ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್’ಡೌನ್ ಘೋಷಣೆ ಮಾಡಿರುವ ಪರಿಣಾಮ ತೊಂದರೆಗೆ ಸಿಲುಕಿರುವ ನಿರಾಶ್ರಿತರಿಗೆ ವಿವಿಧ ಅಂಗಡಿ ಮಾಲೀಕರಿಂದ ಅಗತ್ಯ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು.
ಕಿಶೋರ್ ಮತ್ತು ಸ್ನೇಹಿತರು-ಸ್ವರ್ಣ ಟೂರ್ರ್ಸ್ ಅಂಡ್ ಟ್ರಾವೆಲ್ಸ್, ಭದ್ರಾವತಿ ಗಿರೀಶ್-ವಾಣಿ ಸ್ಟೋರ್ರ್ಸ್, ಭದ್ರಾವತಿ ಭರತ್-ಸಂಜಯ್ ಹಾರ್ಡ್’ವೇರ್ ಭದ್ರಾವತಿ ಹಾಗೂ ಭದ್ರಾವತಿಯ ಮಾಜಿ ಸೈನಿಕರ ಗಿರಿ, ವೆಂಕಟೇಶ್, ಅಭಿಲಾಶ್, ದೇವರಾಜ್, ರಮೇಶ್ ಇದರಲ್ಲಿ ಪಾಲ್ಗೊಂಡಿದ್ದರು.
ನಗರಸಭಾ ಆಯುಕ್ತರು, ಭದ್ರಾವತಿಯ ಡಿವೈಎಸ್’ಪಿ, ನಗರಸಭೆಯ ರುದ್ರಗೌಡರು ಇವರಿಗೆ ಸಹಕಾರ ನೀಡಿದ್ದಾರೆ.
ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಿರಾಶ್ರಿತರಿಗೆ ನೆರವಾಗುವ ಉದ್ದೇಶವನ್ನು ಇವರು ಹೊಂದಿದ್ದು, ಯಾರಾದರೂ ಸಹ ಅಕ್ಕಿ ಎಣ್ಣೆ ತರಕಾರಿ ಸಹಾಯ ಮಾಡುವವರು 9900188534 ಗೆ ಸಂಖ್ಯೆ ಸಂಪರ್ಕಿಸಬಹುದು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post