No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Monday, August 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಚಾಮರಾಜನಗರ

ವಿಶ್ವದ ಶ್ರೇಷ್ಠ ಸಾಹಿತಿ ಎಸ್ ಎಲ್ ಭೈರಪ್ಪ ಕನ್ನಡಿಗರ ಹೆಮ್ಮೆ: ಸುರೇಶ್ ಋಗ್ವೇದಿ

ಎಸ್ ಎಲ್ ಭೈರಪ್ಪನವರ ಸಾಹಿತ್ಯ ಕೊಡುಗೆಗಳು, ಜನ್ಮದಿನ, ವಿಶೇಷ ಕಾರ್ಯಕ್ರಮ

kalpa News by kalpa News
August 21, 2025
in ಚಾಮರಾಜನಗರ
0
ವಿಶ್ವದ ಶ್ರೇಷ್ಠ ಸಾಹಿತಿ ಎಸ್ ಎಲ್ ಭೈರಪ್ಪ ಕನ್ನಡಿಗರ ಹೆಮ್ಮೆ: ಸುರೇಶ್ ಋಗ್ವೇದಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  |

ಬ್ರಹ್ಮಾಂಡದ ದಿವ್ಯ ಚಿಂತನೆಗಳನ್ನು, ತತ್ವಗಳನ್ನು ತಮ್ಮ ಅನುಭವ, ಅಧ್ಯಯನದ ಮೂಲಕ ಸಾಹಿತ್ಯ ರೂಪದಲ್ಲಿ ನೀಡುತ್ತಿರುವ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್ ಎಲ್ ಭೈರಪ್ಪನವರು ವಿಶ್ವದ ಶ್ರೇಷ್ಠ ಸಾಹಿತಿಗಳಾಗಿ, ಕನ್ನಡಿಗರಾಗಿ ಇರುವುದು ನಮ್ಮೆಲ್ಲರ ಪುಣ್ಯವೆಂದು ಸಂಸ್ಕೃತಿ ಚಿಂತಕ ,ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಎಸ್ ಎಲ್ ಭೈರಪ್ಪನವರ ಸಾಹಿತ್ಯ ಕೊಡುಗೆಗಳು, ಜನ್ಮದಿನ, ವಿಶೇಷ ಪೂಜೆ, ಸಿಹಿ ಹಂಚಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಬೈರಪ್ಪನವರ ಕಾದಂಬರಿಗಳು ಕೋಟಿ ಕೋಟಿ ಓದುಗರನ್ನು ಸೃಷ್ಟಿ ಮಾಡಿದೆ. ಸಾಹಿತ್ಯದಿಂದ ದೂರ ಹೋಗುತ್ತಿರುವ ಕಾಲಘಟ್ಟದಲ್ಲಿ ಅತ್ಯಂತ ಸೂಕ್ಷ್ಮತೆಯಿಂದ ಸರ್ವರನ್ನು ಆಕರ್ಷಿಸಿ, ತಮ್ಮ ಸಾಹಿತ್ಯದ ಬರವಣಿಗೆ ಮೂಲಕ ಓದುಗರನ್ನು ಸೃಷ್ಟಿ ಮಾಡಿ ವಿಶ್ವ ಪ್ರಸಿದ್ಧರಾಗಿರುವ ಬೈರಪ್ಪನವರು 95 ವರ್ಷಗಳಲ್ಲೂ ತಮ್ಮೊಂದಿಗೆ ನವಲವಿಕೆಯಿಂದ ಇರುವುದು ಭಾರತೀಯರ ಪುಣ್ಯ. ಬಾಲ್ಯದಿಂದಲೇ ಅಪಾರ ಸಂಕಷ್ಟಗಳಿಂದ ಬೆಳೆದ ಭೈರಪ್ಪನವರು ಜೀವನದ ಅನುಭವಗಳು, ಸಮಾಜದ ಚಿಂತನೆಗಳು ಹಾಗೂ ಅಂತರಂಗದ ದಿವ್ಯ ಶಕ್ತಿಯಿಂದ, ಸಂಶೋಧನೆಗಳ ಮೂಲಕ ತಮ್ಮ ಜ್ಞಾನ ಭಂಡಾರದ ಮೂಲಕ ಸಾಹಿತ್ಯ ರಚನೆ ಮಾಡಿರುವ ಭೈರಪ್ಪನವರು ಭಾರತದ ತತ್ವಶಾಸ್ತ್ರದ ಚಿಂತನೆಗಳನ್ನು ಇಡೀ ವಿಶ್ವಕ್ಕೆ ನೀಡಿದವರು .ಅವರ ಕಾದಂಬರಿಗಳು ಓದುಗರ ಚಿಂತನೆಗು ಕಾರಣವಾಗಿರುವುದು ಕಾಣಬಹುದು .ಅವರ ಪರ್ವ ಕೃತಿ ಮಹಾಭಾರತದ ನವ ದೃಷ್ಟಿಕೋನ ವೈಚಾರಿಕತೆ ಹಾಗೂ ಮನಸ್ಸಿನ ವಿಶ್ಲೇಷಣೆಯೊಂದಿಗೆ ಬರದ ಅಮೂಲ್ಯವಾದ ಕಾದಂಬರಿಯಾಗಿದೆ.

ಇವರ ಗೃಹಭಂಗ ,ದಾಟು ,ವಂಶವೃಕ್ಷ, ಸಾರ್ಥ, ಮಂತ್ರ ,ಆವರಣ ,ತಂತು ಮತದಾನ ,ತಬ್ಬಲಿಯು ನೀನಾದೆ ಮಗನೇ ಕಾದಂಬರಿಗಳು ಹಲವಾರು ಬಾರಿ ಮುದ್ರಣವಾಗುತ್ತಿದೆ,
ಸತ್ಯಾ ಮತ್ತು ಸೌಂದರ್ಯದ ಬಗ್ಗೆ ಸಂಶೋಧನೆ ನಡೆಸಿ ಪಿ ಎಚ್ ಡಿ ಪಡೆದು ಭಾರತೀಯ ಸಂಸ್ಕೃತಿ, ಪರಂಪರೆ ತತ್ವಶಾಸ್ತ್ರ, ತರ್ಕಶಾಸ್ತ್ರ, ಕಲೆ ,ಸಾಹಿತ್ಯ, ಸಂಗೀತ, ಇತಿಹಾಸ, ಧರ್ಮ, ಸೃಜನಶೀಲತೆ, ಮನುಷ್ಯ ಸಂಬಂಧ, ರಾಜಕೀಯ ಚಿತ್ರಣ, ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು, ಗ್ರಾಮೀಣ ಬದುಕಿನ ಚಿತ್ರಣ, ಜಾತಿ ವ್ಯವಸ್ಥೆಯ ಬಗ್ಗೆಯೂ ಅವರ ಕಾದಂಬರಿಗಳು ಬಹಳಷ್ಟು ಪ್ರಭಾವಶಾಲಿಯಾಗಿ ಮಾನವನನ್ನು ಸತ್ವ ಶಾಲಿಯನ್ನಾಗಿ ರೂಪಿಸಿದೆ.

ಭೈರಪ್ಪನವರ ಕಾದಂಬರಿಗಳು ಹಲವಾರು ನಾಟಕಗಳಾಗಿ, ಚಲನಚಿತ್ರಗಳಾಗಿ, ಧಾರಾವಾಹಿಗಳಾಗಿ ಸಮಾಜಕ್ಕೆ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿದೆ. ದೇಶ ವಿದೇಶಗಳ ಸಂಸ್ಕೃತಿ ,ಪರಂಪರೆ ಗ್ರಾಮೀಣ ಬದುಕು, ಗ್ರಾಮೀಣ ಜೀವನ , ವ್ಯಕ್ತಿಗಳ ಅಂತರ್ಮುಖಿ ಚಿಂತನೆ ಹಾಗೂ ಸಮಗ್ರವಾದ ನಿರಂತರವಾದ ಅಧ್ಯಯನದ ಜ್ಞಾನದ ಚಿಂತನೆಯ ಮೂಲಕ ಸಾಹಿತ್ಯವನ್ನು ರಚಿಸಿ ವಿಶ್ವ ಮಾನ್ಯ ಸಾಹಿತಿಯಾಗಿ ಭೈರಪ್ಪನವರು ಭಾರತದಲ್ಲಿ ಇರುವುದು ಹೆಮ್ಮೆಯಾಗಿದೆ .ಅವರ ಸಾಹಿತ್ಯ ಸೇವೆಯ ಜೊತೆಗೆ ಅಪಾರ ಸಮಾಜ ಸೇವೆಯನ್ನು ನೀಡಿ ಸಮಾಜದ ಪರಿವರ್ತನೆಗೊ ಕಾರಣರಾಗಿದ್ದಾರೆ. ಬೈರಪ್ಪನವರ ಸಮಾಜ ಸೇವೆಗೆ ಇತ್ತೀಚೆಗೆ ಅವರ ಹುಟ್ಟಿದ ಊರಿಗೆ ಕೆರೆಯನ್ನು ನಿರ್ಮಿಸುವ ಮೂಲಕ ಲಕ್ಷಾಂತರ ಜನರ ಬದುಕಿಗೆ ಕಾರಣವಾಗಿರುವ ಭೈರಪ್ಪ ನವರು ಮಾನವ ಶ್ರೇಷ್ಠ ಜೀವಿಯಾಗಿ ಮಾನವನ ಶ್ರೇಷ್ಠತೆಯನ್ನು ಹಾಗೂ ಮಹತ್ವವನ್ನು ಯುವ ಪೀಳಿಗೆಗೆ ನೀಡಿದ್ದಾರೆ . ಇವರ ಸೇವೆಯನ್ನು ಪರಿಗಣಿಸಿ ಪದ್ಮಭೂಷಣ, ಪದ್ಮಶ್ರೀ, ಹಾಗೂ ನೂರಾರು ಪ್ರಶಸ್ತಿಗಳು ದೊರೆತಿವೆ. ಭೈರಪ್ಪನವರು ಭಾರತೀಯತೆಯ ಪ್ರತೀಕವಾಗಿ ಭಾರತದ ಇತಿಹಾಸ, ಧರ್ಮ, ಸಂಸ್ಕೃತಿ ,ಪರಂಪರೆ, ಸಂಗೀತ ,ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಮಾನವನ ಜೀವನ ಶೈಲಿಯ ಜೀವಂತಿಕೆಯ ಪ್ರತಿರೂಪವಾಗಿ ಸಾಹಿತ್ಯವನ್ನು ರಚಿಸಿ ವಿಶೇಷವಾದಂತಹ ಜ್ಞಾನದ ರಾಶಿಯನ್ನೇ ನೀಡಿದ್ದಾರೆ.
ಭೈರಪ್ಪನವರ 95ನೇ ಜನ್ಮದಿನದಲ್ಲಿ ಸಿಹಿ ಹಂಚಿ, ಭಗವಂತನಿಗೆ ಮತ್ತಷ್ಟು ಆಯಸ್ಸು ನೀಡಲು ಪ್ರಾರ್ಥಿಸಿ, ಪುಸ್ತಕಗಳನ್ನು ಅಧ್ಯಯನ ಮಾಡುವ ಭಾಗ್ಯವನ್ನು ಭಗವಂತ ನಮಗೆಲ್ಲರಿಗೂ ಕರುಣಿಸಿರುವುದೇ ಮತ್ತೊಂದು ವೈಶಿಷ್ಟ್ಯವೆಂದು ತಿಳಿಸಿದರು. ಕೋಟಿ ಕೋಟಿ ಭಾರತೀಯ ಸಾಹಿತ್ಯ ಪ್ರೇಮಿಗಳ ದಿವ್ಯ ಆಶೀರ್ವಾದ ಇವರ ಮೇಲೆ ಸದಾ ಇರಲಿ ಎಂದು ಋಗ್ವೇದಿ ತಿಳಿಸಿದರು.

ಕಾರ್ಯಕ್ರಮವನ್ನು ಹಿರಿಯ ಕನ್ನಡ ಚಳುವಳಿಗಾರ ರಾಜಗೋಪಾಲ್ ಉದ್ಘಾಟಿಸಿ ಮಾತನಾಡಿ 95 ವಸಂತಗಳ ದಿವ್ಯ ಕಾಲವನ್ನು ಸಾಹಿತ್ಯ ರಚನೆಗೆ ನೀಡಿ ಭೈರಪ್ಪನವರು ಕನ್ನಡಿಗರ ಮನೆಮನೆಯ ಸಾಹಿತಿಯಾಗಿದ್ದಾರೆ. ಭೈರಪ್ಪನವರ ಪುಸ್ತಕಗಳು ವಿಶೇಷವಾಗಿದ್ದು ಅವರ ಎಲ್ಲಾ ಸಾಹಿತ್ಯಗಳು ಮನುಷ್ಯನ ಪೂರ್ಣತೆಗೆ ತೆಗೆದುಕೊಂಡು ಹೋಗುವ ಅನುಭವ ಉಂಟುಮಾಡುತ್ತದೆ. ಅವರ ಜ್ಞಾನ ಸಾಹಿತ್ಯ , ಚಿಂತನೆಗಳು ಸಾಹಿತ್ಯ ಲೋಕದ ಹೊಸ ಅವಲೋಕನವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಋಗ್ವೇದಿ ಯೂತ್ ಕ್ಲಬ್ ಭೈರಪ್ಪನವರ ಸಾಹಿತ್ಯ ಉತ್ಸವವನ್ನು ಹಮ್ಮಿಕೊಂಡು ವಿಶೇಷ ಪೂಜೆ ಸಲ್ಲಿಸಿ ಪುಸ್ತಕಗಳನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯಾಗಿದೆ ಎಂದು ತಿಳಿಸಿದರು.
ಪ್ರಸಿದ್ಧ ಜಾನಪದ ಗಾಯಕರಾದ ಸುರೇಶ್ ನಾಗ್ ಹರದನಹಳ್ಳಿ ರವರು ಮಾತನಾಡಿ ಭಾರತೀಯ ಜನಪದ, ಸಂಸ್ಕೃತಿ, ಕಲೆ ವಾಸ್ತುಶಿಲ್ಪ, ಇತಿಹಾಸ ಹಾಗೂ ಜನರ ಪ್ರತಿಯೊಂದು ಭಾವನೆಗಳನ್ನು ಹಾಗೂ ಜೀವನ ಶೈಲಿಯನ್ನು, ಪ್ರತಿ ಗ್ರಾಮದ ಪರಂಪರೆಯನ್ನು ವಿಶೇಷವಾಗಿ ಸಾಹಿತ್ಯದ ರೂಪದಲ್ಲಿ ಬರೆದಿರುವ ಭೈರಪ್ಪನವರಿಗೆ ಭೈರಪ್ಪನವರೆ ಸಾಟಿ ಎಂದು ತಿಳಿಸಿದರು.

ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಬೈರಪ್ಪನವರ ಜನ್ಮದಿನವನ್ನು ಸಂತೋಷದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ ,ಸರಸ್ವತಿ, ರವಿಚಂದ್ರಪ್ರಸಾದ್, ಮಹೇಶ್, ಕುಮಾರ್, ಅರವಿಂದ್, ಮೋಹನ್ ಮಾದೇಶ್ ಶೆಟ್ಟಿ, ಲೋಕೇಶ್ ನಾಯ್ಕ ,ಮೃತ್ಯುಂಜಯ ಮುಂತಾದವರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2025/08/VID-20250820-WA0058.mp4
https://kalpa.news/wp-content/uploads/2024/04/VID-20240426-WA0008.mp4

Tags: ChamarajanagaraKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಚಾಮರಾಜನಗರ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನನಗೆ ಏನಾದ್ರು ಆದ್ರೆ ಅದಕ್ಕೆ ಸರ್ಕಾರ, ಬಿಜೆಪಿ ಕಾರಣ | ಮಹೇಶ್ ಶೆಟ್ಟಿ ತಿಮರೋಡಿ

Next Post

ಶಿವಮೊಗ್ಗದ ಯುವ ಪ್ರತಿಭೆಗಳ ʼಹಚ್ಚೆʼ | ಭಾರತ್‌ ಸಿನಿಮಾಸ್‌ ನಲ್ಲಿ ಬಿಡುಗಡೆ

kalpa News

kalpa News

Next Post
ಶಿವಮೊಗ್ಗದ ಯುವ ಪ್ರತಿಭೆಗಳ ʼಹಚ್ಚೆʼ | ಭಾರತ್‌ ಸಿನಿಮಾಸ್‌ ನಲ್ಲಿ ಬಿಡುಗಡೆ

ಶಿವಮೊಗ್ಗದ ಯುವ ಪ್ರತಿಭೆಗಳ ʼಹಚ್ಚೆʼ | ಭಾರತ್‌ ಸಿನಿಮಾಸ್‌ ನಲ್ಲಿ ಬಿಡುಗಡೆ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL