ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಅದು ನಗರದ ಶಿಕ್ಷಣ ಕ್ಷೇತ್ರದಲ್ಲಿ ನಡೆದ ಒಂದು ಅಪರೂಪದ ಕಾರ್ಯಕ್ರಮ. ಜೀವನ ಕಲಿಸಿದ ಶಿಕ್ಷಕರಿಗೆ ಹಳೆಯ ಶಿಷ್ಯರಿಂದ ಗೌರವ ಅರ್ಪಿಸುವ ಒಂದು ಪವಿತ್ರ ವೇದಿಕೆ. ಅಲ್ಲಿ ಗುರು-ಶಿಷ್ಯರ ಬಾಂಧವ್ಯದ ಬೆಳಕಿತ್ತು, ಸ್ನೇಹಿತರ ನಡುವಿನ ಸೇತುವೆ ಮತ್ತಷ್ಟು ಗಟ್ಟಿಯಾಗಿತ್ತು.
ಹೌದು… ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಕಲಿತ 1995-96ನೆಯ ಸಾಲಿನ ವಿದ್ಯಾರ್ಥಿಗಳು ತಾವು ಎಸ್’ಎಸ್’ಎಲ್’ಸಿ ಮುಕ್ತಾಯಗೊಳಿಸಿ 25 ವರ್ಷ ಸಲ್ಲುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಶಾಲೆಯ ಎಲ್ಲ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಎಲ್ಲರಂತೆ 1995-96ನೆಯ ಸಾಲಿನ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನ ನಿಮಿತ್ತ ಒಂದೊಂದು ಊರುಗಳಲ್ಲಿ ನೆಲೆಸಿದ್ದಾರೆ. ಆದರೆ, ತಿಂಗಳುಗಟ್ಟಲೆ ಶ್ರಮವಹಿಸಿ ಇವರನ್ನೆಲ್ಲಾ ಒಟ್ಟಾಗಿ ಸೇರಿಸಿದ ಕೆಲವು ವಿದ್ಯಾರ್ಥಿಗಳು, ತಮಗೆ ಅಂದು ಪಾಠ ಕಲಿಸಿದ್ದ ಬೇರೆ ಬೇರೆ ನಗರದಲ್ಲಿ ನೆಲೆಸಿರುವ ಶಿಕ್ಷಕರನ್ನೂ ಸಹ ಕರೆಸಿ ಸನ್ಮಾನ ಮಾಡಿ, ಜೀವಮಾನವಿಡೀ ನೆನಪಿನಲ್ಲಿಡಬಹುದಾದ ಅಪರೂಪದ್ದೊಂದು ಕಾರ್ಯಕ್ರಮ ಮಾಡಿದ್ದಾರೆ.
ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಟಿ. ರಘುಮೂರ್ತಿ, ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಪಡೆದ ಅನುಭವಗಳು ಸದಾ ಮನಸ್ಸಿನಲ್ಲಿ ಉಳಿಯುತ್ತವೆ. ಹೀಗಾಗಿ, ಈ ಹಂತದಲ್ಲಿ ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು ಶಿಕ್ಷಕರು ಅರಿತು ನೈತಿಕ ಶಿಕ್ಷಣ ನೀಡುವ ಜೊತೆಯಲ್ಲಿ, ಅವರಿಗೆ ಮುಂದಿನ ಉತ್ತಮ ಬದುಕು ಕಟ್ಟಿಕೊಳ್ಳುವಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
1995-96ನೆಯ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳ ಇಷ್ಟು ವರ್ಷದ ನಂತರವೂ ಸಹ ತಮ್ಮ ಶಿಕ್ಷಕರಿಗೆ ಗೌರವ ಸಲ್ಲಿಸಬೇಕು ಎಂದು ಇಂತಹ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸದ ವಿಚಾರ. ಇವರುಗಳು ತಮ್ಮ ಗುರುಗಳ ಮೇಲಿಟ್ಟಿರುವ ಪ್ರೀತಿ, ಭಕ್ತಿ ಹಾಗೂ ಗೌರವವನ್ನು ಇಂದಿನ ವಿದ್ಯಾರ್ಥಿಗಳೂ ಸಹ ಅಳವಡಿಸಿಕೊಳ್ಳಬೇಕು ಎಂದರು.
ವಿವೇಕಾನಂದ ಶಾಲೆಯ ಕಾರ್ಯದರ್ಶಿ ಸ್ಪೂರ್ತಿ ನಿತೇಶ್ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ನಮ್ಮ ಈಗಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ನಮ್ಮ ಶಾಲೆಯಲ್ಲಿ ಪ್ರಸ್ತುತ ಅತ್ಯುತ್ತಮ ಪಠ್ಯಶಿಕ್ಷಣ, ನೈತಿಕ ಶಿಕ್ಷಣ ಹಾಗೂ ನಮ್ಮ ವಿದ್ಯಾರ್ಥಿಗಳು ಸಮಗ್ರವಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಶ್ರಮಿಸುತ್ತಿದ್ದೇವೆ ಎಂದರು.
1995-96ನೆಯ ಸಾಲಿನಲ್ಲಿ ಶಿಕ್ಷಕರಾಗಿದ್ದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ, ಶಿಕ್ಷಕರಾದ ವಿಜಯಮ್ಮ, ಎಚ್.ಎಸ್. ಮನೋರಮಾ, ನಾಗರತ್ನ, ವೀರಭದ್ರಪ್ಪ, ಮಲ್ಲಪ್ಪ, ಚಿದಾನಂದ ಮೂರ್ತಿ, ರಾಜಣ್ಣ, ಉಜ್ಜಿನಪ್ಪ, ನಾಗೇಶ್, ಶಿಕ್ಷಕೇತರ ಸಿಬ್ಬಂದಿಗಳಾದ ಅಶ್ವಾಕ್ ಹಾಗೂ ಅಹಮದ್ ಅವರುಗಳನ್ನು ಪ್ರೀತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ, ಶಿಕ್ಷಕರಾಗಿ ನಮ್ಮ ಬಳಿ ಕಲಿಯುವ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನ ಪಡೆದರೆ ಸಾಲದು. ಸಮಗ್ರವಾಗಿ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜದಲ್ಲಿ ಉತ್ತಮ ಜೀವನ ನಡೆಸುವಂತಾಗಬೇಕು ಎಂಬುದು ನಮ್ಮ ಆಶಯ. ಈ ರೀತಿ ನಮ್ಮಲ್ಲಿ ಕಲಿತು ಉತ್ತಮ ಸ್ಥಾನದಲ್ಲಿರುವ ವಿದ್ಯಾರ್ಥಿಗಳು ಇಂದು ನಮ್ಮನ್ನು ಗೌರವಿಸುತ್ತಿರುವುದಕ್ಕೆ ಹೃದಯ ತುಂಬಿ ಬರುತ್ತಿದೆ ಎಂದರು.
ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ಶಿಕ್ಷಕ ವೀರಭದ್ರಪ್ಪ, ಯಾವುದೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸುವಾಗ ಶಿಸ್ತಿನಿಂದ ಇರುತ್ತಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅವರನ್ನು ಸರಿದಾರಿಗೆ ತರುವುದು ಶಿಕ್ಷಕರ ಕರ್ತವ್ಯವಾಗಿರುವುದರಿಂದ ದಂಡಿಸುವುದು ಅನಿವಾರ್ಯವಾಗಿರುತ್ತದೆ. ಆದರೆ, ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಹೊಡೆಯುವುದಿರಲಿ, ಜೋರಾಗಿ ಬೈಯ್ಯವುದೂ ಸಹ ಅಪರಾಧವಾಗುತ್ತಿದೆ. ಇಂತಹ ಪರಿಸ್ಥಿತಿಯಿದ್ದಾಗ ಯಾವುದೇ ಶಿಕ್ಷಕ ವಿದ್ಯಾರ್ಥಿಗಳನ್ನು ತಿದ್ದಲೂ ಸಹ ಹಿಂಜರಿಯಬೇಕಾಗುತ್ತದೆ. ಅದು ಇಡಿಯ ಶಿಕ್ಷಣ ವ್ಯವಸ್ಥೆಯ ಮೇಲೆ ಪರೋಕ್ಷ ಅಡ್ಡ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಗಳು ಬದಲಾಗಬೇಕು ಎಂದು ಉದಾಹರಣೆ ಸಹಿತ ಇಂದಿನ ವಾಸ್ತವ ಸ್ಥಿತಿಯನ್ನು ತೆರೆದಿಟ್ಟರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರವಿಕುಮಾರ್, ಚಂದ್ರು ಮೋಹನ್, ಶಿಕ್ಷಕರಾದ ಕಿಶೋರ್ ಹಾಗೂ ಲತಾ ಮಾತನಾಡಿದರು. ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್, ನಗರಸಭೆ ಸದಸ್ಯ ಸುಜಾತಾ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಪ್ರಸನ್ನಕುಮಾರ್, ನಿರ್ದೇಶಕ ನಿತೀಶ್ ಕುಮಾರ್, ಪಾಲಯ್ಯ, ಪ್ರಹ್ಲಾದ್ ಸೇರಿದಂತೆ ಹಲವರಿದ್ದರು.
ಗುರುವಂದನಾ ಕಾರ್ಯಕ್ರಮ ಆಯೋಜಿಸಿ, ತಮ್ಮ ಶಾಲಾ ದಿನಗಳ ನೆನಪಿನ ಬುತ್ತಿಯನ್ನು ಹಂಚಿಕೊಂಡ 1995-96ರ ಸಾಲಿನ ವಿದ್ಯಾರ್ಥಿಗಳಿವರು:
ಅನಿತಾ ಪಿ.ಆರ್.
ಗೀತಾ ರಾಣಿ ಸಿ
ಜಲಜ ಎಸ್.ಡಿ.
ಜೀನತ್ ಎಚ್.
ಜೇಷ್ಠ ಎಂ.ಎಚ್.
ಕನ್ಯಾಕುಮಾರಿ ಕೆ.ಆರ್.
ಕವಿತಾ ಆರ್.ವಿ.
ಲತಾ ಕೆ.ಎನ್.
ಲತಾ ಎಸ್.
ಮಂಜುಳ ಪಿ.
ನಾಗವೇಣಿ ಆರ್.
ನಾಗವೇಣಿ ಕೆ.ಬಿ.
ನೇತ್ರಾವತಿ ಜಿ.ಎನ್.
ನಿರ್ಮಲ ಕೆ.ಆರ್.
ರೇಖಾ ಜಿ.ಬಿ.
ರೇಖಾ ಆರ್.ಎ.
ಸರಿತ ಜಿ.
ಶೈಲಜ ಎನ್.
ಶಶಿಕಲಾ ಎನ್.
ಶಿಲ್ಪ ಆರ್.
ಶಿಲ್ಪ ಜೆ.
ಸ್ನೇಹ ಜಿ.
ಸುಜಾತ ಓ.
ಸುಮ ಪಿ.
ಸುಮ ಜಿ.ಆರ್.
ಸುನೀತ ಎಸ್.ಟಿ.
ವೀಣಾ ಎಂ.
ವಿಶಾಲಾಕ್ಷಿ ಜೆ.ಎಸ್.
ಅಶ್ವತ್ಥ್ ನಾರಾಯಣ ಎಸ್.
ಬದ್ರಿ ಎನ್.ಎಸ್.
ಚಂದ್ರಮೋಹನ್ ಕೆ.
ದಾದಾ ಮಹಮ್ಮದ್ ರಫೀ
ದಾದಾಫೀರ್ ಎಂ.
ಫಯಾಝ್ ಉಲ್ಲಾಖಾನ್
ಹರೀಶ್ ಡಿ.ವಿ.
ಕಿಶೋರ್ ಬಿ.ಜಿ.
ಲತೀಫ್ ಸಾಬ್ ಕೆ.ಎಚ್.
ಮಲ್ಲೇಶ್ ಜೆ.
ನಾಗೇಂದ್ರಚಾರಿ ಬಿ.
ನರೇಂದ್ರ ಎಚ್.
ಪಂಪಾಪತಿರಾಜ್ ಬಿ.ವಿ.
ಪ್ರಕಾಶ್ ಕೆ.ಎಸ್.
ರಾಘವೇಂದ್ರ ಆರ್.ಎಸ್.
ರಘು ಸಿ.
ಸಂತೋಷ್ ಕುಮಾರ್ ಬಿ
ಸುರೇಂದ್ರಬಾಬು ಡಿ.ಎಸ್.
ಸುರೇಶ್ ಬಾಬು ಕೆ.ಬಿ.
ಶರೀಫ್ ಎಂ.
ಶಿವಪ್ರಸಾದ್ ಪಿ.ಎಸ್.
ಶ್ರೀನಿವಾಸ್ ಡಿ.
ತಿಪ್ಪೇಶ್ ಕುಮಾರ್ ಜೆ.
ವೀರೇಶ್ ಎಂ.
ವೀರೇಶ್ ಬಾಬು ಎಂ.ಸಿ.
Get in Touch With Us info@kalpa.news Whatsapp: 9481252093
Discussion about this post