ಕಲ್ಪ ಮೀಡಿಯಾ ಹೌಸ್ | ಧಾರವಾಡ |
ವ್ಯಕ್ತಿಯೊಬ್ಬರಿಗೆ ಸೈಟು ನೀಡುವುದಾಗಿ ಹಣ ಪಡೆದು ವಂಚನೆ ಮಾಡಿದ ಕಂಪೆನಿಯೊಂದಕ್ಕೆ ಜಿಲ್ಲಾ ಗ್ರಾಹಕರ ಆಯೋಗ ಭರ್ಜರಿ ದಂಡ ವಿಧಿಸಿರುವ ಘಟನೆ ನಡೆದಿದೆ.
ಧಾರವಾಡದ ಕೆಎಚ್’ಬಿ ಕಾಲೋನಿಯ ಹನುಮಂತಪ್ಪ ನಾಯಕರವರು ಮೈಸೂರಿನ ಶ್ರೀಗುರು ಮಲ್ಲೇಶರಿಯಲ್ ವ್ಯಾಲ್ಯು ಕಾರ್ಪೊರೇಟನ ಮೆಂರ್ಬ ಆಗಿದ್ದರು. ಅವರು 30*40 ಸೈಜಿನ ಪ್ಲಾಟ್’ಗೆ ಕಂತುಗಳ ಮೂಖಾಂತರ ಒಟ್ಟು ರೂ.3,16,800 ಪಾವತಿಸಿದ್ದರು. ಈ ಬಗ್ಗೆ ಎದುರುದಾರರು ಸೈಟ್ ಕೊಡುವ ಬಗ್ಗೆ ಬರವಸೆ ಕೊಟ್ಟು 2014ರ ಅಕ್ಟೋಬರ್ 7ರಂದು ಕರಾರು ಪತ್ರ ಬರೆದುಕೊಟ್ಟಿದ್ದರು. ಭೂಮಿ ಅಭಿವೃದ್ಧಿಗೊಳಿಸಿ ನಿಗಧಿತ ಅವಧಿಯಲ್ಲಿ ಎದುರುದಾರರು ಪ್ಲಾಟ್ನುö್ನ ದೂರುದಾರರಿಗೆ ನೋಂದಣಿ ಮಾಡಿಕೊಡಬೇಕಾಗಿತ್ತು. ಆದರೆ ಫಿರ್ಯಾದಿದಾರರಿಂದ ಎಲ್ಲ ಹಣ ಪಡೆದಿದ್ದರು ಎದುರುದಾರರು ಪ್ಲಾಟ್ ನೋಂದಣಿ ಮಾಡಿ ಕೊಟ್ಟಿರಲಿಲ್ಲ. ಎದುರುದಾರ ಈ ರೀತಿಯ ನಡಾವಳಿಕೆ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2022ರ ನವೆಂಬರ್ 25ರಂದು ದೂರು ನೀಡಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ದೂರುದಾರರಿಂದ ರೂ.3,16,800 ಹಣ ಪಡೆದುಕೊಂಡು ಒಪ್ಪಂದದಂತೆ ಅವರಿಗೆ ಪ್ಲಾಟ್ ನೋಂದಣಿ ಮಾಡಿಕೊಡವುದು ಎದುರುದಾರರ ಕರ್ತವ್ಯವಾಗಿದೆ. 7-8 ವರ್ಷ ಕಳೆದರು ಎದುರುದಾರರು ದೂರುದಾರರಿಗೆ ಪ್ಲಾಟ್ ನೋಂದ ಮಾಡಿಕೊಟ್ಟಿಲ್ಲ. ಅವರ ಹಣವನ್ನು ಎದುರುದಾರರು ವಾಪಸ್ಸು ಕೊಟ್ಟಿಲ್ಲ. ಅಂತಹ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
Also read: ವಿದ್ಯಾರ್ಥಿಗಳ ಮನೋವಿಕಾಸಕ್ಕೆ ನೃತ್ಯ ಸಹಕಾರಿ: ಮನೋವೈದ್ಯೆ ಡಾ.ಕೆ.ಎಸ್. ಪವಿತ್ರಾ ಅಭಿಮತ
ದೂರುದಾರರಿಂದ ಹಣ ಪಡೆದು ವ್ಯವಹರಣೆ ನಡೆಸಿರುವುದರಿಂದ ದೂರುದಾರ ಗ್ರಾಹಕರ ಅರ್ಥವಿವರಣೆಯೊಳಗೆ ಬರುತ್ತಾನೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.
ದೂರುದಾರರು ಸಂದಾಯ ಮಾಡಿದ ರೂ.3,16,800 ಹಾಗೂ ಅದರ ಮೇಲೆ ಶೇ.8 ರಂತೆ 2023ರ ಅಕ್ಟೋಬರ್ 31ರವರೆಗೂ ಬಡ್ಡಿ ರೂ.1,47,840 ಸೇರಿ ಒಟ್ಟು ರೂ.4,64,640 ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರರಿಗೆ ನೀಡುವಂತೆ ಆಯೋಗ ಎದುರುದಾರರಿಗೆ ನಿರ್ದೇಶಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50 ಸಾವಿರ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000 ನೀಡುವಂತೆ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post