ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಪಡಿತರ ಚೀಟಿ ಇಲ್ಲದ ನಗರಸಭೆ ವ್ಯಾಪ್ತಿಯ ಐದನೆಯ ವಾರ್ಡ್ನ ಕುಟುಂಬಗಳಿಗೆ ಹಾಗೂ ಹಸಿವು ಎಂದು ಬಂದವರಿಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ ಎಂದು ನಗರಸಭೆ ಸದಸ್ಯ ಮಲ್ಲಿಕಾರ್ಜನ್ ಹೇಳಿದರು.
ಬಳ್ಳಾರಿ ರಸ್ತೆಯಲ್ಲಿನ ಸಮೀಪವಿರುವ ಅಭಿಷೇಕ್ ನಗರದ ನಿವಾಸಿಗಳಿಗೆ ಚಳ್ಳಕೆರೆ ಡಿವೈಎಸ್ಪಿ ಕೆ.ವಿ. ಶ್ರೀಧರ ಇವರ ಸಹಯೋಗದಲ್ಲಿ ಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸಿ ಮಾತನಾಡಿದ ಅವರು, ನಗರದ ನಿವಾಸಿಗಳು ಕೊರೋನಾ ವ್ಯಾಪಕವಾಗಿ ಹರಡಿದ್ದು ಜಾಗೃತರಾಗಬೇಕು. ಲಾಕ್ಡೌನ್ ಇರುವುದರಿಂದ ಯಾರೂ ಹೊರಗೆ ಬರಬೇಡಿ. ನಗರಸಭೆ ಸದಸ್ಯರು ಎಲ್ಲರಿಗೂ ಆಹಾರ ಕಿಟ್ ವಿತರಿಸುವ ಮೂಲಕ ಮಾನವೀಯತೆ ತೋರಿದ್ದಾರೆ ಎಂದರು.
ಕೊರೋನಾ ಎರಡನೆಯ ಅಲೆ ವ್ಯಾಪಕವಾಗಿ ಹರಡುತ್ತಿದ್ದು. ಇಂತಹ ಸಮಯದಲ್ಲಿ ಸರ್ಕಾರ ಕೊರೋನಾ ನಿಯಂತ್ರಿಸಲು ಲಾಕ್ಡೌನ್ ನಿಯಮವನ್ನು ಜಾರಿಗೆ ತಂದಿದ್ದು, ಈ ಸಮಯದಲ್ಲಿ ವೆಂಕಟೇಶ ನಗರ ಹಾಗೂ ಅಭಿಷೇಕ್ ನಗರದ ನಿರ್ಗತಿಕರು, ಕೂಲಿ ಕಾರ್ಮಿಕರು. ರಸ್ತೆ ಬದಿ ವ್ಯಾಪಾರಿಗಳು, ಆಟೋ ಚಾಲಕರು ಕೆಲಸವಿಲ್ಲದೆ ತೊಂದರೆಗೆ ಸಿಲುಕಿರುವ ಪರಿಣಾಮ ನಾಯಕನಹಟ್ಟಿ ರಸ್ತೆಯ ವೆಂಕಟೇಶ್ವರ ನಗರದಲ್ಲಿ ಕಚೇರಿಯೊಂದನ್ನು ತೆರೆದು ಅಲ್ಲಿ ಹಸಿವು ಎಂದು ಬಂದವರಿಗೆ ಉತ್ತಮವಾದ ರಾಗಿ, ಅಕ್ಕಿಯನ್ನು ವಿತರಿಸಲಾಯಿತು.
ಈ ಸಮಯದಲ್ಲಿ ಡಿವೈಎಸ್ಪಿ ಕೆ.ವಿ. ಶ್ರೀಧರ, ಪೌರಯುಕ್ತ ಪಿ. ಪಾಲಯ್ಯ, ಪೋಲೀಸ್ ಇನ್ಸಪೇಕ್ಟರ್ ಜೆ. ತಿಪ್ಪೇಸ್ವಾಮಿ, ಮುಖಂಡರಾದ ಹೊನ್ನೂರಪ್ಪ, ವಿರೇಶ, ಪುರುಷೋತ್ತಮ, ಅಭಿಷೇಕ್ ನಗರದ ನಿವಾಸಿಗಳು ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post