ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ನಿಷೇಧಿತ ಫಾಲ್ಸ್ ಬಳಿಯಲ್ಲಿ ಹುಚ್ಚಾಟ ಮೆರೆದ ಯುವಕರ ಬಟ್ಟೆಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ಸರಿಯಾಗಿ ಬುದ್ದಿ ಕಲಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಬಳಿಯ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಫಾಲ್ಸ್ #Falls ಅಪಾಯಕಾರಿಯಾಗಿದ್ದು, ಇಲ್ಲಿಗೆ ತೆರಳದಂತೆ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಆದರೆ, ಇದನ್ನು ಲೆಕ್ಕಿಸದೇ ಅಪಾಯಕಾರಿ ಜಾಗದಲ್ಲಿ ಯುವಕರು ಸ್ನಾನ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಎಚ್ಚರಿಕೆ ನೀಡಿದರೂ ಯುವಕರು ಮಾತು ಕೇಳಲಿಲ್ಲ. ಹೀಗಾಗಿ, ಯುವಕರು ಬಿಚ್ಚಿಟ್ಟಿದ್ದ ಬಟ್ಟೆಯಲ್ಲಿ ತೆಗೆದುಕೊಂಡು ಗಸ್ತು ವಾಹನದಲ್ಲಿ ಇರಿಸಿಕೊಂಡಿದ್ದಾರೆ.
ಇದರಿಂದ ಆತಂಕಕ್ಕೆ ಓಳಗಾದ ಯುವಕರು ಬರಿ ಚಡ್ಡಿಯಲ್ಲೇ ಪೊಲೀಸರ ಹಿಂದೆ ಸರ್… ಬಟ್ಟೆ ಕೊಡಿ ಎಂದು ಓಡಿಕೊಂಡು ಅಂಗಲಾಚಿದ್ದಾರೆ.
Also read: ಶಿವಮೊಗ್ಗ | ಊರಿನ ಹಿತಕ್ಕಾಗಿ ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟ ಮಹನೀಯ ಪವನ್ ಕುಮಾರ್
ಈ ಹಂತದಲ್ಲೂ ಪೊಲೀಸರೊಂದಿಗೆ ಯುವಕರು ವಾಗ್ವಾದ ನಡೆಸಿದ್ದಾರೆ. ಆದರೆ, ಪೊಲೀಸರ ಮಾತಿಗೆ ಬೆದರಿ ತಗ್ಗಿದ ಯುವಕರು ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಕ್ಷಮೆ ಯಾಚಿಸಿದ್ದಾರೆ. ಬಳಿಕ ಬುದ್ದಿವಾದ ಹೇಳಿ ಬಟ್ಟೆಗಳನ್ನು ಕೊಟ್ಟಿದ್ದಾರೆ.
ಮಳೆಗಾಲದಲ್ಲಿ ಮಲೆನಾಡು ಭಾಗದಲ್ಲಿ ಫಾಲ್ಸ್’ಗಳಲ್ಲಿ ನೀರಿನ ಪ್ರಮಾಣ ಹೆಚ್ಚಿರುತ್ತದೆ. ಅಲ್ಲದೇ, ಪದೇ ಪದೇ ಫಾಲ್ಸ್’ಗಳ ಬಳಿಯಲ್ಲಿ ಹುಚ್ಚಾಟ ಮೆರೆದ ಕೆಲವರು ದುರಂತ ಸಾವಿಗೀಡಾಗಿದ್ದಾರೆ. ಹೀಗಾಗಿ, ಪೊಲೀಸರು ಅಪಾಯಕಾರಿ ಫಾಲ್ಸ್’ಗಳ ಬಳಿ ತೆರಳದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post