ಶಿವಮೊಗ್ಗ: ರಾಜ್ಯ ವಿಧಾನಪರಿಷತ್ಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತಯಾಚನೆ ಮಾಡಲಿದ್ದಾರೆ.
ಜೂನ್ 4ರಂದು ಬೆಳಿಗ್ಗೆ 11ಕ್ಕೆ ಶಿಕಾರಿಪುರ ಮಂಗಳ ಭವನದಲ್ಲಿ ಏರ್ಪಡಿಸಿರುವ ಸಭೆಯಲ್ಲಿ ಭಾಗವಹಿಸಲಿದ್ದು, ನಂತರ 12.30ಕ್ಕೆ ಶಿರಾಳಕೊಪ್ಪ, ಮಧ್ಯಾಹ್ನ 2ಕ್ಕೆ ಸಾಗರ, 3ಕ್ಕೆ ರಿಪ್ಪನ್ ಪೇಟೆ, 4ಕ್ಕೆ ಆಯನೂರು, 5.30ಕ್ಕೆ ಹೊಳೆಹೊನ್ನೂರು, 6.30ಕ್ಕೆ ಶಿವಮೊಗ್ಗದ ಕೈಗಾರಿಕಾ ಸಂಘ ಭವನದಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ.
ಅಂದು ಸಂಜೆ 7ಕ್ಕೆ ಶುಭ ಮಂಗಳ ಸಮುದಾಯ ಭವನದಲ್ಲಿ ಆಯೋಜಿಸಿರುವ ಸಂವಾದ ಹಾಗೂ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಬಿಎಸ್ವೈ ಪಾಲ್ಗೊಳ್ಳಲಿದ್ದು, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಗಣೇಶ್ ಕಾರ್ಣಿಕ್ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಭಾಗವಹಿಸಲಿದ್ದಾರೆ.
Discussion about this post