ನವದೆಹಲಿ: ದೇಶದ ಜನರ ಹಿತವನ್ನು ಬಯಸುವ ನಾವು ಸಂತೋಷವನ್ನು ಹಂಚುತ್ತೇವೆ. ಆದರೆ, ಕಾಂಗ್ರೆಸ್ ಯಾವಾಗಲೂ ದೇಶವನ್ನು ಒಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದರು.
ಹಲವು ರಾಜ್ಯಗಳ ಚುನಾವಣೆ ಹಾಗೂ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನಮೋ ಅಪ್ಲಿಕೇಶನ್ನಲ್ಲಿ ಸಂವಾದ ನಡೆಸಿದ ವೇಳೆ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
Watch the interaction with @BJP4India Karyakartas from five Lok Sabha seats. https://t.co/UuiRgAnvUZ
— Narendra Modi (@narendramodi) October 10, 2018
ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಕಾಂಗ್ರೆಸ್ ಸಣ್ಣ ಸಣ್ಣ ವಿಷಯಗಳಿಗಾಗಿ ಕಚ್ಚಾಡುವ ಹಾಗೆ ಮಾಡುತ್ತಿದೆ. ನಾವು ದೇಶದ ಜನರಿಗೆ ಸಂತಸ ಹಂಚುತ್ತಿದ್ದು, ಕಾಂಗ್ರೆಸ್ ಮಾತ್ರ ದೇಶವನ್ನು ವಿಭಜನೆ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ಟೀಕಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದ ವೇಳೆ ಸೌಹಾರ್ದತೆಗಾಗಿ ಮೂರು ರಾಜ್ಯಗಳನ್ನು ಸೃಷ್ಠಿಸಿದರು. ಆದರೆ, ಒಂದೇ ಭಾಷೆಯ ಜನರನ್ನು ಒಡೆದು ತೆಲಂಗಾಣ ಹಾಗೂ ಆಂಧ್ರಪ್ರದೇಶ ಎಂಬುದಾಗಿ ವಿಭಜನೆ ಮಾಡುವ ಮೂಲಕ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಅನುಸರಿಸಿತು ಎಂದು ಕಿಡಿ ಕಾರಿದರು.
Discussion about this post