ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಕನ್ನಡದ ಹೆಮ್ಮೆಯ ಸಾಹಿತಿ, ಶ್ರೇಷ್ಠ ಕನ್ನಡತಿ ಡಾ. ಸುಧಾಮೂರ್ತಿ #Sudha Murthy ಕನ್ನಡದ ಅಸಾಮಾನ್ಯ ಸಾಧಕರಾಗಿದ್ದು, ಕನ್ನಡ ಇಂಗ್ಲೀಷ್, ಮರಾಠಿ, ಭಾಷೆಯ ಲೇಖಕರಾಗಿ, ಸಮಾಜ ಸೇವಕರಾಗಿ ಸೇವೆ ಸಲ್ಲಿಸುತ್ತಿರುವ ಸುಧಾಮೂರ್ತಿ ಕನ್ನಡಿಗರ ಶ್ರೇಷ್ಠ ಚಿಂತಕರು, ಸರಳ ಸಜ್ಜನರಾಗಿದ್ದಾರೆ ಎಂದು ಸಂಸ್ಕೃತಿ ಚಿಂತಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಡಾ. ಸುಧಾ ಮೂರ್ತಿ ಅವರ ಸಾಹಿತ್ಯ ಕೊಡುಗೆಗಳು ಹಾಗೂ ಸಮಾಜ ಸೇವೆಯ ಮಹತ್ವ ಕುರಿತು ಅವರು ಮಾತನಾಡಿದರು.

ನನ್ನ ಅಜ್ಜಿಗೆ ನಾನು ಹೇಗೆ ಓದಲು ಕಲಿಸಿದೆ ಮತ್ತು ಇತರ ಕಥೆಗಳು 15 ಭಾಷೆಗೆ ಭಾಷಾಂತರಗೊಂಡಿದೆ. ಅವಿಭಕ್ತ ಕುಟುಂಬದಲ್ಲಿ ಅಜ್ಜಿಯ ಪಾತ್ರ, ಕುಟುಂಬ ನಿರ್ವಹಣೆ, ಅಜ್ಜಿಯ ಪ್ರೀತಿ, ಕರುಣೆ, ವಿಶ್ವಾಸ ನಂಬಿಕೆ, ಧೈರ್ಯ ಎಲ್ಲವನ್ನು ಅರ್ಥಗರ್ಭಿತವಾಗಿ ತಿಳಿಸಿ ಸಮಾಜಕ್ಕೆ ಕುಟುಂಬ ಪ್ರಜ್ಞೆಯನ್ನು ಹೆಚ್ಚಿಸಿರುವ ಸುಧಾ ಮೂರ್ತಿಯವರು ಹಕ್ಕಿಯ ತೆರದಲ್ಲಿ, ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್, ಕಾವೇರಿಯಿಂದ ಮೇ ಕಾಂಗಿಗೆ, ಡಾರ್ಲ ಸೊಸೆ, ಋಣ, ಮಹಾಶ್ವೇತೆ, ಮನದ ಮಾತು ಗುಟ್ಟೊಂದು ಹೇಳುವೆ ಮುಂತಾದ ಪುಸ್ತಕಗಳು ಜನಪ್ರಿಯವಾಗಿವೆ ಎಂದರು.

ಇವರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು, ವಿವಿಧ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಪಾರ ಜ್ಞಾನಿಗಳಾಗಿ, ಸರಳ ಸಜ್ಜನ ಬದುಕನ್ನು ನಡೆಸುತ್ತಿರುವ ಸುಧಾ ಮೂರ್ತಿ ನಮ್ಮೆಲ್ಲರ ಹೆಮ್ಮೆ ಎಂದು ಋಗ್ವೇದಿ ತಿಳಿಸಿದರು.

ಸರಳತೆಗೆ ಸಾಕ್ಷಿಯಾಗಿರುವ ಸುಧಾ ಮೂರ್ತಿ ಆಡಂಬರದ ಜೀವನದಿಂದ ದೂರವಿರುವಂತೆ ಯುವಕರಿಗೆ ಸದಾ ಕಾಲ ದಾರಿದೀಪವಾಗಿದ್ದಾರೆ. ಅಹಂಕಾರವನ್ನು ಬಿಟ್ಟು, ಸರಳತೆಯ ಮೂಲಕ ಶ್ರೇಷ್ಠ ಬದುಕನ್ನು ನಡೆಸಬಹುದು ಎಂಬುದು ಸುಧಾಮೂರ್ತಿ ಅವರ ಜೀವನ ಮತ್ತು ಬದುಕಿನಿಂದ ಅರ್ಥವಾಗುತ್ತದೆ ಎಂದು ತಿಳಿಸಿದರು.

ಹಿರಿಯ ಕನ್ನಡ ಚಳುವಳಿಗಾರ ರಾಜಗೋಪಾಲ್ ರವರು ಸುಧಾ ಮೂರ್ತಿ ಅವರ ಜನ್ಮದಿನದ ಅಂಗವಾಗಿ ಸಿಹಿ ಹಂಚಿ ಪುಸ್ತಕಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್, ಬಿಕೆ ಆರಾಧ್ಯ, ಸರಸ್ವತಿ, ಶಿವಲಿಂಗ ಮೂರ್ತಿ, ಪಣ್ಯದ ಹುಂಡಿ ರಾಜು, ಮಹೇಶ್ ಗೌಡ, ಸುರೇಶ್ ಗೌಡ, ಮನೋಜ್, ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post