ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿಗೆ ಹಳೇ ಸಂತೆ ಮೈದಾನ ರಸ್ತೆಯ ಮನೆಯೊಂದರಲ್ಲಿ ಟಿವಿ #Television ಏಕಾಏಕಿ ಹೊತ್ತಿ ಉರಿದಿದ್ದು, ಅದೃಷ್ಠವಷಾತ್ ಸ್ವಲ್ಪದರಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ.
ಹಳೇ ಸಂತೇ ಮೈದಾನ ರಸ್ತೆಯ ಚೌಡೇಶ್ವರಿ ದೇಗುಲ ಪಕ್ಕದ ರಸ್ತೆ ಕುಮಾರ್ ಎನ್ನುವವರ ಮನೆಯವರು ಟಿವಿ ನೋಡುತ್ತಿದ್ದರು. ಆದರೆ, ಟಿವಿ ಒಳಗೆ ಏಕಾಏಕಿ ಹೊಗೆ #Smoke ಕಾಣಿಸಿಕೊಂಡು, ಕ್ಷಣಮಾತ್ರದಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಟಿವಿಗೆ ಹೊತ್ತಿಕೊಂಡ ಬೆಂಕಿ #FireAccident ಮನೆಯ ಎಲೆಕ್ಟ್ರಿಕ್ ವೈರಿಂಗ್ ಮಾರ್ಗಕ್ಕೂ ಸಹ ತಗುಲಿದೆ. ಮನೆಯ ಬಹಳಷ್ಟು ವೈರಿಂಗ್ ಸುಟ್ಟುಹೋಗಿದೆ.
ತತಕ್ಷಣ ಎಚ್ಚೆತ್ತ ಮನೆಯವರು ಹೊರಕ್ಕೆ ಓಡಿಬಂದು, ಮನೆಯನ್ನು ಸಂಪರ್ಕಿಸುವ ಮುಖ್ಯ ವಿದ್ಯುತ್ ತಂತಿ ಕತ್ತರಿಸಿದ್ದಾರೆ. ಹೀಗಾಗಿ, ಬೆಂಕಿ ವ್ಯಾಪಿಸುವುದು ಕಡಿಮೆಯಾಗಿದೆ.
ಮಾಹಿತಿ ತಿಳಿದು ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು, ಟಿವಿ ಹಾಗೂ ಟೇಬಲ್ ಸಹಿತ ಹೊರಕ್ಕೆ ತಂದು ಬೆಂಕಿ ನಂದಿಸಿದ್ದಾರೆ. ಬೆಂಕಿ ತಗುಲಿದ ವಿದ್ಯುತ್ ವೈರ್ ಮಾರ್ಗವನ್ನು ಪರಿಶೀಲಿಸಿ ಯಾವುದೇ ದೊಡ್ಡ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.
ಯುವ ಮುಖಂಡ, ಶಾಸಕರ ಪುತ್ರ ಗಣೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದಾರೆ. ಹೊಸಮನೆ ಪೊಲೀಸರು ಸಹ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post