ಕಲ್ಪ ಮೀಡಿಯಾ ಹೌಸ್ | ಸಾಗರ |
ಗೂಳಿಯೊಂದು ಸಾರ್ವಜನಿಕರ ಸಮ್ಮುಖದಲ್ಲಿ ರಕ್ತಕಾರಿ ಒದ್ದಾಡಿ ಪ್ರಾಣಬಿಟ್ಟ ಘಟನೆ ಸಾಗರದ ಅಗ್ರಹಾರದ ಸಮೀಪದ ಬಿಹೆಚ್ ರಸ್ತೆಯಲ್ಲಿ ಇಂದು ಮದ್ಯಾಹ್ನ ನಡೆಯಿತು.
ರಸ್ತೆ ಬದಿಯ ಅಂಗಡಿ ಬಳಿ ಗೂಳಿ ರಕ್ತಕಾರಿ ವಾಂತಿ ಮಾಡುತ್ತ ನಿಂತಿದ್ದನ್ನು ಕೆಲವರು ನೋಡಿ ಅದಕ್ಕೆ ನೀರು ಕುಡಿಸುವ ಪ್ರಯತ್ನ ಮಾಡಿದರು. ಆಗ ಅದರ ಬಾಯಿಂದ ಸಗಣಿ ನೀರಾಗಿ ಹೊರಬಂದಿತು. ಸಗಣಿ ಹಾಕುವ ಜಾಗ ಬ್ಲಾಕ್ ಆಗಿ ಸಣ್ಣ ಪ್ರಮಾಣದಲ್ಲಿ ರಕ್ತಸ್ರಾವವಾಗುತ್ತಿತ್ತು, ಕೂಡಲೇ ಅಲ್ಲಿದ್ದವರು ಪಶುವೈದ್ಯರಿಗೆ ಕರೆ ಮಾಡಿ ಗೂಳಿಯ ಪರಿಸ್ಥಿತಿ ವಿವರಿಸಿ ಸ್ಥಳಕ್ಕೆ ಬರುವಂತೆ ಕೋರಿದರು. ಆದರೆ ಕೆಲ ಸಮಯದಲ್ಲಿಯೇ ಆ ಮೂಖ ಪ್ರಾಣಿ ಒದ್ದಾಡುತ್ತಾ ಪ್ರಾಣಬಿಟ್ಟಿತು.
ಇತ್ತೀಚೆಗೆ ಸಾಗರದಲ್ಲಿ ಅನೇಕ ನಾಗರೀಕರು ರಸ್ತೆಬದಿಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್ಗಳನ್ನು ಹಾಗೂ ಕಸ ಹಾಕುವ ಸ್ಥಳದ ತೊಟ್ಟಿಬಳಿ ಪ್ಲಾಸ್ಟಿಕ್ ಕವರ್ನಲ್ಲಿ ಅಳಿದುಳಿದ ಆಹಾರ ಪದಾರ್ಥಗಳನ್ನು, ಗಾಜಿನ ಬಾಟಲ್ ಗಳನ್ನು ಎಸೆಯುವ ಪರಿಪಾಠ ಹೆಚ್ಚಾಗಿದ್ದು, ಈ ಗೂಳಿ ಆರೀತಿಯ ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿದ್ದ ಆಹಾರ ಪಾದಾರ್ಥವನ್ನು, ಗಾಜನ್ನೋ ತಿಂದಿರುವ ಪರಿಣಾಮವಾಗಿ ಹೊಟ್ಟೆಯೊಳಗೆ ಕರುಳಿಗೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಈರೀತಿ ಒದ್ದಾಡಿ ಪ್ರಾಣಬಿಟ್ಟಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಗರ ಪುರಸಭೆಯ ಅಧಿಕಾರಿಗಳು ನಗರದಲ್ಲಿ ಪ್ಲಾಸ್ಟಿಕ್ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದರಿಂದ ಹಾಗೂ ನಗರಾಡಳಿತದ ನಿರ್ಲಕ್ಷ್ಯಕ್ಕೆ ಈ ರೀತಿ ಮೂಕಪ್ರಾಣಿಗಳು ಬಲಿಯಾಗುತ್ತಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇನ್ನಾದರು ಪುರಸಭೆಯವರು ಪ್ಲಾಸ್ಟಿಕ್ ಕವರ್ ಗಳನ್ನು ಎಲ್ಲೆಂದರಲ್ಲಿ ಎಸೆಯುವವರ ವಿರುದ್ಧ ಕಠಣ ಕ್ರಮ ಕೈಗೊಂಡು ಈ ರೀತಿಯ ಮೂಕ ಮುಗ್ದ ಪ್ರಣಿಗಳ ರಕ್ಷಣೆಗೆ ಮುಂದಾಗಬೇಕಿದೆ.
ವರದಿ: ಕೆ.ಎಸ್.ಸುಧೀಂದ್ರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post