ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಹಳಿಯಾಳ ಬಳಿಯ ಲೋಕಸಭಾ ಚುನಾವಣಾ #LoksabhaElection ಚೆಕ್ ಪೋಸ್ಟ್’ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಲಕ್ಷಾಂತರ ರೂ. ಹಣ ಸೀಜ್ ಮಾಡಲಾಗಿದೆ.
ಹಳಿಯಾಳ #Haliyala ಚೆಕ್ ಪೋಸ್ಟ್’ನಲ್ಲಿ ಅಧಿಕಾರಿಗಳು ಕಾರು ತಪಾಸಣೆ ಮಾಡುವ ಸಂದರ್ಭದಲ್ಲಿ ಮಹಮ್ಮದ ಶಂಶುದ್ದೀನ್ ಎಂಬವರ ಬಳಿ ಸರಿಯಾದ ದಾಖಲೆ ಇರದ ರೂ.1.49 ಹಣ ಸಿಕ್ಕಿದ್ದು, ಸೀಜ್ ಮಾಡಿ, ಖಜಾನೆಯಲ್ಲಿ ಠೇವಣಿ ಮಾಡಲಾಗಿದೆ.
ಅಳ್ನಾವರ ಪಟ್ಟಣ ನಿವಾಸಿಯಾದ ಮಹಮ್ಮದ ಶಂಶುದ್ದೀನ್ ಎಂಬವರು ಹುಬ್ಬಳ್ಳಿಯಿಂದ ಕಾರಿನಲ್ಲಿ ಮೂಲಕ ಅಳ್ನಾವರಗೆ ತೆರಳುವಾಗ ಹಳಿಯಾಳ ಚೆಕ್ ಪೋಸ್ಟ್’ನಲ್ಲಿ #CheckPost ತಪಾಸಣೆ ಮಾಡಿದಾಗ ಅವರ ಬಳಿ ರೂ.1.49 ಲಕ್ಷ ನಗದು ಹಣ ದೊರಕಿದೆ.
ಅವರ ಬಳಿ ಇದ್ದ ದಾಖಲೆಗಳಿಗೂ ಮತ್ತು ಅವರಲ್ಲಿ ದೊರೆತ ಹಣಕ್ಕೂ ಸರಿಯಾದ ಹೊಂದಾಣಿಕೆ ಆಗದೇ ಇರುವದರಿಂದ ಅವರಲ್ಲಿನ ಹಣವನ್ನು ಮಾಜಿಸ್ಟ್ರೇಟ್ ನೇತೃತ್ವದ ಎಫ್’ಎಸ್ಟಿ ತಂಡದ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಎಫ್’ಎಸ್ಟಿ ತಂಡವು ಪತ್ತೆಯಾಗಿದೆ.
ಧಾರವಾಡ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಯಾವುದೇ ರೀತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಮತ್ತು ಅಕ್ರಮಗಳನ್ನು ತಡೆಗಟ್ಟಲು ಧಾರವಾಡ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post