ನವದೆಹಲಿ: ರಾಷ್ಟ್ರಪತಿ ಭವನದಲ್ಲಿರುವ ಸಹಾಯಕರ ವಸತಿಗೃಹದಲ್ಲಿ ಪುರುಷನೊಬ್ಬರನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಕುರಿತಾಗಿ ವರದಿಯಾಗಿದೆ.
ಮೃತನನ್ನು ದೆಹಲಿಯ ಗಾಂಧಿ ನಗರ ನಿವಾಸಿ ತ್ರಿಲೋಕ್ ಚಂದ್ ಎಂದು ಗುರುತಿಸಲಾಗಿದ್ದು, ಈತ ಇತ್ತೀಚೆಗಷ್ಟೆ ವಸತಿಗೃಹಕ್ಕೆ ಬಂದು ತಂಗಿದ್ದ ಎನ್ನಲಾಗಿದೆ.
ಸುಮಾರು ಮೂರು ದಿನದ ಹಿಂದೆ ಈತ ಸತ್ತಿರಬಹುದು ಎಂದು ಅಂದಾಜಿಸಲಾಗಿದ್ದು, ಶವ ಕೊಳೆಯಲು ಆರಂಭವಾಗಿತ್ತು. ವಾಸನೆಯಿಂದಾಗಿ ವಿಚಾರ ತಿಳಿದುಬಂದಿದ್ದು, ಸೌಥ್ ಅವೆನ್ಯೂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಾಥಮಿಕ ತನಿಖೆಯ ವರದಿಯಂತೆ ಕೋಣೆ ಒಳಗಿನಿಂದ ಲಾಕ್ ಆಗಿದ್ದು, ವ್ಯಕ್ತಿ ಸಹಜ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
Discussion about this post