ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣದಲ್ಲಿ ಅವಶೇಷದ ಅಡಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬ ತಾನು ಬದುಕುತ್ತೇನೋ ಇಲ್ಲವೋ ಗೊತ್ತಿಲ್ಲದೇ ಸೆಲ್ಫಿ ತೆಗೆದುಕೊಂಡು ತನ್ನ ಕುಟುಂಬಸ್ಥರಿಗೆ ರವಾನಿಸಿರುವ ಪ್ರಸಂಗ ನಡೆದಿದೆ.
ಕಟ್ಟಡದ ಅವಶೇಷದಡಿ ಸಿಲುಕಿ ಪವಾಡ ಸದೃಶ್ಯ ಬದುಕಿ ಬಂದಿದ್ದ ಮಂಜುನಾಥ್ ಯಾವಗಲ್ ಎಂಬುವವರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಮಾತನಾಡಿದ್ದು, ನಾನು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾಗ ತುಂಬಾ ಆತಂಕಗೊಂಡಿದ್ದೆ. ನಾನು ಮೊಬೈಲ್ ತೆಗೆದು ನೋಡಿದಾಗ ಅದರಲ್ಲಿ ಸಿಗ್ನಲ್ ಇದ್ದಿದ್ದನ್ನು ಗಮನಿಸಿದೆ. ಕೂಡಲೇ ನಾನು ಬದುಕಿರುವುದನ್ನು ನನ್ನ ಕುಟುಂಬಸ್ಥರಿಗೆ ತಿಳಿಸುವ ಸಲುವಾಗಿ ಸೆಲ್ಫಿ ತೆಗೆದುಕೊಂಡು ಕಳುಹಿಸಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ವೇಳೆ ನಾನು ಓಂ ನಮಃ ಶಿವಾಯ ಎಂದು ಶಿವನಾಮವನ್ನು ಪಠಿಸುತ್ತಿದ್ದೆ. ಭಗವಂತ ನನ್ನನ್ನು ಕಾಪಾಡಿದ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
Discussion about this post