Saturday, August 2, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ದಕ್ಷ

ಬುಲೆಟ್ ಸವಾರಿ-9: ಕಲೆಗಾರ ಕೊಲೆಗಾರನಾದ!-1

January 26, 2018
in ದಕ್ಷ
0 0
0
Share on facebookShare on TwitterWhatsapp
Read - 2 minutes

1988
ಅದು ಕೇರಳದ ಚಂಗನಶೇರಿ ಬಸ್ ನಿಲ್ದಾಣ. ಅಲ್ಲಿಯ ಕಲ್ಲು ಬೆಂಚಿನ ಮೇಲೆ ಇನ್‌ಸ್ಪೆಕ್ಟರ್ ಸುರೇಂದ್ರ ನಾಯಕ್ ಜತೆ ನಾನು ಕೂತಿದ್ದೆ. ಅಂದುಕೊಂಡ ಕೆಲಸ ಆಗದೆ, ಹೊಟ್ಟೆಗೆ ಸರಿಯಾದ ಊಟವಿಲ್ಲದೆ, ಕೈಯಲ್ಲಿ ಕಾಸೂ ಇಲ್ಲದೆ ನಾವು ಜೋಲುಮೋರೆ ಹಾಕಿಕೊಂಡು ಕೂತಿದ್ದೆವು. ಕೊಲೆ ರಹಸ್ಯ ಭೇದಿಸುತ್ತ ಮುಂದಿನ ದಾರಿ ಕಾಣದೆ ಕಂಗಾಲಾಗಿದ್ದೆವು. ಸುರೇಂದ್ರ ನಾಯಕ್ ಪತ್ರಿಕೆಯೊಂದರ ಮೇಲೆ ಕಣ್ಣಾಡಿಸತೊಡಗಿದರು. ಶಾರ್ಜಾ ಕಪ್‌ನಲ್ಲಿ ಭಾರತೀಯ ತಂಡ ಯಥಾಪ್ರಕಾರ ಪಾಕ್ ವಿರುದ್ಧ ಅವಮಾನಕಾರಿಯಾಗಿ ಸೋತಿತ್ತು.
ಭಾರತೀಯ ಕ್ರಿಕೆಟ್ ಆಟಗಾರರು ಸಪ್ಪೆ ಮೋರೆ ಹಾಕಿಕೊಂಡು ಶಾರ್ಜಾದಿಂದ ಭಾರತಕ್ಕೆ ವಾಪಸಾಗುತ್ತಿರುವ ಚಿತ್ರವನ್ನು ಕ್ರೀಡಾ ಪುಟದಲ್ಲಿ ಪ್ರಕಟಿಸಲಾಗಿತ್ತು.

‘ಗಂಟುಮೂಟೆ ಕಟ್ಟಿದ ಇಂಡಿಯನ್ ಕ್ರಿಕೆಟರ್ಸ್’ ಎಂಬ ಧಾಟಿಯ ಹೆಡ್ಡಿಂಗ್ ದಪ್ಪ ಅಕ್ಷರಗಳಲ್ಲಿ ಕಣ್ಣಿಗೆ ಹೊಡೆಯುತ್ತಿತ್ತು. ಆ ಹೆಡ್ಡಿಂಗ್ ಓದಿದ ನಾಯಕ್ ‘ಅಶೋಕ್ ಇಲ್ಲಿ ನೋಡಿ. ಈಗ ನಮ್ಮ ಪರಿಸ್ಥಿತಿ ಇವರಿಗಿಂತ ಹೀನಾಯ. ಹೇಗ್ರೀ ಬೆಂಗಳೂರಿಗೆ ಹೋಗಿ ಮುಖ ತೋರಿಸೋದು.’ ಎಂದು ವ್ಯಂಗ್ಯವಾಗಿ ಹೇಳಿ ನಕ್ಕರು. ಆ ಪರಿಸ್ಥಿತಿಯಲ್ಲೂ ನನಗೆ ನಗು ಬಂತು. ಬೆಂಗಳೂರಿನಲ್ಲಿ ನಡೆದ ಡಬಲ್ ಮರ್ಡರ್‌ನ ಹಂತಕರ ಜಾಡು ಹುಡುಕುತ್ತ ರಬ್ಬರ್ ಎಸ್ಟೇಟ್ ಕೂಲಿಯಾಳುಗಳ ವೇಷದಲ್ಲಿ ಕೇರಳದ ಎಲ್ಲೆಂದರಲ್ಲಿ 25 ದಿನಗಳ ಕಾಲ ಸುತ್ತಿದ್ದೆವು! ಆದರೂ ನಮಗೆ ಕೊಲೆಗಾರರ ಸುಳಿವು ಗಿಕ್ಕಿರಲಿಲ್ಲ.

ಕೇರಳದಲ್ಲಿ ನಾವು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊಲೆಗಾರರು ಹೊರಟ ‘ಹೈಲೆಂಡ್ ಎಕ್‌ಸ್ಪ್ರೆಸ್’ ರೈಲನ್ನು ಗುರುಯಾಗಿಸಿಕೊಂಡು ನಾವು ತ್ರಿವೆಂಡ್ರಂಗೆ ಹೊರಟಿದ್ದೇವು. ಆಗ ಈಗಿನಂತೆ ಮೊಬೈಲ್, ಇಂಟರ್‌ನೆಟ್, ಜಿಪಿಆರ್‌ಎಸ್ ತಂತ್ರಜ್ಞಾನ ಇರಲಿಲ್ಲವಲ್ಲ? ಅತಿ ಚಿಕ್ಕ ಮಾಹಿತಿಯನ್ನೂ ಫೀಲ್‌ಡ್ಗೆ ಇಳಿದೇ ಸಂಗ್ರಹಿಸಬೇಕಿತ್ತು. ಇನ್‌ಫರ್ಮೆಷನ್ ಒಬ್ಬರಿಂದ ಮತ್ತೊಬ್ಬರಿಗೆ ತಲುಪಬೇಕಾದರೆ ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೆ ಹಿಡಿಯುತ್ತಿತ್ತು. ಈಗಾದರೆ ಮೊಬೈಲ್ ಟವರ್‌ನ ಸಿಗ್ನಲ್ ಬಳಸಿ, ಆರೋಪಿ ಪಾತಾಳದಲ್ಲಿ ಅಡಗಿದ್ದರೂ ಕ್ಷಣ ಮಾತ್ರದಲ್ಲಿ ಪತ್ತೆ ಹಚ್ಚಬಹುದು. ಈ ಯಾವ ತಂತ್ರಜ್ಞಾನದ ನೆರವೂ ಇಲ್ಲದೆ ಆ ದಿನಗಳಲ್ಲಿ ನಾವು ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುತ್ತಿದ್ದ ರೀತಿ ನೆನಪಿಸಿಕೊಂಡರೆ ಈಗ ಸೋಜಿಗ ಎನಿಸುತ್ತದೆ. ನಾವು ಅಷ್ಟೊಂದು ದಿನ ಅಲ್ಲಿ ಉಳಿಯಬೇಕಾಗಿ ಬರುತ್ತದೆ ಎಂಬ ಅಂದಾಜೇ ಇರಲಿಲ್ಲ. ಜೇಬಿನಲ್ಲಿದ್ದ ದುಡ್ಡೆಲ್ಲ ಖರ್ಚಾಗಿ ಹೋಯಿತು. ಎರಡು ಹೊತ್ತಿನ ಊಟಕ್ಕೂ ಪರದಾಡಬೇಕಾಯಿತು.

ಈಗಾದರೆ ನಮ್ಮ ಅಕೌಂಟ್‌ಗೆ ಹಣ ಹಾಕಲು ಹೇಳಿ ಎಟಿಎಂ ಮೂಲಕ ಸುಲಭವಾಗಿ ಹಣ ಪಡೆಯಬಹುದು. ಆದರೆ ಆಗ? ಟಾರ್ಗೆಟ್ ರೀಚ್ ಮಾಡದೆ ವಾಪಸ್ ಬೆಂಗಳೂರಿಗೆ ಹೋದರೆ ಅವಮಾನ. ಕೊನೆಗೆ ಬೇರೆ ದಾರಿ ಕಾಣದೆ. ಪಾಪ ಸುರೇಂದ್ರ ನಾಯಕ್ ಅವರು ಬಂಗಾರದ ಉಂಗುರ ಮಾರಿ ಬಿಟ್ಟರು. ಆ ಹಣವನ್ನು ಮಿತವ್ಯಯವಾಗಿ ಖರ್ಚು ಮಾಡತೊಡಗಿದೆವು. ಮಧ್ಯಾಹ್ನ ಮಾತ್ರ ಊಟ ಮಾಡುತ್ತಿದ್ದೆವು. ಬೆಳಿಗ್ಗೆ ಮತ್ತು ಸಂಜೆ ಅಲ್ಲಿ ಅಗ್ಗವಾಗಿ ಸಿಗುತ್ತಿದ್ದ ಗೆಣಸುಗಳನ್ನು ತಿಂದು ದಿನ ದೂಡತೊಡಗಿದೆವು…

ಅದು ಠಾಕೂರ್ ಫ್ಯಾಮಿಲಿ. ಅವರದು ಒಂದು ರೀತಿಯಲ್ಲಿ ‘ಭಾಗ್ ಮಿಲ್ಖಾ ಭಾಗ್’ ಕತೆ. ದೇಶ ಇಬ್ಭಾಗವಾಗಿ ಪಾಕಿಸ್ಥಾನ ಅಸ್ತಿತ್ವಕ್ಕೆ ಬಂದಾಗ ಈ ಕುಟುಂಬ ಅಲ್ಲಿ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ತಲೆತಲಾಂತರಗಳಿಂದ ಸಂಪಾದಿಸಿದ್ದ ಆಸ್ತಿ-ಪಾಸ್ತಿ, ಮನೆ-ಮಠ ತೊರೆದು, ಸಂಬಂಧಿಕರನ್ನು ಕಳೆದುಕೊಂಡು, ಜೀವನವನ್ನು ಕೈಯಲ್ಲಿ ಹಿಡಿದುಕೊಂಡು ಭಾರತಕ್ಕೆ ಓಡಿ ಬಂದ ಕುಟುಂಬ ಅದು. ಕೋಲ್ಕೊತಾ, ದಿಲ್ಲಿ, ಮುಂಬಯಿ… ಹೀಗೆ ದೇಶದ ನಾನಾ ಭಾಗಗಳಲ್ಲಿ ಹೊಸ ನೆಲೆ ಅರಸುತ್ತ 1948ರ ಸುಮಾರಿಗೆ ಆ ಕುಟುಂಬ ಬೆಂಗಳೂರಿಗೆ ಕಾಲಿರಿಸಿತ್ತು. ಆ ಕುಟುಂಬಕ್ಕೆ ಬೆಂಗಳೂರಿನ ಹವಾಮಾನ ಶಾಂತಿಧಾಮವಾಗಿ ಕಂಡಿತ್ತು. ಕೆ.ಆರ್. ಮಾರ್ಕೆಟ್‌ನಲ್ಲಿ ಮಾವಿನಹಣ್ಣಿನ ಮಂಡಿ ತೆರೆದು ಸಣ್ಣದಾಗಿ ವ್ಯಾಪಾರ ನಡೆಸುತ್ತ ಹೊಸ ಬದುಕು ಆರಂಭಿಸಿದ ಠಾಕೂರ್, ಭೂ ವ್ಯವಹಾರಕ್ಕೂ ಇಳಿದು ಮತ್ತೆ ಶ್ರೀಮಂತರಾಗಿದ್ದರು. ಶೇಷಾದ್ರಿಪುರಂನ ಅಶೋಕ ಹೋಟೆಲ್ ಹಿಂಭಾಗದಲ್ಲಿ ಆ ಕಾಲದಲ್ಲೇ ಐದು ಮಹಡಿಯ ಬೃಹತ್ ಮನೆ ನಿರ್ಮಿಸಿದ್ದರು.

‘ನನ್ನ ಐವರು ಮಕ್ಕಳಿಗೆ ಐದು ಮನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ದಿಲ್ಲಿ ಮತ್ತು ಪಂಜಾಬ್‌ನಲ್ಲಿ ನೆಲೆಸಿದರು. ಒಬ್ಬ ಹುಡುಗ ತಿಪಟೂರಿಗೆ ಹೋಗಿ ವಹಿವಾಟು ಆರಂಭಿಸಿದ. ಠಾಕೂರ್ ನಿಧನದ ಬಳಿಕ ಆ ಮನೆಯಲ್ಲಿ ಅವರ ಪತ್ನಿ ಸಾವಿತ್ರಿದೇವಿ ಮತ್ತು ಇಬ್ಬರು ಗಂಡು ಮಕ್ಕಳ ಕುಟುಂಬಗಳು ವಾಸವಿದ್ದವು. ಸುಖ-ಸಮೃದ್ಧಿಯಿಂದಿದ್ದ ಆ ಕುಟುಂಬದ ಇಬ್ಬರು 1988ರ ಸೆ.22ರಂದು ದಾರುಣವಾಗಿ ಕೊಲೆಯಾಗಿ ಹೋದರು. ಆ ಕೊಲೆಗೆ ಮೂಲ -ಠಾಕೂರ್ ಸೊಸೆಯ ಕಲೆಯ ಗೀಳು! ಕಲೆಗಾರನೊಬ್ಬ ಕೊಲೆಗಾರನಾಗಿ ಹೋದ!!
(ಮುಂದುವರೆಯುವುದು)

Tags: Bangalore PoliceBullet SavariKalpa NewsTiger BB Ashok Kumar
Previous Post

ಉತ್ತರ ಕೊರಿಯಾ ಎಂಬ ನರಕ-19: ಯೆಯೋನ್ಮಿ ಪಾರ್ಕ್‌ಳ ಸಾಹಸ-3

Next Post

ಉತ್ತರ ಕೊರಿಯಾ ಎಂಬ ನರಕ-20: ಯೆಯೋನ್ಮಿ ಪಾರ್ಕ್‌ಳ ಸಾಹಸ-4

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಉತ್ತರ ಕೊರಿಯಾ ಎಂಬ ನರಕ-20: ಯೆಯೋನ್ಮಿ ಪಾರ್ಕ್‌ಳ ಸಾಹಸ-4

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

File Image

ಶಿವಮೊಗ್ಗ ಶಾಲೆ ನೀರಿನ ಟ್ಯಾಂಕ್‌ಗೆ ವಿಷ; ಭಯೋತ್ಪಾದನೆಗೆ ಸಮ: ಸಿಎಂ ಸಿದ್ದರಾಮಯ್ಯ

August 2, 2025

ಸರ್ಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕೀಟನಾಶಕದ ಶಂಕೆ: ಪ್ರಕರಣ ದಾಖಲು

August 2, 2025

ಅಧ್ಯಯನ-ಭರತನಾಟ್ಯ ಎರಡರ ಸಮನ್ವಯದಿಂದ ಬಹುಮುಖೀ ಸಾಧನೆ ಮಾಡಿ: ವೈಜಯಂತಿ ಕಾಶಿ

August 2, 2025

ವಿಷ ಸೇವಿಸಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಸಾವು..!

August 2, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

File Image

ಶಿವಮೊಗ್ಗ ಶಾಲೆ ನೀರಿನ ಟ್ಯಾಂಕ್‌ಗೆ ವಿಷ; ಭಯೋತ್ಪಾದನೆಗೆ ಸಮ: ಸಿಎಂ ಸಿದ್ದರಾಮಯ್ಯ

August 2, 2025

ಸರ್ಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕೀಟನಾಶಕದ ಶಂಕೆ: ಪ್ರಕರಣ ದಾಖಲು

August 2, 2025

ಅಧ್ಯಯನ-ಭರತನಾಟ್ಯ ಎರಡರ ಸಮನ್ವಯದಿಂದ ಬಹುಮುಖೀ ಸಾಧನೆ ಮಾಡಿ: ವೈಜಯಂತಿ ಕಾಶಿ

August 2, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!