ಭದ್ರಾವತಿ: ಕಳೆದ ನಾಲ್ಕು ವರ್ಷಗಳಿಂದ ಭದ್ರಾ ಅಣೆಕಟ್ಟೆ ವ್ಯಾಪ್ತಿಯಲ್ಲಿ ಮಳೆ ಕೊರತೆ ಕಾರಣ, ಡ್ಯಾಂ ತುಂಬಿರಲಿಲ್ಲ. ಹೀಗಾಗಿ, ಭದ್ರಾವತಿಯಲ್ಲಿ ಹಾದು ಹೋಗುವ ಭದ್ರೆಯ ಒಡಲೂ ಸಹ ಬಹುತೇಕ ಬರಿದಾಗಿತ್ತು. ಆದರೆ, ಈ ಬಾರಿ ಇದಕ್ಕೆ ಜೀವ ಕಳೆ ಬಂದಿದೆ.
ಈ ಬಾರಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ತುಂಬುವ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನದಿಗೆ ನೀರು ಬಿಡಲಾಗುತ್ತಿದ್ದು, ಭದ್ರಾವತಿ ನಗರದಲ್ಲಿ ಹಾದು ಹೋಗಿರುವ ಭದ್ರೆಯ ಒಡಲು ತುಂಬಿ, ಜೀವಕಳೆ ಬಂದಿದೆ.
ಅಣೆಕಟ್ಟೆಯಿಂದ ನೀರು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ನದಿ ತುಂಬಿ ಹರಿಯುತ್ತಿದ್ದು, ಇಲ್ಲಿನ ಸಂಗಮೇಶ್ವರ ಮಂಟಪ ಮುಕ್ಕಾಲ ಭಾಗ ಮುಳುಗಿದ್ದು, ನಿನ್ನೆಯಿಂದಲೇ ಇದೇ ಸ್ಥಿತಿಯಲ್ಲಿದೆ. ಇಂದು ಮುಂಜಾನೆಯೂ ಸಹ ಮಂಟಪ ಮುಕ್ಕಾಲು ಭಾಗ ಮುಳುಗಿದ್ದು, ಇದರ ಗೋಪುರ ಕಾಣುತ್ತಿದೆ.
ಇನ್ನು, ಭದ್ರಾ ಅಣೆಕಟ್ಟೆಯಲ್ಲಿ ಇಂದು ಮುಂಜಾನೆ 184.5 ಅಡಿ ನೀರು ಸಂಗ್ರವಾಗಿದ್ದು, 69.553 ಟಿಎಂಸಿ ನೀರು ಸಂಗ್ರಹವಾಗಿದೆ. 22823 ಕ್ಯೂಸೆಕ್ಸ್ ಒಳಹರಿವಿದ್ದು, 18032 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
Discussion about this post