Monday, June 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ನಿಮ್ಮ ಜೀವನದಲ್ಲೊಮ್ಮೆ ತಪ್ಪದೇ ತೊರವೆ ಲಕ್ಷ್ಮೀ ನರಸಿಂಹ ಸ್ವಾಮಿಯ ದರ್ಶನ ಮಾಡಿ

May 4, 2019
in Special Articles
0 0
0
Share on facebookShare on TwitterWhatsapp
Read - 2 minutes

ಹೌದು… ಪೌರಾಣಿಕ ಹಿನ್ನೆಲೆಯುಳ್ಳ ದೇವಾಲಯಗಳು ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಹಲವಾರಿದ್ದು, ಇವುಗಳ ಐತಿಹ್ಯ, ವಿಶೇಷತೆ ಹಿಂದೂ ಸಂಸ್ಕೃತಿ, ಧಾರ್ಮಿಕ ಆಚರಣೆ ಹಾಗೂ ಮಹತ್ವವನ್ನು ಸಾರುತ್ತದೆ. ಅದರಂತೆ ವಿಜಯಪುರ ಜಿಲ್ಲೆಯ ತೊರವೆ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯವೂ ಸಹ ಒಂದು.
ತೋರವೆಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ ವಿಜಯಪುರ ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳದಲ್ಲಿ ಒಂದು. ಇದು ಐತಿಹಾಸಿಕ ದೇವಾಲಯವಾಗಿದ್ದು, ಪೌರಾಣಿಕ ಹಿನ್ನೆಲೆಯು ಇದೆ.

ದುರ್ವಾಸ ಮುನಿಗಳು ಪೂಜಿಸುತ್ತಿದ್ದರೆಂದು ಐತಿಹ್ಯವಿದೆ. ದುರ್ವಾಸರು ಕಾರಣ ನರಸಿಂಹ ಸ್ವಾಮಿಯನ್ನು ದುರ್ವಾಸಕರಾರ್ಜಿತ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ಎನ್ನಲಾಗುತ್ತದೆ. ನರಸಿಂಹ ಸ್ವಾಮಿ ಪಕ್ಕದಲ್ಲಿ ರುದ್ರ ದೇವರು ಇರುವುದರಿಂದ ರುದ್ರಾಂಗತ ಶ್ರೀಲಕ್ಷ್ಮೀನರಸಿಂಹ ಎಂದೂ ಸಹ ಕರೆಯುತ್ತಾರೆ. ಪ್ರತಿದಿನವೂ ಇಲ್ಲಿ ಪಂಚಾಮೃತ ಅಭಿಷೇಕ ಮತ್ತು ನವರಾತ್ರಿಗಳಲ್ಲಿ ವಿಶೇಷ ಉತ್ಸವ ಕಾರ್ಯಕ್ರಮಗಳು ನಡೆಯುತ್ತವೆ.

ಇಲ್ಲಿಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವರು ಭಕ್ತರ ಮನೋಕಾಮನೆಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿಯೇ ನೆರವೇರಿಸುತ್ತಿದ್ದ ಕಾರಣ ಗ್ರಾಮವನ್ನು ತ್ವರಿತಾಲಯ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದು ಶಾಹಿ ಆಳ್ವಿಕೆಯ ಪೂರ್ವದಲ್ಲಿದ್ದ ದೇವಾಲಯ. ತೊರವೆ ಗ್ರಾಮವು ಆಗ ಒಂಬತ್ತು ಲಕ್ಷ ಜನಸಂಖ್ಯೆಯುಳ್ಳ ದೊಡ್ಡ ಪಟ್ಟಣವಾಗಿತ್ತು.

ಒಕ್ಕಳಮಟ್ಟಿ ನರಸಿಂಹ ದೇವರು
ಈಗಿರುವ ಶ್ರೀಲಕ್ಷ್ಮೀ ನರಸಿಂಹ ದೇವರಿಗಿಂತಲೂ ಮೊದಲು ಒಕ್ಕಳಮಟ್ಟಿ ನರಸಿಂಹ ಸ್ವಾಮಿ ದೇವರನ್ನು ಪೂಜಿಸಲಾಗುತ್ತಿತ್ತು. ಸ್ವಾಮಿಗೆ ಪ್ರತಿದಿನವೂ ನಲವತ್ತು ಕೆಜಿ ಹಯಗ್ರೀವವನ್ನು ಸ್ವಲ್ಪವು ಮಡಿಗೆ ಚ್ಯುತಿ ಬರದೆ ಸಮರ್ಪಿಸಬೇಕಿತ್ತು. ಸ್ವಲ್ಪ ಹೆಚ್ಚುಕಮ್ಮಿಯಾದರೂ ಒಕ್ಕಳಮಟ್ಟಿ ನರಸಿಂಹ ಸ್ವಾಮಿ ಶಿಕ್ಷಿಸುತ್ತಾರೆ ಎಂಬುದು ಜನರ ನಂಬಿಕೆಯಾಗಿತ್ತು.

ಅಚಾನಕ್ಕಾಗಿ ಆದ ತಪ್ಪುಗಳಿಗೂ ಶಿಕ್ಷೆಗೆ ಭಕ್ತರನ್ನು ಕಂಡು ಸ್ವತಃ ನರಸಿಂಹ ಸ್ವಾಮಿಯೇ ಮರುಕಪಟ್ಟು, ದೇವಾಲಯದಿಂದ ಹೊರಡಲು ನಿಶ್ಚಯಿಸಿದರಂತೆ. ಅರ್ಚಕರಿಗೆ ಸ್ವಪ್ನದಲ್ಲಿ ಬಂದು ತಮ್ಮನ್ನು ಗುಪ್ತಗಂಗೆಯಲ್ಲಿ ವಿಸರ್ಜನೆ ಮಾಡುವಂತೆ ಆದೇಶಿಸಿದರಂತೆ. ಅರ್ಚಕರು ಆದೇಶದಂತೆ ನಡೆದುಕೊಂಡರು.

ದೇವರ ಮೂರ್ತಿ ಪ್ರತಿಷ್ಠಾಪನೆ
ಒಕ್ಕಳಮಟ್ಟಿ ನರಸಿಂಹ ಸ್ವಾಮಿ ದೇವರನ್ನು ಗುಪ್ತಗಂಗೆಯಲ್ಲಿ ವಿಸರ್ಜನೆ ಮಾಡಿದ ನಂತರ, ಅರ್ಚಕರಿಗೆ ಬರುವ ಭಕ್ತರಿಗೆ ದೇವರು ಎಲ್ಲಿ ಎಂದರೆ ಏನು ಹೇಳಬೇಕು..?’ ಎಂಬ ಚಿಂತೆ ಕಾಡಿತು. ಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಸಿದಾಗ ಸ್ವಪ್ನದಲ್ಲಿ ಕಾಣಿಸಿಕೊಂಡ ನರಸಿಂಹ ಸ್ವಾಮಿಯು, ವಿಸರ್ಜನೆ ಮಾಡಿದ ಸ್ಥಳದ ಬಳಿ ಬರುವಂತೆ ಹೇಳಿದರು. ಮರುದಿನ ಅರ್ಚಕರೆಲ್ಲ ಗುಪ್ತಗಂಗೆಯಲ್ಲಿ ಸ್ನಾನಮಾಡಿ, ತಪಸ್ಸು ಮಾಡಿದಾಗ ನರಸಿಂಹ ಸ್ವಾಮಿ ವಿಗ್ರಹವು ಮೇಲೆ ಬಂದು ನಾನು ಬರಲಾರೆ, ನನ್ನ ತಮ್ಮನನ್ನು ಕಳಿಸುವೆ. ನೀವು ಹಸಿಮೇವನ್ನು ತೆಗೆದುಕೊಂಡು ಕೃಷ್ಣತೀರದಿಂದ ದಕ್ಷಿಣಕ್ಕೆ ಹೋಗಿರಿ. ಮೇವಿಗೆ ಯಾವಾಗ ಸ್ಪರ್ಶ ಆಗುತ್ತದೆಯೋ ಅದೇ ಸ್ಥಳದಲ್ಲಿ ನನ್ನ ತಮ್ಮನಿರುತ್ತಾನೆ’ ಎಂದು ಹೇಳಿ ಗುಪ್ತಗಂಗೆಯಲ್ಲಿ ಗುಪ್ತರಾದರು. ಅರ್ಚಕರೆಲ್ಲರೂ ಮಡಿಯಿಂದ ಹಸಿಮೇವನ್ನು ಎತ್ತಿನ ಬಂಡಿಯಲ್ಲಿ ತೆಗೆದುಕೊಂಡು, ಕೃಷ್ಣ ತೀರಕ್ಕೆ ಹೊರಟರು. ಸಮೀಪದ ಚಿಮ್ಮಲಗಿ ಗ್ರಾಮದ ದೇಶಪಾಂಡೆ ವಂಶದ ಒಡೆತನದ ಜಮೀನಿನಲ್ಲಿ ಬಂದಾಗ ಮೇವಿಗೆ ಅಗ್ನಿಸ್ಪರ್ಶವಾಗುತ್ತದೆ. ಭೂಮಿಯ ಒಳಗೆ ಶ್ರೀಲಕ್ಷ್ಮೀಸಹಿತನಾಗಿರುವ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯ ಮೂರ್ತಿಯು ಸಿಗುತ್ತದೆ. ದೇಶಪಾಂಡೆ ವಂಶಸ್ಥರ ಸ್ವಪ್ನದಲ್ಲಿ ನರಸಿಂಹ ಸ್ವಾಮಿ ಕಂಡು ಅವರೊಂದಿಗೆ ನನ್ನನ್ನು ಕಳುಹಿಸಿ, ತೋರವಿ ಗ್ರಾಮದಲ್ಲಿ ಪ್ರತಿಷ್ಟಾಪನೆಗೊಳ್ಳುವೆ’ ಎಂದು ಹೇಳಿದಾಗ, ಅರ್ಚಕರು ಹಿಂತಿರುಗಿ ತೋರವಿ ಗ್ರಾಮಕ್ಕೆ ಬಂದು, ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗೆ ಪ್ರತಿಷ್ಠಾಪನೆಗೊಂಡ, ತೋರವಿ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯ ಮೂರ್ತಿಯು ವಿಶೇಷವಾಗಿದ್ದು, ಬಲಭಾಗದಲ್ಲಿ ಶ್ರೀಲಕ್ಷ್ಮೀ, ಎಡಭಾಗದಲ್ಲಿ ಪ್ರಹ್ಲಾದನ ಮೂರ್ತಿ ಇದೆ.

ತೋರವಿಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಿಂದ ಸ್ವಲ್ಪವೇ ದೂರದಲ್ಲಿದೆ ಗುಪ್ತಗಂಗಾ ಎಂಬ ಬಾವಿ. ಆದಿಲ್ ಶಾಹಿಯು ಪಶ್ಚಿಮ ಯುದ್ದದಲ್ಲಿ ವಿಜಯ ಸಾಧಿಸಿ ಹಿಂತಿರುಗುವಾಗ ಗಂಗೆಯು ಸುಲ್ತಾನನಿಗೆ ನಿನ್ನನ್ನು ಹಿಂಬಾಲಿಸುತ್ತೇನೆ. ಆದರೆ ನೀನು ಹಿಂತಿರುಗಿ ನೋಡಿದರೆ ಅದೇ ಸ್ಥಳದಲ್ಲಿ ನೆಲೆಸುತ್ತೇನೆ’ ಎಂದು ಉತ್ತರಿಸುತ್ತಾಳೆ. ಸುಲ್ತಾನನು ತೋರವಿ ಗ್ರಾಮ ಸಮೀಪಿಸಿದಾಗ ಕುತೂಹಲ ತಡೆಯದೆ ಹಿಂದಿರುಗಿ ನೋಡುತ್ತಾನೆ. ಗಂಗೆಯು ಅಲ್ಲಿಯೇ ನೆಲೆಸುತ್ತಾಳೆ. ಎಷ್ಟೇ ಬರಗಾಲ ಬಂದರೂ ಇಲ್ಲಿ ಮಾತ್ರ ಎಂದಿಗೂ ನೀರು ಬತ್ತುವುದಿಲ್ಲ.

ನರಹರಿ ರಚಿತ ತೋರವೆ ರಾಮಾಯಣ
ತೊರವೆಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಜಾಗೃತ ಮತ್ತು ಶಕ್ತಿಯುತವಾದ ಕ್ಷೇತ್ರ. ಇದೇ ಕ್ಷೇತ್ರದಲ್ಲಿ ನರಹರಿಯು ತೋರವೆ ರಾಮಾಯಣ ರಚಿಸುತ್ತಾರೆ. ಈ ಕೃತಿಗೆ ಶ್ರೀಕುಮಾರ ವಾಲ್ಮೀಕಿ ಕೃತಿ ಶ್ರೀ ಬಿರುದನ್ನು ಕೊಡಲಾಗುತ್ತದೆ. ಪುರಂದರದಾಸರು ಇದೇ ಕ್ಷೇತ್ರದಲ್ಲಿ ಐದಾರು ಹಾಡುಗಳನ್ನು ಬರೆದಿದ್ದಾರೆ.

(ಮಾಹಿತಿ ಕೃಪೆ: ವಾಟ್ಸಪ್ ಸ್ನೇಹಿತರು)

Tags: Hindu TempleKannada ArticleSpecial ArticleTempleToraviVijayapuraತೊರವೆ ಲಕ್ಷ್ಮೀ ನರಸಿಂಹ ಸ್ವಾಮಿದೇವಾಲಯಪುರಂದರದಾಸರುಹಯಗ್ರೀವ
Previous Post

ನಿರಾಸೆಯೆಂಬುದ ಮರೆತು ಬದುಕಿ ಬಿಡೋಣವೇ

Next Post

ಕೋಟೆನಾಡಿನಲ್ಲಿ ಅದ್ಧೂರಿ ತೀಜ್ ಹಬ್ಬ, ಕುಣಿದು ಕುಪ್ಪಳಿಸಿದ ಯುವತಿಯರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕೋಟೆನಾಡಿನಲ್ಲಿ ಅದ್ಧೂರಿ ತೀಜ್ ಹಬ್ಬ, ಕುಣಿದು ಕುಪ್ಪಳಿಸಿದ ಯುವತಿಯರು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸೀಳುತುಟಿ | ಮುಂಜಾಗ್ರತೆಯಿಂದ ತಡೆ ಸಾಧ್ಯವೇ? ಡಾ. ನಾಗೇಂದ್ರ ಹೇಳಿದ್ದೇನು?

June 23, 2025

ಶಾಸಕ ಸುನೀಲ್ ಕುಮಾರ್ ನೈತಿಕತೆಯ ಬಗ್ಗೆ ತಿಳಿದುಕೊಂಡು ಮಾತನಾಡಲಿ

June 23, 2025

ಪ್ರತಿಯೊಬ್ಬರು ಯೋಗವನ್ನು ನಿತ್ಯ ಪರಂಪರೆಯಾಗಿ ಅಳವಡಿಸಿಕೊಳ್ಳಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

June 23, 2025

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸೀಳುತುಟಿ | ಮುಂಜಾಗ್ರತೆಯಿಂದ ತಡೆ ಸಾಧ್ಯವೇ? ಡಾ. ನಾಗೇಂದ್ರ ಹೇಳಿದ್ದೇನು?

June 23, 2025

ಶಾಸಕ ಸುನೀಲ್ ಕುಮಾರ್ ನೈತಿಕತೆಯ ಬಗ್ಗೆ ತಿಳಿದುಕೊಂಡು ಮಾತನಾಡಲಿ

June 23, 2025

ಪ್ರತಿಯೊಬ್ಬರು ಯೋಗವನ್ನು ನಿತ್ಯ ಪರಂಪರೆಯಾಗಿ ಅಳವಡಿಸಿಕೊಳ್ಳಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

June 23, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!