ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿಕ್ಕಬಳ್ಳಾಪುರ: ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೋನಾ ಕಾಯಿಲೆಯ ಹಾವಳಿಯನ್ನು ದೂರ ಮಾಡಬಹುದು ಎಂದು ಶ್ರೀ ಸಾಯಿ ಗಂಗಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಕೆ.ಟಿ. ಗಂಗಾಧರ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಆಶಾ ಮತ್ತು ಶ್ರೀಸಾಯಿಗಂಗಾ ಫೌಂಡೇಷನ್ ಹಾಗೂ ತಾಲೂಕಿನ ಕೊರೋನಾ ಸೈನಿಕರಿಂದ ಇಂದು ಜಿಲ್ಲಾ ಆಸ್ವತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸೆ ಮುಖ್ಯಸ್ಥ ರಮೇಶ್ ರವರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿ ಚಾಲನೆ ನೀಡಲಾಯಿತು.
ಕೊರೋನಾ ತಾಲೂಕು ಸಂಯೋಜಕ ಸ್ಟುಡಿಯೋ ಶ್ರೀನಿವಾಸ ಮಾತನಾಡಿ, ಹಳ್ಳಿಗಳಲ್ಲಿ ಜನರು ಹೆಚ್ಚಾಗಿ ಕೊರೋನಾ ಕಾಯಿಲೆ ಹರಡುವ ವಿಚಾರದ ಬಗ್ಗೆ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರಬೇಕು. ಆಗ ಮಾತ್ರ ಕೊರೋನಾ ಎಂಬ ಮಾರಕ ಕಾಯಿಲೆ ನಮ್ಮಿಂದ ದೂರಮಾಡಲು ಸಾಧ್ಯ ಎಂದು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಕೊತ್ತನೂರು ಮತ್ತು ತುಮಕಲಹಳ್ಳಿಗಳಿಗೆ ಭೇಟಿ ನೀಡಿ, ಜನರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್, ಆಹಾರ ಧವಸ ಧಾನ್ಯಗಳ ಕಿಟ್’ಗಳನ್ನು ನೀಡಲಾಯಿತು. ಇದೇ ವೇಳೆಯಲ್ಲಿ ವಲಸೆ ಕಾರ್ಮಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಆಶಾ ಫೌಂಡೇಶನ್, ಶ್ರೀ ಸಾಯಿ ಗಂಗಾ ಫೌಂಡೇಶನ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆಶಾ ಫೌಂಡೇಷನ್ ಸಂಸ್ಥಾಪಕ ಕಾರ್ಯದರ್ಶಿ ಆಶಾ ಮಂಚನ ಬಲೆ, ಕೊರೋನಾ ಸೈನಿಕ ಮೋಹನ್ ಕುಮಾರ್ ಗೌಡ , ವಿಶ್ವನಾಥ್, ಸತೀಶ್, ಪ್ರಜ್ವಲ್, ಮೋಹಿತ್, ದಿಲೀಪ್, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
Get in Touch With Us info@kalpa.news Whatsapp: 9481252093
Discussion about this post