-mood-of-freedom-of-people/
ಈ ಕುರಿತಂತೆ ಮಾತನಾಡಿರುವ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ತುರ್ತು ಪರಿಸ್ಥಿತಿಯ ವೇಳೆ ಕಾಂಗ್ರೆಸ್ ಅಧ್ಯಕ್ಷರು ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ ಹೇಳಿಕೆ ನೀಡಿದ್ದರು. ಹಿಂದುತ್ವ ಹಾಗೂ ಹಿಂದೂ ಧರ್ಮವನ್ನು ಅಳವಡಿಸಿಕೊಂಡವರಿಗೆ ದೇಶ ಎಂದರೆ ಅದು ಭಾರತ್ ಮಾತೆ ಮಾತ್ರ. ಆದರೆ, ಕಾಂಗ್ರೆಸ್ಗೆ ಮಾತ್ರ ಭಾರತ ಎಂದರೆ ಇಂದಿರಾ. ಇಂತಹ ಹೇಳಿಕೆಯನ್ನು ನೀಡಿದ್ದ ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು ಎಂದವರು ಆಗ್ರಹಿಸಿದರು.
ಇನ್ನು, 1975ರ ತುರ್ತು ಪರಿಸ್ಥಿತಿ ಹೇರಿಕೆಗೆ ಇಂದಿಗೆ 43 ವರ್ಷವಾಗಿದ್ದು, ಬಿಜೆಪಿ ಕರಾಳ ದಿನ ಆಚರಿಸಿದೆ.
Discussion about this post