ಕಲ್ಪ ಮೀಡಿಯಾ ಹೌಸ್
ಬೈಂದೂರು: ದೇಶದ ಹಿತಕ್ಕಾಗಿ ಉದಾತ್ತ ಕಾರಣಗಳಿಗೆ ಹುತಾತ್ಮರಾದ ಪುಣ್ಯಾತ್ಮ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರು ಸರ್ವಥಾ ಆದರ್ಶಪ್ರಾಯರು ಎಂದು ಶಾಸಕ ಬಿ.ಎಂ. ಸುಕುಮಾರಶೆಟ್ಟಿ ಅಭಿಪ್ರಾಯಪಟ್ಟರು.
ಡಾ. ಶ್ಯಾಮಪ್ರಸಾದ್ ಮುಖರ್ಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ಭಾರತದಲ್ಲಿ ಒಂದು ರಾಜ್ಯದ ನಾಗರಿಕರ ಹಕ್ಕುಗಳು ಮತ್ತು ಸವಲತ್ತುಗಳು ಬೇರೆ ಯಾವುದೇ ರಾಜ್ಯಗಳಿಗಿಂತ ಭಿನ್ನವಾಗಿರಲು ಹೇಗೆ ಸಾಧ್ಯ? ಇದು ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಡ್ಡಿ ಎಂದು ಆರ್ಟಿಕಲ್ 370 ಬಗ್ಗೆ ಜೂ.26, 1952ರಂದು ಮೊದಲು ಧ್ವನಿ ಎತ್ತಿದವರು ಡಾ.ಶ್ಯಾಮಪ್ರಸಾದ್ ಮುಖರ್ಜಿಯವರು ಎಂದು ನೆನೆದರು.
ಇವರ ಪ್ರಯತ್ನದ ಫಲ ರೂಪವಾಗಿ ಅ 21, 1951ರಂದು ಜನಸಂಘ ರಚನೆಯಾಯಿತು. ಇವರು ಬಿತ್ತಿದ ರಾಷ್ಟ್ರೀಯತೆ ಮತ್ತು ಭಾರತೀಯತೆಯ ಗುಣಗಳಿಂದಾಗಿ, ಇಂದು ನಮ್ಮ ಬಿಜೆಪಿ ಪಕ್ಷ ವಿಶ್ವದ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜಮ್ಮು ಕಾಶ್ಮೀರವನ್ನು ಪ್ರವೇಶಿಸಿದಾಗ ಇವರ ಬಂಧನವಾಯಿತು. ಬಂಧನದ ನಲವತ್ತು ದಿನಗಳ ನಂತರ ಜೂನ್ 23, 1953ರಂದು ನಿಗೂಢವಾಗಿ ಮೃತಪಟ್ಟರು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post