ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಜೀವನದಲ್ಲಿ ಸಾಧನೆ ಮಾಡಬೇಕಾದರೆ ಮಹರ್ಷಿ ಭಗೀರಥರನ್ನು ಅನುಸರಿಸಬೇಕು. ಸತತ ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ ಎನ್ನುವುದಕ್ಕೆ ಗಂಗೆಯನ್ನೇ ಧರೆಗಿಳಿಸಿದ ಭಗೀರಥರೇ ಉತ್ತಮ ಉದಾಹರಣೆ ಎಂದ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಶಾಸಕರ ಭವನ ಹಾಗೂ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ದಾರ್ಶನಿಕರ ಸಾಧನೆ, ಅವರು ನಡೆದು ಬಂದ ಕಷ್ಟಗಳ ಹಾದಿಯನ್ನು ತಿಳಿಸುತ್ತದೆ. ಮಹಾರಾಜರಾಗಿದ್ದ ಭಗೀರಥರು ತ್ಯಾಗ, ಹಠ, ಛಲದಿಂದ ಸಾಧನೆ ಮಾಡಿದರು. ಪ್ರತಿಯೊಬ್ಬರೂ ತಮ್ಮ ಗುರಿ ಮುಟ್ಟಲು ಅಥವಾ ಸಾಧನೆ ಮಾಡಲು ಭಗೀರಥರ ಸತತ ಪರಿಶ್ರಮ, ತ್ಯಾಗ, ಛಲ, ಸದ್ಗುಣಗಳನ್ನು ಅನುಸರಿಸಬೇಕು. ಎಲ್ಲಾ ದಾರ್ಶನಿಕರ ಜೀವನ ಚರಿತ್ರೆ, ಜೀವನಗಾಥೆ, ಮೌಲ್ಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿಸಾಗರ ಡ್ಯಾಂ ನಿರ್ಮಾಣವಾಗಿ ಅಲ್ಲಿಂದ ಇಲ್ಲಿಯವರೆಗೆ ವೇದಾವತಿ ನದಿಗೆ ನೀರು ಬೀಡುಗಡೆ ಮಾಡಿದ್ದು, ಕಳೆದ ಬಾರಿ ನದಿಗೆ ನೀರು ಬರುವುದಕ್ಕೆ ಪ್ರಯತ್ನವು ಮಾಡಿದ್ದು ಒಂದು ಭಗೀರಥ ಪ್ರಯತ್ನವೆ ಆಗಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವೇದಾವತಿ ನದಿಗೆ ೦.೨.೫ ನೀರು ಬೀಡಲು ಅವಕಾಶ ಮಾಡಿ ಕೊಟ್ಟಿದ್ದರು. ಆದರಂತೆ ಕಳೆದ ವರ್ಷ ಬಿಜೆಪಿ ಸರ್ಕಾರ ಹಾಗೂ ನಮ್ಮ ಪ್ರಯತ್ನದಿಂದ ವೇದಾವತಿಗೆ ನೀರು ಬಿಟ್ಟಿರುವುದು ನಮ್ಮ ನಿಮ್ಮ ಅದೃಷ್ಟ ಎಂದರೆ ತಪ್ಪಗಲಾರದು. ಅದರಂತೆ ವೇದಾವತಿ ನದಿಯಲ್ಲಿ ಹಲವು ಕಡೆ ಬ್ಯಾರೇಜ್ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲರಿಗೂ ಶಾಸಕರು ಧನ್ಯವಾದ ಅರ್ಪಿಸಿದರು.
ಎಲ್ಐಸಿ ಪ್ರತಿನಿಧಿ ಹಾಗೂ ಉಪ್ಪಾರ ಸಮುದಾಯದ ಮುಖಂಡ ಟಿ.ರಂಗಸ್ವಾಮಿ ಮಾತನಾಡಿ, ಶಾಸಕರು ವೇದಾವತಿಗೆ ನೀರು ತಂದಿರುವುದು ಭಗೀರಥ ಪ್ರಯತ್ನವೇ ಸರಿ. ಅವರ ಇಚ್ಚೆಯಿಂದ ರೈತರೊಡಗೂಡಿ ಹೋರಾಟದ ಮೂಲಕ ವೇದಾವತಿ ನದಿಗೆ ನೀರು ಬಿಡಿಸಿಲು ಕಾರಣವಾಗಿದೆ. ವೇದಾವತಿ ನದಿಯಲ್ಲಿ ಹಲವು ಕಡೆ ಬ್ಯಾರೆಜ್ ನಿರ್ಮಾಣದಿಂದ ಈ ಭಾಗದ ರೈತರಿಗೆ ಅನುಕೂಲವಾಗಿ ರೈತರ ಬೋರ್ವೆಲ್ಗಳಿಗೆ ನೀರು ಬಂದು ತೋಟಗಳಿಗೆ ಕೃಷಿ ಜಮೀನುಗಳಿಗೆ ಅನುಕೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶಗೌಡ, ನಗರಸಭೆ ಸದಸ್ಯ ವೈ. ಪ್ರಕಾಶ, ಉಪ್ಪಾರ ಸಮುದಾಯದ ಮುಖಂಡ ಹನುಮಂತಪ್ಪ, ಪಾತಲಿಂಗಪ್ಪ, ತಹಶೀಲ್ದಾರ್ ಮಲ್ಲಿಕಾಜುನ್, ಪೋಲೀಸ್ ಇನ್ಸ್ಪೆಕ್ಟರ್ ಜೆ. ತಿಪ್ಪೇಸ್ವಾಮಿ, ಯಲ್ಲಪ್ಪ, ರಾಮಕೃಷ್ಣ, ಎಚ್.ಎಸ್ ಸೈಯದ್, ತಾಲ್ಲೂಕು ಕಚೇರಿ ಸಿಬ್ಬಂದಿಗಳಾದ ಶ್ರೀನಿವಾಸ್, ಜಯಣ್ಣ, ರಾಮಾಂಜನಪ್ಪ ಹಾಗೂ ಸಮುದಾಯದ ಮುಖಂಡರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post