ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಡೆಹ್ರಾಡೂನ್: ರೈಲಿನಲ್ಲಿ ಕಾಣಿಸಿಕೊಂಡ ಪರಿಣಾಮ ಪೂರ್ಣಗಿರಿ ಜನಶತಾಬ್ದಿ ರೈಲು ಬರೋಬ್ಬರಿ 35 ಕಿಮೀ ಹಿಮ್ಮುಖವಾಗಿ ವೇಗವಾಗಿ ಚಲಿಸಿದ್ದು, ಪ್ರಯಾಣಿಕರಲ್ಲಿ ಭಾರೀ ಆತಂಕ ಸೃಷ್ಠಿಸಿದ ಘಟನೆ ಉತ್ತರಾಖಂಡ್’ನಲ್ಲಿ ನಡೆದಿದೆ.
ಜಾನುವಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವೇಗವಾಗಿದ್ದ ರೈಲಿಗೆ ಬ್ರೇಕ್ ಹಾಕಲಾಗಿದೆ. ಪರಿಣಾಮವಾಗಿ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಏಕಾಏಕಿ ರೈಲು ಬಂಬಾಸಾ ನಿಲ್ದಾಣದ ಬಳಿಯಿಂದ ಹಿಮ್ಮುಖವಾಗಿ ಚಲಿಸಲು ಆರಂಭವಾಗಿದೆ. ಕ್ಷಣಾರ್ಧದಲ್ಲಿ ರೈಲಿನ ವೇಗ ಹೆಚ್ಚಾಗಿದ್ದು, ಅದೇ ವೇಗದಲ್ಲಿ ಸುಮಾರು 35 ಕಿಮೀ ದೂರಕ್ಕೆ ಚಲಿಸಿದೆ. ರೈಲಿನಲ್ಲಿ ಸುಮಾರು 60-70 ಪ್ರಯಾಣಿಕರೂ ಸಹ ಇದ್ದದ್ದು ಭಾರೀ ಆತಂಕಕ್ಕೆ ಕಾರಣವಾಗಿತ್ತು.
ನಿಲ್ಲಿಸಿದ್ದು ಹೇಗೆ?
ಬಂಬಾಸಾ ರೈಲು ನಿಲ್ದಾಣದಿಂದ ರೈಲು ಹಿಮ್ಮುಖವಾಗಿ ಚಲಿಸಲು ಆರಂಭವಾದ ತತಕ್ಷಣವೇ ಜಾಗೃತರಾದ ಅಧಿಕಾರಿಗಳು ಚರಕ್’ಪುರದ ಬಳಿಯಲ್ಲಿ ರೈಲು ಹಳಿಯ ಮೇಲೆ ಮಣ್ಣು ಹಾಗೂ ಹೊಟ್ಟನ್ನು ಸುರಿದು ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
The Purnagiri Janshatabdi Express
travelling from Delhi to Tanakpur rolled back for almost 35 kilometer before it was stopped at Udham Singh Nagar’s Khatima station
on Wednesday.The train was stopped by putting soil and aggregates on the track between Banbasa and #Khatima pic.twitter.com/o8FN1bXSfh— Kamal Mishra (@KMMIRROR) March 18, 2021
ಘಟನೆಯಲ್ಲಿ ಯಾರಿಗೂ, ಯಾವುದೇ ರೀತಿಯಲ್ಲಿ ಅಪಾಯವಾಗಿಲ್ಲ.
ಘಟನೆ ಹಿನ್ನೆಲೆಯಲ್ಲಿ ರೈಲಿನ ಲೋಕೋ ಪೈಲೆಟ್ ಹಾಗೂ ಗಾರ್ಡ್ ಇಬ್ಬರನ್ನೂ ಅಮಾನತು ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post