ನವದೆಹಲಿ: ಅದು ಭಾರತೀಯ ಸೇನೆಯ ಯೋಧರ ಮೇಲೆ ಈಶಾನ್ಯ ಪ್ರದೇಶದಲ್ಲಿ ಉಗ್ರರು ನಡೆಸಿದ ಅತ್ಯಂತ ಕ್ರೂರ ದಾಳಿಗೆ ಇಡಿಯ ಭಾರತವೇ ಬೆಚ್ಚಿ ಬಿದ್ದಿತ್ತು. ಆ ದಾಳಿಯಲ್ಲಿ 18 ಯೋಧರು ವೀರಸ್ವರ್ಗ ಸೇರಿದ್ದರು.
ಇಂತಹ ದಾಳಿಯಿಂದ ಕೆರಳಿದ್ದ ಭಾರತೀಯ ಸೇನೆ ಹಾಗೂ ಭಾರತ ಸರ್ಕಾರ ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿ, ಮ್ಯಾನ್ಮಾರ್ ಗಡಿಗೆ ನುಗ್ಗಿ ನಡೆಸಿದ ದಾಳಿ ಹೇಗಿತ್ತು ಎಂದರೆ, ಇಡಿಯ ವಿಶ್ವಕ್ಕೇ ಭಾರತೀಯ ಸೇನೆಯ ತಾಕತ್ತಿನ ಅನಾವರಣವಾಗಿತ್ತು.
ಈ ದಾಳಿ ನಡೆದ ವರ್ಷಗಳ ನಂತರ ಇಡಿಯ ಕಾರ್ಯಾಚರಣೆಯ ಕುರಿತಾಗಿ ಅಂತಾರಾಷ್ಟಿಯ ಮಾದ್ಯಮವೊಂದು ಅದ್ಬುತವಾಗಿ ಡಾಕ್ಯುಮೆಂಟರಿಯೊಂದನ್ನು ರೂಪಿಸಿದೆ.
ಹಿಸ್ಟರಿ ಟಿವಿ18 ಈ ವಿಶೇಷ ಡಾಕ್ಯುಮೆಂಟರಿಯನ್ನು ಸಿದ್ದಪಡಿಸಿದ್ದು, ಭಾರತೀಯ ಯೋಧರ ಮೇಲೆ ನಡೆದ ದಾಳಿಯಿಂದ ಮೊದಲ್ಗೊಂಡು, ಸೇಡು ತೀರಿಸಿಕೊಂಡ ಭಾರತೀಯ ಸೇನೆಯ ತಾಕತ್ತನ್ನು ಇಂಚಿಂಚಾಗಿ ಅನಾವರಣ ಮಾಡಲಾಗಿದೆ.
ಒಟ್ಟು 44 ನಿಮಿಷ 16 ಸೆಕೆಂಡಿನ ಈ ಡಾಕ್ಯುಮೆಂಟರಿ ಎಷ್ಟು ಅದ್ಬುತ ಹಾಗೂ ನೈಜವಾಗಿ ಮೂಡಿಬಂದಿದೆ ಎಂದರೆ ಯಾವುದೇ ಕಮರ್ಷಿಯಲ್ ಚಿತ್ರಕ್ಕೆ ಕಡಿಮೆಯಿಲ್ಲದಂತೆ ರೂಪಿತಗೊಂಡಿದೆ.
ಡಾಕ್ಯುಮೆಂಟರಿಯಲ್ಲಿ ಇಡಿಯ ಘಟನೆಯನ್ನು ಮರುಸೃಷ್ಠಿ ಮಾಡಲಾಗಿದ್ದು, ರಕ್ಷಣಾ ಸಚಿವರು, ಸೇನಾ ಮುಖ್ಯಸ್ಥರು, ರಾಷ್ಟಿಯ ಭದ್ರತಾ ಸಲಹೆಗಾರರು ಸೇರಿದಂತೆ ಪ್ರಮುಖ ಸಂದರ್ಶನವೂ ಸಹ ಇದರಲ್ಲಿ ಸೇರಿದೆ.
ಇಂತಹ ಒಂದು ವೀಡಿಯೋವನ್ನು ನೀವು ನೋಡದೇ ಇದ್ದರೆ ಅತ್ಯಂತ ಅಮೂಲ್ಯವಾದುದನ್ನೇ ನೀವು ಮಿಸ್ ಮಾಡಿಕೊಳ್ಳುತ್ತೀರಿ… ತಪ್ಪದೇ ಈ ವೀಡಿಯೋ ನೋಡಿ ಹಾಗೂ ಶೇರ್ ಮಾಡಿ…
Discussion about this post