ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇಗುಲಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದಂತಹ ವಸ್ತುಗಳನ್ನು ದೇವಸ್ಥಾನದ ಕಲ್ಯಾಣ ಮಂಟಪದ ಆವರಣದಲ್ಲಿ ಚಂದ್ರಗುತ್ತಿ ಪ್ರಭಾರ ಉಪ ತಹಶೀಲ್ದಾರ್ ಹಾಗೂ ದೇವಸ್ಥಾನದ ಕಾರ್ಯನಿರ್ವಹಣ ಅಧಿಕಾರಿಯಾದ ವಿ.ಎಲ್. ಶಿವಪ್ರಸಾದ್ ಅವರ ಸಮ್ಮುಖದಲ್ಲಿ ಬುಧವಾರ ಬಹಿರಂಗ ಹರಾಜು ಮಾಡಲಾಯಿತು.
ಹರಾಜಿನಿಂದ 5 ಲಕ್ಷದ 20 ಸಾವಿರದ 193 ರೂ. ಆದಾಯ ದೊರಕಿದೆ. ಅಕ್ಕಿ, ಬೆಲ್ಲ, ತೆಂಗಿನಕಾಯಿ, ಒಣಕೊಬ್ಬರಿ, ಸಕ್ಕರೆ, ಅಡಿಗೆ ಎಣ್ಣೆ, ದೀಪದ ಎಣ್ಣೆ, ಅಡಿಕೆಯನ್ನು ಹರಾಜು ಮಾಡಿದರು.
ದೇವಸ್ಥಾನದ ವ್ಯವಸ್ಥಪನಾ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ಸದಸ್ಯ ಪ್ರವೀಣ್ ಮಿರ್ಜಿ, ಶಿವಶಂಕರ್ ಗೌಡ್ರು, ವೆಂಕಟೇಶ್, ಗ್ರಾಮ ಲೆಕ್ಕಾಧಿಕಾರಿ ತೀರ್ಥರಾಜ್, ರತ್ನಾಕರ್ ಶಾನುಭೋಗ, ಹರಾಜು ಪ್ರಕ್ರಿಯೆಯಲ್ಲಿದ್ದರು. ಪ್ರಮುಖರಾದ ಸದಾನಂದ ಕಾಮತ್, ವೇಣುಗೋಪಾಲ್ ಶೆಣೈ, ಶ್ರೀನಾಥ್ ಶೆಣೈ, ಗಣೇಶ್ ಮರಡಿ, ಪರಶುರಾಮ ಸರಡಿ, ಪರಶುರಾಮ್ ಬೋವಿ, ವಿಶ್ವನಾಥ್ ಕಾಮತ್, ದಿನೇಶ್ ಸೇರಿದಂತೆ ದೇವಸ್ಥಾನದ ಸಿಬ್ಬಂದಿ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















