ನವದೆಹಲಿ: ಕರ್ನಾಟಕ ಚುನಾವಣಾ ಸಮರದಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಜೆಡಿಎಸ್ನೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡ ಕಾಂಗ್ರೆಸ್, ಈಗ ದೆಹಲಿಯಲ್ಲಿ ಎಎಪಿ ಜೊತೆಯಲ್ಲಿ ಕೈಜೋಡಿಸಲು ಚಿಂತನೆ ನಡೆಸಿದೆ.
2019ರಲ್ಲಿ ಲೋಕಸಭಾ ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಮಣಿಸಲೇ ಬೇಕು ಎಂಬ ಉದ್ದೇಶದಿಂದ ಅಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಇದೇ ಚಿಂತನೆಯನ್ನು ಎಎಪಿ ಸಹ ನಡೆಸಿದೆ ಎಂದು ತಿಳಿದುಬಂದಿದೆ.
2019 ಕ್ಕೆ ಮೋದಿಯ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ಪ್ರತಿ ಪಕ್ಷಗಳು ಮುಂದಾಗಿವೆ ಈ ಹಿನ್ನಲೆಯಲ್ಲಿ ಈಗಾಗಲೇ 2015 ರಲ್ಲಿನ ಬಿಹಾರದ ಮಹಾಮೈತ್ರಿ, ಕರ್ನಾಟಕದಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿಗಳ ಹಿನ್ನೆಲೆಯಲ್ಲಿ ಈಗ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ಮೈತ್ರಿ ಮಾತುಕತೆ ನಡೆಸಿದೆ ಎನ್ನಲಾಗಿದೆ.
ಮೇ 24 ರಂದು ಕಾಂಗ್ರೆಸ್ ಪಕ್ಷದ ಜೈರಾಮ್ ರಮೇಶ್ ಮತ್ತು ಅಜೇಯ್ ಮೆಕನ್ ಅವರು ಆಮ್ ಆದ್ಮಿ ಪಕ್ಷದ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಚರ್ಚೆಯ ವೇಳೆ 5:2 ರ ಹಂಚಿಕೆಯ ಮಾತುಕತೆಯಾಗಿದೆ ಎನ್ನಲಾಗಿದೆ.
5 ಸೀಟುಗಳು ಆಮ್ ಆದ್ಮಿ ಪಕ್ಷಕ್ಕೆ, ಇನ್ನುಳಿದ ಎರಡು ಸೀಟುಗಳು ಕಾಂಗ್ರೆಸ್ ಗೆ ಎಂದು ಹೇಳಲಾಗುತ್ತಿದೆ. ಈ ಮೈತ್ರಿಯ ಊಹಾಪೋಹವು ಇತ್ತೀಚಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮುಖ್ಯಮಂತ್ರಿ ಕೇಜ್ರಿವಾಲ್ ಹೊಗಳಿದ ನಂತರ ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.
Discussion about this post