ಜಮ್ಮು: ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಯೋಧರ ಮೇಲೆ ನಡೆಸಿದ ಭೀಕರ ದಾಳಿಯ ಮಾದರಿಯಲ್ಲೇ ಮತ್ತೆ ದಾಳಿ ನಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಮೇ 31ರವರೆಗೂ ಬಾರಾಮುಲ್ಲಾ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ಈ ಕುರಿತಂತೆ ಅಧಿಕೃತ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಮೇ 31ರವರೆಗೂ ಬಾರಾಮುಲ್ಲಾದಿಂದ ಉದಂಪುರಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ನಾಗರಿಕರಿಗೆ ಸಂಚರಿಸಲು ಅವಕಾಶವಿರುವುದಿಲ್ಲ.
ಲೋಕಸಭೆಗೆ ಮತದಾನ ನಡೆಯುವ ವೇಳೆಯಲ್ಲಿಯೇ ಉಗ್ರರು ಈ ಭಾಗದಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಹೆದ್ದಾರಿಯಲ್ಲಿ ಸಂಚಾರವನ್ನು ನಿಷೇಧಿಸಲಾಗಿದ್ದು, ಇಡಿಯ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
Discussion about this post