ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತಿರುಮಲ: ತಮ್ಮ ನಿವೃತ್ತಿಗೂ ಮುನ್ನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ನಿನ್ನೆ ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು.
ಆಂಧ್ರಪ್ರದೇಶದಲ್ಲಿರುವ ತಿರುಮಲಕ್ಕೆ ನಿನ್ನೆ ಪತ್ನಿ ಸಮೇತ ಭೇಟಿ ನೀಡಿದ ಅವರು, ದೇವರ ದರ್ಶನ ಪಡೆದು, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಗೊಗೋಯ್ ಹಾಗೂ ಅವರ ಕುಟುಂಬಸ್ಥರನ್ನು ವೇದ ಪಂಡಿತರು ಹಾಗೂ ದೇವಸ್ಥಾನದ ಪ್ರಮುಖರು ಮಂಗಳವಾದ್ಯ, ಪೂರ್ಣ ಕುಂಭದೊಂದಿಗೆ ದೇವಾಲಯದ ಮುಖ್ಯದ್ವಾರದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.
ನಂತರ ದೇವರ ದರ್ಶನ ಪಡೆದ ಸಿಜೆಐ ಅವರಿಗೆ ವೆಂಕಟೇಶ್ವರ ದೇವರ ಮೂರ್ತಿ ವಿಶೇಷ, ಆಭರಣಗಳ ವಿಶೇಷತೆ ಸೇರಿದಂತೆ ಹಲವು ವಿಚಾರಗಳನ್ನು ವಿವರಿಸಲಾಯಿತು. ಆನಂತರ, ವೇದಾಂಗ ಪಂಡಿತರು ಗೊಗೋಯ್ ಹಾಗೂ ಅವರ ಕುಟುಂಬಸ್ಥರಿಗೆ ರಂಗನಾಯಕುಲ ಮಂಟಪಂನಲ್ಲಿ ವೇದ ಆರ್ಶೀವಚನ ನೀಡಿ, ಹರಸಿದರು.
ಇದಕ್ಕೂ ಮೊದಲು ತಿರುಚನೂರು ಪದ್ಮಾವತಿ ದೇವಾಲಯಕ್ಕೆ ಭೇಟಿ ನೀಡಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಟಿಟಿಡಿ ಸಿಇಒ ಅನಿಲ್ ಕುಮಾರ್ ಸಿಂಘಾಲ್, ಆಡ್ಲ ಇಒ ಎವಿ ಧರ್ಮ ರೆಡ್ಡಿ, ವೆಂಕಟೇಶ್ವರ ದೇವರ ತೀರ್ಥ ಪ್ರಸಾದವನ್ನು ನೀಡಿದರು.
Get in Touch With Us info@kalpa.news Whatsapp: 9481252093
Discussion about this post