ಸೊರಬ: ಪ್ರಾಕೃತಿಕ ಅವಘಡಕ್ಕೆ, ಪರಿಸರದ ಅಸಮತೋಲನಕ್ಕೆ ಕಾರಣವಾಗುವ ಬೃಹತ್ ನೀರಾವರಿ ಯೋಜನೆ ಸರ್ವಕಾಲಕ್ಕೂ ಸಲ್ಲ. ಎಂದು ಖ್ಯಾತ ಸಾಹಿತಿ ನಾ. ಡಿಸೋಜಾ ಹೇಳಿದರು.
ಪಟ್ಟಣದ ಡಾ.ಯು.ಕೆ.ಶೆಟ್ಟಿ ಆಸ್ಪತ್ರೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜನಪದ ಪರಿಷತ್, ಅಖಿಲಭಾರತೀಯ ಸಾಹಿತ್ಯ ಪರಿಷತ್, ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್, ಅಜೇಯ ಬಳಗ, ವೇದಿಕೆ ಪರಿಷತ್ತಿನ ಮಹಿಳಾ ಘಟಕ ಹಾಗೂ ಸೌರಭ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ನಾ.ಡಿಸೋಜಾ ಮುಳುಗಡೆ ಕಾದಂಬರಿ ಮತ್ತು ದ್ವೀಪ ಚಲನಚಿತ್ರದ ವೈಚಾರಿಕ ವಿಮರ್ಶೆ, ಸಂವಾದ ಕಾರ್ಯಕ್ರಮ ಅವರು ಉದ್ಘಾಟಿಸಿ ಮಾತನಾಡಿದರು.
ಕೆಳದಿ ಅರಸರ ಕಾಲದಲ್ಲಿಯೆ ಬೇಕಾದಷ್ಟು ಬೃಹತ್ ನೀರಾವರಿ ಯೋಜನೆ ಮಾಡಬಹುದಿತ್ತು, ಆದರೆ, ಅದರ ಬದಲಿಗೆ ಅವರುಗಳು ಗ್ರಾಮಾಭಿವೃದ್ಧಿಗೆ ಪೂರಕವಾಗುವ ಕೆರೆಕಟ್ಟೆ ನಿರ್ಮಿಸಿ ಮಾನವ ಮತ್ತು ಪರಿಸರದ ಅವಿನಾಭಾವ ಸಂಬಂಧವನ್ನು ಉಳಿಸಿಕೊಟ್ಟರು.
ದ್ವೀಪ, ವಡ್ಡು, ಮುಳುಗಡೆ ಈ ಎಲ್ಲ ಕಾದಂಬರಿಗಳು ಶರಾವತಿ ನದಿಗೆ ನಿರ್ಮಿಸಿದ ಅಣೆಕಟ್ಟೆನಿಂದ ಉಂಟಾದ ಸಾಮಾಜಿಕ ತಲ್ಲಣಗಳ ಚಿತ್ರಣಗಳು, ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿಗಳು. ಈ ಹಿನ್ನೆಲೆಯಲ್ಲಿ ಗಿರೀಶ್ ಕಾಸರವಳ್ಳಿಯವರು ಅತ್ಯಂತ ಮನೋಜ್ಞವಾಗಿ, ಜನಸಾಮಾನ್ಯರ ಮನತಟ್ಟುವಂತೆ ದೃಶ್ಯ ಮಾಧ್ಯಮಕ್ಕೆ ತಲುಪಿಸಿದ್ದು, ಗರಿಮೆಯೆಂಬಂತೆ ಈ ಸಿನೇಮಾಕ್ಕೆ ಅತ್ಯುನ್ನತ ಪ್ರಶಸ್ತಿಯೂ ದೊರಕಿತು ಎಂದ ಅವರು ಕಾಸರವಳ್ಳಿಯವರಿಗೆ, ಸಿನೆಮಾ ನಟಿ ದಿ.ಐಶ್ವರ್ಯ ಅವರನ್ನು ನೆನಪಿಸಿಕೊಂಡರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಪ್ರಾಚಾರ್ಯ ಎಚ್.ಬಿ. ಪಂಚಾಕ್ಷರಯ್ಯ ಪರಿಸರ ಅಸಮತೋಲನದ ಅಂಕಿ ಅಂಶಗಳ ಕುರಿತಂತೆ ಮಾಹಿತಿ ನೀಡಿದರು.
ಕಜಾಪ ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಸಂವಾದದಲ್ಲಿ ಸಾಹಿತಿ ರೇವಣಪ್ಪ ಬಿದರಗೆರೆ, ಚುಟುಕು ಕವಿ ಮಂಜಪ್ಪ ಹುಲ್ತಿಕೊಪ್ಪ, ಉಪನ್ಯಾಸಕ ರಮೇಶ್ ಎಲ್.ಎಸ್. ಲಿಪಿ ತಜ್ಞ ರಮೇಶ್ ಕಾರಂತ್, ಚಿಂತಕ ಭಾರ್ಗವ ನಾಡಿಗ್, ಶಿಕ್ಷಕಿ ಸುಮಿತ್ರಾ ಹೆಗಡೆ, ರೋಟರಿ ಮಾಜಿ ಅಧ್ಯಕ್ಷ ವೈದ್ಯ ಡಾ.ಜ್ಞಾನೇಶ್, ಅಭಾಶಸಾಪ ಅಧ್ಯಕ್ಷ ಕೃಷ್ಣಾನಂದ್, ಉಪನ್ಯಾಸಕಿ ಪವಿತ್ರಾ ರಂಗನಾಥ್, ಮೋಹನಸುರಭಿ ಪಾಲ್ಗೊಂಡಿದ್ದರು. ಕಿರುಚಿತ್ರ ದಿಗ್ಧರ್ಶಕ ಲಕ್ಷ್ಮಣ್ ಕುಪ್ಪಗಡ್ಡೆ ಚಿತ್ರವೀಕ್ಷಣೆಗೆ ಚಾಲನೆ ನೀಡಿದರು.
ಕಸಾಸಾಂವೇ ಅಧ್ಯಕ್ಷ ಷಣ್ಮುಖಾಚಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಹಾಗೂ ದ್ವೀಪ ಸಿನೆಮಾ ಕುರಿತಂತೆಜಾಪ ಗೌರವಾಧ್ಯಕ್ಷ ಚಿಂತಕ ರಾಜಪ್ಪ ಮಾಸ್ತರ್ ಅವಲೋಕನ ಮಾತನಾಡಿದರು.
ಕಸಾಸಾಂವೇ ಗೌರವಾಧ್ಯಕ್ಷ ಶಿವಾನಂದಪಾಣಿ, ಮಹಿಳಾಘಟಕದ ಅಧ್ಯಕ್ಷೆ ಸುಜಾತ ಜೋತಾಡಿ, ಪ್ರಧಾನ ಕಾರ್ಯದರ್ಶಿ ಗೌರಮ್ಮ ಭಂಡಾರಿ, ಕೋಶಾಧ್ಯಕ್ಷ ಸೈಯದ್ ಅನ್ಸರ್, ರೋಟರಿ ಜಿಪಂ ಮಾಜಿ ಉಪಾಧ್ಯಕ್ಷ ಪಾಣಿರಾಜಪ್ಪ, ಸ್ವಾಸ ಭಾರತದ ಸದಾನಂದಗೌಡ, ರೋಟರಿ ಅಧ್ಯಕ್ಷ ಶಂಕರಶೇಟ್, ಸಾಹಿತಿ ಕಡಸೂರು ಬಸವಣ್ಯಪ್ಪ, ಮೋಟಪ್ಪ ಬಿದರಗೆರೆ, ಜೆಸಿ ಶಿವಕುರ್ಮಾ, ಪ್ರವೀಣ್ ದೊಡ್ಡಮನೆ, ಸಮರ್ಪಣ ಸಂಸ್ಥೆಯ ಮಮತಾ ರಾಜೇಶ್, ಕಸಾಪ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಎಬಿಸಿಡಿ ಫಿಟ್ನೆಸ್ ಸಂಸ್ಥೆಯ ಸಂತೋಷ್ ಗುಡಿಗಾರ್, ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟಿ ಪ್ರಶಾಂತ್ ಹುನವಳ್ಳಿ, ವಿಶ್ವನಾಥ್ ಕುಪ್ಪಗಡ್ಡೆ, ಎಲ್ಲ ಸಂಘಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ಕೆ.ಇ. ಸುನಂದ ಸ್ವಾಗತಿಸಿ, ಎಂ.ಭಾಗ್ಯಜ್ಯೋತಿ ನಿರೂಪಿಸಿದರು. ಮಂಜಪ್ಪ ವಂದಿಸಿದರು.
(ವರದಿ: ಮಧುರಾಮ್, ಸೊರಬ)
Discussion about this post