ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ವಿಷ ಸರ್ಪವಲ್ಲ. ಬದಲಾಗಿ ದೇಶದ ಖಜಾನೆ ಕಾಯುವ ಕಾಳಿಂಗ ಸರ್ಪ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.
ಜರಂಬಡಹಳ್ಳಿ ವ್ಯಾಪ್ತಿಯ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ವಿಷ ಸರ್ಪ ಎಂದಿದ್ದಾರೆ. ಆದರೆ, ನರೇಂದ್ರ ಮೋದಿ ಅವರು ವಿಷಸರ್ಪವಲ್ಲ. ಬದಲಾಗಿ ಭಾರತದ 140 ಕೋಟಿ ಜನರ ಖಜಾನೆಯನ್ನು ರಕ್ಷಿಸುವ ಕಾಳಿಂಗ ಸರ್ಪ ಎಂದಿದ್ದಾರೆ.
ಪುರಾತನ ಕಾಲದಿಂದಲೂ ದೇವಾಲಯಗಳ ಖಜಾನೆಗಳನ್ನು ಕಾಳಿಂಗ ಸರ್ಪ ರಕ್ಷಣೆ ಮಾಡುತ್ತದೆ ಎಂದು ನಂಬಲಾಗಿದೆ. ಅದೇ ರೀತಿಯಲ್ಲಿ ದೇಶದ 140 ಕೋಟಿ ಜನರ ತೆರಿಗೆ ಹಣವನ್ನು ನರೇಂದ್ರ ಮೋದಿ ಅವರು ಕಾಳಿಂಗ ಸರ್ಪದಂತೆ ಕಾಯುತ್ತಿದ್ದಾರೆ. ಅಲ್ಲದೇ, 130 ಕೋಟಿ ಜನರಿಗೆ ಕೊರೋನಾ ಲಸಿಕೆ ಎಂಬ ಅಮೃತವನ್ನು ನೀಡಿದ ಮೋದಿ ಅವರನ್ನು ವಿಷ ಸರ್ಪ ಎನ್ನುತ್ತೀರಾ ಎಂದು ಟೀಕಿಸಿದ್ದಾರೆ.
Also read: ಕಾರಿನಿಂದ ಕುಸಿದ ಸಿದ್ದರಾಮಯ್ಯ: ತಮ್ಮ ಘನತೆಗೆ ತಕ್ಕಂತೆ ಯಡಿಯೂರಪ್ಪ ಹೇಳಿದ್ದೇನು?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post