ಚನ್ನಪಟ್ಟಣ: ತಾಲೂಕಿನ ಹೊನ್ನಿಗನಹಳ್ಳಿ ಗ್ರಾಮದಲ್ಲಿ ಹಲವು ದಿನಗಳಿಂದ ಕಾಡುತ್ತಿದ್ದ ನೀರಿನ ಸಮಸ್ಯೆ ತಾಲೂಕಿನ ಕಾಂಗ್ರೆಸ್ ಯುವ ಮುಖಂಡೆ ಆರ್. ನವ್ಯಶ್ರೀ ಅವರ ಪ್ರಯತ್ನದಿಂದ ಪರಿಹಾರವಾಗಿದೆ.
ಗ್ರಾಮದ ನೀರಿನ ತೊಂಬೆ ಬಳಿ ಪೈಪ್ ಒಡೆದು ನೀರು ತೊಂಬೆಯೊಳಗೆ ಸಮರ್ಪಕವಾಗಿ ಹೋಗದೆ ಪೋಲಾಗುತ್ತಾ ಜನತೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರು. ಸರಿಪಡಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಅಲ್ಲಿನ ಯುವಕರಾದ ಅಭಿ, ಸುರೇಶ್ ಮತ್ತಿತರರು ನವ್ಯಶ್ರೀ ಅವರನ್ನು ಭೇಟಿಯಾಗಿ ಸರಿಪಡಿಸಿಕೊಡುವಂತೆ ಕೋರಿದ್ದರು. ಕೂಡಲೇ ಜೆ.ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಸುದೀಂದ್ರ ಅವರನ್ನು ಸಂಪರ್ಕಿಸಿ, ಸಮಸ್ಯೆ ಬಗ್ಗೆ ತಿಳಿಸಿದಾಗ ಸ್ಪಂದಿಸಿದ ಅವರು ಒಡೆದಿರುವ ಪೈಪ್ ಸರಿಪಡಿಸಿ ಸಮಸ್ಯೆ ಪರಿಹರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರ್, ಎಸ್’ಡಿಎ ಸಿದ್ದೇಗೌಡ ಸ್ಥಳದಲ್ಲೇ ಮೊಕ್ಕಾಂ ಹೂಡಿ ನೀರುಗಂಟಿ ಮೂಲಕ ಸರಿಪಡಿಸಿ ಸಮಸ್ಯೆಗೆ ಇತಿಶ್ರೀ ಹಾಡಿದ್ದಾರೆ.
ಸಮಸ್ಯೆ ಪರಿಹಾರಕ್ಕಾಗಿ ಪ್ರಯತ್ನಿಸಿದ ಎಲ್ಲ ಅಧಿಕಾರಿಗಳು ಹಾಗೂ ಬೆಂಬಲ ನೀಡಿದ ನವ್ಯಶ್ರೀ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
Discussion about this post