Friday, June 20, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಬೆಳಗೆರೆಯಲ್ಲಿ ಪತ್ರಕರ್ತ ದಿ.ರವಿ ಬೆಳಗೆರೆಗೆ ನುಡಿನಮನ

December 9, 2020
in Small Bytes, ಚಿತ್ರದುರ್ಗ
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಚಳ್ಳಕೆರೆ: ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಅವರ ಮೂಲ ಸ್ಥಳವಾದ ಬೆಳಗೆರೆಯಲ್ಲಿ ಶ್ರದ್ಧಾಂಜಲಿ ಹಾಗೂ ನುಡಿನಮನ ಸಲ್ಲಿಸಲಾಯಿತು.

ಶ್ರೀ ಶಾರದಾ ಮಂದಿರದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಶ್ರೀ ಶಾರದಾ ಮಂದಿರ ವಿದ್ಯಾ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಜಂಟಿ ಕಾರ್ಯದರ್ಶಿ ಶ್ರೀಪಾದ ಪೂಜಾರ್, ರವಿ ಬೆಳಗೆರೆಯವರು ಪತ್ರಿಕೋದ್ಯಮ, ಹಾಗೂ ಸಮಾಜೋಪಯೋಗಿ ಕಾರ್ಯಗಳಲ್ಲಿ ಸದಾ ಅತ್ಯುತ್ಸಾಹದಿಂದ ಧೈರ್ಯವಾಗಿ ಮುನ್ನುಗ್ಗುತ್ತಿದ್ದುದು ಮಾದರಿ ಕಾರ್ಯವಾಗಿತ್ತು ಎಂದು ನೆನೆದರು.

ಶ್ರೀ ಶಾರದಾ ಮಂದಿರ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಕಳೆದೆರೆಡು ದಶಕದಲ್ಲಿ ಅವರು ತನ್ನ ನೈತಿಕ ನಿಷ್ಠೆಯ ಪ್ರತೀಕರಾದ ಪೂಜ್ಯ ಬೆಳಗೆರೆ ಕೃಷ್ಣಶಾಸ್ತಿಗಳ ಉದ್ದೇಶದಂತೆ ಅದನ್ನು ಮುನ್ನೆಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.


ಪೂರ್ಣಪ್ರಭೆಯಿಂದ ಪ್ರಜ್ವಲಿಸುತ್ತಿದ್ದ ಸೂರ್ಯ ಮಧ್ಯಾಹ್ನವೇ ಅಸ್ತಂಗತನಾದ ವಿಪರ್ಯಾಸವನ್ನು ಅನುಭವಿಸುವಂತೆ ಮಾಡಿರುವುದು ರವಿಬೆಳಗೆರೆಯವರ ಅಕಾಲಿಕ ಅವಸಾನ, ತಮ್ಮ ಬಹು ಆಯಾಮಿ ಪ್ರತಿಭೆಯಿಂದ ನಾಡಿನ ಅನೇಕ ಸಾಂಸ್ಕೃತಿಕ ವಲಯಗಳನ್ನು ಶ್ರೀಮಂತಗೊಳಿಸಿ ಬೆಳಗಿಸಿದ ಅವರ ಈ ನಿರ್ಗಮನ ಕೇವಲ ನಾಡಿಗಷ್ಟೇ ಅಲ್ಲ ನಮ್ಮಂತಹ ಸಂಸ್ಥೆಗಳಿಗೆ ಆಧಾರಸ್ತಂಭರಾಗಿದ್ದರು. ಅದರಿಂದ ಚೇತರಿಸಿಕೊಳ್ಳಲಾಗದ ಆಘಾತವನ್ನುಂಟು ಮಾಡಿದೆ ಎಂದರು.

ಬೆಳಗೆರೆಯ ಗ್ರಾಪಂ ಮಾಜಿ ಸದಸ್ಯ ಕೆ.ಟಿ. ನಿಜಲಿಂಗಪ್ಪ ರವಿಯವರ ಭಾವಚಿತ್ರಕ್ಕೆ ಹಾರ ಅರ್ಪಿಸಿ ಮಾತನಾಡಿ, ಕರ್ನಾಟಕ, ಮಾತ್ರವಲ್ಲ ದೇಶದಾದ್ಯಂತ ಚಳ್ಳಕೆರೆ ತಾಲೂಕಿನ ಬೆಳಗೆರೆಯ ಕೀರ್ತಿಯನ್ನು ಬೆಳಗಿದ ರವಿಯವರು ವಿಸ್ತರಿಸಿದರು. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಹರಿತವಾದ ಬರವಣಿಗೆ, ಎಲ್ಲರೂ ಮೆಚ್ಚುವಂತಹ ಬುದ್ದಿವಂತಿಕೆ ಮತ್ತು ಧೈರ್ಯಶಾಲಿಯಾಗಿ ಅತೀ ಹೆಚ್ಚು ಜ್ಞಾಪಕಶಕ್ತಿ ಹೊಂದಿದ್ದರು. ಆಳುವ ಸರ್ಕಾರಗಳಿಂದ ಬೆಳಗೆರೆ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಸದಾ ಮುಂಚೂಣಿಯಲ್ಲಿದ್ದರು ಎಂದು ನೆನೆದರು.

ಸಂಸ್ಥೆಯ ಸಂಪರ್ಕಾಧಿಕಾರಿ ಕೆ. ರಾಜಣ್ಣ ಮಾತನಾಡಿ, ಬೆಳಗೆರೆ ಶಿಕ್ಷಣ ಸಂಸ್ಥೆಯ ಊರುಗೋಲಾಗಿದ್ದ ರವಿಯವರು ಬೆಳಗೆರೆಯನ್ನು ಬೆಳಕಾಗಿಸಿದ್ದರು. ತಮ್ಮ ಕೃತಿಗಳ ಮೂಲಕ ವ್ಯಕ್ತಿ ಸಮಾಜಕ್ಕೆ ನೀಡಿದ ಧೀಮಂತ ಅವರು. ಹಾಗಾಗಿ ಅವರು ನೀಡಿದ ಮಾರ್ಗದರ್ಶನದಂತೆ ಮುನ್ನಡೆಯುವ ಹೊಣೆ ಅವರನ್ನು ಪ್ರೀತಿಸಿದ ಎಲ್ಲರ ಮೇಲಿದೆ. ಉಪನ್ಯಾಸಕ ರಾಜಶೇಖರ ಕನ್ನಡ ಸಾಹಿತ್ಯ ಕ್ಷೇತ್ರವೂ ಸೇರಿದಂತೆ ಪತ್ರಿಕೋದ್ಯಮ, ಸಿನೆಮಾ, ಸಂಗೀತಾ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರ ಮಾತಿನ ಮೋಡಿಗೆ ಮರುಳಾಗದವರೇ ಇಲ್ಲ ಎಂದರು.


ಸಂಸ್ಥೆಯ ನಿವೃತ್ತ ನೌಕರ ಎಂ.ವಿ. ರಾಜೀವಲೋಚನ ಮಾತನಾಡಿ, ಜಾತ್ಯಾತೀತ ಭಾವನೆ, ಹಠದ ಸ್ವಭಾವದದವರಾಗಿದ್ದ ಅವರು ಬೆಳಗೆರೆಯ ಕೆರೆ, ಬಾವಿ ಹಳ್ಳ ಕೊಳ್ಳಗಳಲ್ಲೇ ಈಜಾಡಿ ಇಲ್ಲಿಯೇ ತಮ್ಮ ದಿನಗಳನ್ನು ಕಳೆದಿದ್ದರು ಎಂದರು.

ಬಿಎನ್‌ಪುರ ದೇವರಾಜು ಮಾತನಾಡಿ, ಬೆಳಗೆರೆಯ ಕೃಷ್ಣಶಾಸ್ತಿ, ರವಿಬೆಳಗೆರೆ ಅವರ ಪ್ರತಿಮೆಗಳನ್ನು ಬೆಳಗೆರೆಯ ಶಾರದಾ ಮಂದಿರದ ಆವರಣದಲ್ಲೇ ನಿರ್ಮಾಣ ಮಾಡಲು ಅವರ ಅಭಿಮಾನಿಗಳಾದ ನಾವು ಮನಸ್ಸು ಮಾಡಿದ್ದೇವೆ ಎಂದು ವೇದಿಕೆಯಲ್ಲೇ ಹಣಕಾಸಿನ ನೆರವು ನೀಡಲು ಭರವಸೆ ನೀಡಿದರು.
ನುಡಿನಮನದಲ್ಲಿ ಶಿಕ್ಷಕರಾದ ಒ. ಚಿತ್ತಯ್ಯ, ಚಿದಾನಂದ, ಕೆ. ಚಂದ್ರಣ್ಣ, ಪತ್ರಕರ್ತ ಮಂಜುನಾಥ, ಎನ್.ಆರ್. ಕೋಡಪ್ಪ, ವೆಂಕಟಪ್ಪ, ರಂಗನಾಥ, ಗಿರಿಸ್ವಾಮಿ, ಸುರೇಶ ಬೆಳಗೆರೆ, ತಾಪಂ ನೌಕರ ಶ್ರೀನಿವಾಸ, ಉಪನ್ಯಾಸಕ ವೆಂಕಟರಮಣ, ಮಾತನಾಡಿ ನುಡಿನಮನ ಸಲ್ಲಿಸಿದರು.

ಸಂಸ್ಥೆಯ ನಿವೃತ್ತ ನೌಕರ ತಿಪ್ಪೀರಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಚಿತ್ರಾ ಅವರು ರವಿ ಬೆಳಗೆರೆ ಅವರ ಮೆಚ್ಚಿನ ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಹಾಡಿದರು. ಪ್ರವೀಣ ಬೆಳಗೆರೆ ಎಂಬ ಯುವಕ ರವಿ ಬೆಳಗೆರೆಯ ಕುರಿತ ಬೆಳಗೆರೆಯ ಬೆಳಗು ಕವನ ವಾಚಿಸಿದರು.

ತಮ್ಮ ಬಾಲ್ಯದಿಂದ ಪ್ರೀತಿಸಿದ ಈ ಭಾಗದ ನೆಲವು ಅವರನ್ನು ಪ್ರೀತಿಸಿದ ಆರಾಧಿಸಿದ ಅನೇಕ ಜೀವಗಳಿಗೆ ಆತ್ಮೀಯರಾದವರು. ಅತಂಹ ನಾವೆಲ್ಲಾ ಇಂದು ಅವರಿಗೆ ಸಲ್ಲಿಸಬಹುದಾದ ಗೌರವವೆಂದರೆ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸಂಕಲ್ಪ ಮಾಡುವುದು ಅದಕ್ಕೆ ವೇದಿಕೆಯಾಗಲಿ ಎಂಬ ಹಾರೈಕೆಯನ್ನು ನೆರೆದಿದ್ದವರು ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಿದರು.

ಪ್ರಾಚಾರ್ಯೆ ಸರೋಜಮ್ಮ, ಉಪನ್ಯಾಸಕ ರಾಜಶೇಖರ, ಬಿಎನ್‌ಪುರ ದೇವರಾಜು ಶಿಕ್ಷಕರಾದ ಒ ಚಿತ್ತಯ್ಯ, ಚಿದಾನಂದ, ಕೆ. ಚಂದ್ರಣ್ಣ, ಪತ್ರಕರ್ತ ಮಂಜುನಾಥ, ಎನ್.ಆರ್. ಕೋಡಪ್ಪ, ವೆಂಕಟಪ್ಪ, ರಂಗನಾಥ, ಗಿರಿಸ್ವಾಮಿ, ಸುರೇಶ ಬೆಳಗೆರೆ, ತಾಪಂ ನೌಕರ ಶ್ರೀನಿವಾಸ, ಉಪನ್ಯಾಸಕ ವೆಂಕಟರಮಣ, ಮಾತನಾಡಿ ನುಡಿನಮನ ಸಲ್ಲಿಸಿದರು.

(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Bayalu Seeme NewsChallakereChitradurgaCondolenceKannada News WebsiteLatest News KannadaRavi BelagereShraddhanjaliಚಳ್ಳಕೆರೆಪತ್ರಕರ್ತ ರವಿ ಬೆಳಗೆರೆಶ್ರದ್ಧಾಂಜಲಿ
Previous Post

ರೈತರ ಭಾರತ್ ಬಂದ್ ಬೆಂಬಲಿಸಿ ಭದ್ರಾವತಿ ವಕೀಲರಿಂದ ಪ್ರತಿಭಟನಾ ಮೆರವಣಿಗೆ

Next Post

ಭದ್ರಾವತಿ ಎನ್.ಸಿ.ವಿ.ಟಿ ಪ್ರವೇಶ ಅವಧಿ ವಿಸ್ತರಣೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Internet Image

ಭದ್ರಾವತಿ ಎನ್.ಸಿ.ವಿ.ಟಿ ಪ್ರವೇಶ ಅವಧಿ ವಿಸ್ತರಣೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಜೂ.22ರಂದು ರುದ್ರಾರಾಧ್ಯರಿಗೆ ಯೋಗರತ್ನಾಕರ ಪ್ರಶಸ್ತಿ ಪ್ರದಾನ: ವಿಜಯ್ ಕುಮಾರ್ ಹರ್ಷ

June 20, 2025
File Image

ಅಪ್ಸರಕೊಂಡ – ಮುಗಲಿ ಕಡಲ ವನ್ಯ ಜೀವಿಧಾಮ ಘೋಷಣೆ | ಸಚಿವ ಸಂಪುಟ ಸಭೆ ಅನುಮೋದನೆ

June 20, 2025

ವಿಕಸಿತ ಭಾರತದ ದಾರಿಯಲ್ಲಿ ಪ್ರಧಾನಿ ಮೋದಿ ಸರ್ಕಾರ: ಸಂಸದ ರಾಘವೇಂದ್ರ

June 20, 2025
File Image

ಅಧಿಕಾರಿಗಳ ವರ್ಗಾವಣೆ | ರಾಜ್ಯ ಸರ್ಕಾರದ ವಿರುದ್ಧ ಸಂಸದ ರಾಘವೇಂದ್ರ ಕಿಡಿ

June 20, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಜೂ.22ರಂದು ರುದ್ರಾರಾಧ್ಯರಿಗೆ ಯೋಗರತ್ನಾಕರ ಪ್ರಶಸ್ತಿ ಪ್ರದಾನ: ವಿಜಯ್ ಕುಮಾರ್ ಹರ್ಷ

June 20, 2025
File Image

ಅಪ್ಸರಕೊಂಡ – ಮುಗಲಿ ಕಡಲ ವನ್ಯ ಜೀವಿಧಾಮ ಘೋಷಣೆ | ಸಚಿವ ಸಂಪುಟ ಸಭೆ ಅನುಮೋದನೆ

June 20, 2025

ವಿಕಸಿತ ಭಾರತದ ದಾರಿಯಲ್ಲಿ ಪ್ರಧಾನಿ ಮೋದಿ ಸರ್ಕಾರ: ಸಂಸದ ರಾಘವೇಂದ್ರ

June 20, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!