ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಪೌರ ಕಾರ್ಮಿಕರ ಮಕ್ಕಳೆ ನಗರಸಭೆಯಲ್ಲಿ ಜನಪ್ರತಿನಿಧಿಗಳಾಗಿರುವುದು ವಿಶೇಷ. ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಇದು ಸಾಧ್ಯವಾಗಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಗರದ ಸೈನಿಕರು ಎಂದರೆ ಅದು ಪೌರಕಾರ್ಮಿಕರು. ಇವರಿಗೆ ಸೌಲಭ್ಯಗಳು ಕಡಿಮೆ ಇದ್ದು, ಸರ್ಕಾರ ಪೌರಕಾರ್ಮಿಕರ ಹಿತದೃಷ್ಟಿಯಿಂದ ಸೌಲಭ್ಯಗಳು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ, ನಿಮ್ಮ ಮಕ್ಕಳು ನಿಮ್ಮಂತೆ ಶ್ರಮ ಪಡುವುದು ಬೇಡ. ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಿ, ಉನ್ನತ ಹುದ್ದೆಗಳ ಅಲಂಕರಿಸುವಂತೆ ಮಾಡಬೇಕು ಎಂದು ಪೌರಕಾರ್ಮಿಕರಿಗೆ ಕಿವಿ ಮತು ಹೇಳಿದರು.
ಪೌರಕಾರ್ಮಿಕರು ದುಶ್ಚಟಗಳ ದಾಸರಾಗದೇ ಸಮಾಜದಲ್ಲಿ ಒಳ್ಳೆಯ ಜೀವನ ರೂಪಿಸಕೊಳ್ಳಬೇಕು. ಮಹಾತ್ಮ ಗಾಂಧೀಯವರು ಪೌರಕಾರ್ಮಿಕರ ಶ್ರಮವನ್ನು ಕಂಡು ಅವರನ್ನು ಶ್ರೀಹರಿ ಎಂದು ಕರೆದಿದ್ದಾರೆ. ಪೌರ ಕಾರ್ಮಿಕರು ಕೋವಿಡ್ ಸಂಕಷ್ಟದ ಸಮಯದಲ್ಲಿ ಜೀವವನ್ನು ಲೆಕ್ಕಿಸದೆ ಸಾರ್ವಜನಿಕರ ಜೀವ ಉಳಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಜಯಲಕ್ಷ್ಮೀ ಮಾತನಾಡಿ, ಪೌರಕಾರ್ಮಿಕರು ಚಳಿಗಾಳಿ ಎನ್ನದೆ ಮುಂಜಾನೆ ಎದ್ದು ನಗರದ ಸ್ವಚ್ಚತೆ ಕಾರ್ಯವನ್ನು ಮಾಡಿದ್ದಾರೆ ಅವರ ಕಾರ್ಯಕ್ಕೆ ನಾನು ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.
ಪೌರಕಾರ್ಮಿಕರ ಜೀವನ ಚೆನ್ನಾಗಿದ್ದರೆ, ನಗರವು ಸುಂದರವಾಗಿ ಇರುತ್ತದೆ. ಪೌರಕಾರ್ಮಿಕರು ಸುರಕ್ಷತೆಯ ಕವಚಗಳನ್ನು ಧರಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಜೈ ತುನ್ಬಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಗೌಡ, ಎಸ್. ಜಯಣ್ಣ, ಸದಸ್ಯರಾದ ರಾಘವೇಂದ್ರ, ವೈ. ಪ್ರಕಾಶ, ಮಲ್ಲಿಕಾರ್ಜುನ, ಸುಮಾ ಭರಮಯ್ಯ, ಸುಮಕ್ಕ, ಕವಿತಾ ಹಾಗೂ ಪೌರ ಕಾರ್ಮಿಕರು ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post