ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಸೊರಬ ತಾಲ್ಲೂಕು ಪಂಚಾಯತ ಜೀವವೈವಿಧ್ಯ ನಿರ್ವಹಣಾ ಸಮಿತಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತಹೆಗಡೆ ಅಶಿಸರ ತಿಳಿಸಿದರು.
ತಾಲ್ಲೂಕು ಜಡೆ ಗ್ರಾಮಪಂಚಾಯತಿ ಸಭಾಂಗಣದಲ್ಲಿ ತಾಲ್ಲೂಕು ಜೀವವೈವಿಧ್ಯ ನಿರ್ವಹಣ ಸಮಿತಿಹಮ್ಮಿಕೊಂಡಿದ್ದ ಜೀವವೈವಿಧ್ಯ ಸಂರಕ್ಷಣೆ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಜಡೆ, ಕುಪ್ಪಗಡ್ಡೆ ಹೋಬಳಿಗಳ 12 ಗ್ರಾಪಂ ಅಧಿಕಾರಿಗಳು, ಅಧ್ಯಕ್ಷರು, ಜೀವವೈವಿಧ್ಯ ಸಮಿತಿಯವರು, ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು, ಉಪ ತಹಶೀಲ್ದಾರ್ ಲಲಿತಾ ಪಾಲ್ಗೊಂಡ ಸಭೆಯಲ್ಲಿ ಖ್ಯಾತ ಪರಿಸರ ವಿಜ್ಞಾನಿ ಡಾ .ಕೇಶವಕೊರ್ಸೆ, ನಿವೃತ್ತ ಪ್ರೊ. ಕೆ.ಪಿ.ಮಲ್ಲನಗೌಡ, ಅನಿತ್ ಕುಮಾರ್, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ಜೀವವೈವಿಧ್ಯ ನಿರ್ವಹಣ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಚರ್ಚೆಯಲ್ಲಿ ಪಾಲ್ಗೊಂಡರು.
ಈ ವೇಳೆ ಜಡೆ ಐತಿಹಾಸಿಕ ಕೋಟೆಯಲ್ಲಿ ಮುತ್ತುಗ ಗಿಡಗಳನ್ನು ಸಮೃದ್ಧವಾಗಿ ಬೆಳೆಯಲು ಅವಕಾಶ ನೀಡಿ ಪರಿಸರ ಸಂರಕ್ಷಿಸಿದ ರೈತ ಕುಟುಂಬದ ವರನ್ನು ಸಮಿತಿ ಶ್ಲಾಘಿಸಿತು.
10 ಗ್ರಾಮಪಂಚಾಯತದ ಗೋಮಾಳ ಅಭಿವೃದ್ಧಿಗೆ ಯೋಜನೆ ರೂಪಿಸಲು, ೨೪ ಕೆರೆಗಳನ್ನು ಸಂರಕ್ಷಿಸಲು ಸಭೆ ನಿರ್ಣಯ ಕೈಗೊಂಡಿತು. ಈ ಹಿಂದೆ ಜಡೆ ಎಡಗೊಪ್ಪ ಪಿಳಲಿ ವೃಕ್ಷ ಸಮೂಹಕ್ಕೆ ಪಾರಂಪರಿಕ ಜೈವಿಕ ವೃಕ್ಷ ಘೋಷಿಸಿರುವ ಜೀವವೈವಿಧ್ಯ ಮಂಡಳಿ ಹಾಗೂ ಅನಂತಹೆಗಡೆ ಅಶಿಸರ ಅವರನ್ನು ಗ್ರಾಪಂ ಅದ್ಯಕ್ಷ ವಿರೂಪಾಕ್ಷ ಅಭಿನಂದಿಸಿದರು.
ಕುಪ್ಪಗಡ್ಡೆ ಕಾನು ಸಂರಕ್ಷಣೆ ಮುಂದಾಗಿರುವ ಅಲ್ಲಿನ ಗ್ರಾಮಸ್ಥರಿಗೆ ಸಭೆ ಮೆಚ್ಚುಗೆ ವ್ಯಕ್ತಪಡಿಸಿತು. ನಿಸರ್ಗದ ರಕ್ಷಣೆ, ಗೋಮಾಳ ಮುಂತಾದ ಗ್ರಾಮ ಸಾಮೂಹಿಕ ಭೂಮಿಯ ರಕ್ಷಣೆಗೆ ನರೇಗಾದಡಿ ನೆರವು ನೀಡಿದ ವಿವರವನ್ನು ಅಧಿಕಾರಿಗಳು ಮಾಹಿತಿ ನೀಡಿದರು.
ಜಡೆ ಐತಿಹಾಸಿಕ ಕೋಟೆ ಗೆ ಪ್ರಾಚ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಧ್ಯಯನ ನಡೆಸಬೇಕು ಎಂದು ಸಭೆ ಆಪೇಕ್ಷಿಸಿತು. ಸಭೆಯಲ್ಲಿ ಕೆ.ವಿ.ರಾಯ್ಕರ್, ಪಾಲಾಕ್ಷಪ್ಪ, ಬಸವಂತಪ್ಪ ಗ್ರಾಮ ಪ್ರಮುಖರು, ಜನಪ್ರತಿನಿಧಿಗಳು, ಪಜಾಟ್ರಸ್ಟ್ ಕಾರ್ಯದರ್ಶಿ ಸಿ.ಪಿ.ಈರೇಶಗೌಡ, ತಾಪಂ ಪರಶುರಾಮ್ ಇದ್ದರು.
ತಾಪಂ ಅಧಿಕಾರಿ ಸಂಜಯ್ ಸ್ವಾಗತಿಸಿದರು. ಪಿಡಿಒ ಚಿದಾನಂದ ವಂದಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post