ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಅನಿರುದ್ ಜತಕರ್ ಅವರು ತಮ್ಮ ವಿನೂತನ ಪ್ರಯೋಗಗಳ ಮೂಲಕ 4 ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಸಾಧನೆಯನ್ನು ದಾಖಲಿಸಿದ್ದು, ಇಡಿಯ ಕನ್ನಡ ಚಿತ್ರರಂಗ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ.
ಕನ್ನಡ ಕಿರುಚಿತ್ರ ಇತಿಹಾಸದಲ್ಲೇ ಮಹತ್ವದ ಸಾಧನೆ ಮಾಡಿರುವ ಅನಿರುದ್, ಸಮಾಜದ ಸಮಸ್ಯೆಗಳು, ಯಾವುದೇ ಸಂಭಾಷಣೆಯಿಲ್ಲದೇ, ಬೇರೆ ಬೇರೆ ಶೈಲಿಯಲ್ಲಿ ಚಿತ್ರೀಕರಣ ಮಾಡಿ ಬಿಡುಗಡೆ ಮಾಡುವ ಮೂಲಕ ವಿನೂತನ ಪ್ರಯತ್ನದಲ್ಲಿ ಯಶಸ್ವಿಗೊಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬಹರಗಾರ ಹಾಗೂ ನಿರ್ದೇಶಕರಾಗಿರುವ ಅನಿರುದ್, ಅತಿ ಹೆಚ್ಚು ಕಿರುಚಿತ್ರಗಳು 6 ಸಾಮಾಜದ ಸಮಸ್ಸೆಗಳನ್ನು ಕುರಿತಾಗಿ ಇದ್ದು ಒಂದೇ ದಿನ ಬಿಡುಗಡೆ ಮಾಡಿದ್ದು, 2018ರ ಸೆಪ್ಟೆಂಬರ್ 18ರಂದು ದಾಖಲೆ ನಿರ್ಮಿಸಿದ್ದಾರೆ.
ಇನ್ನು, ಅತಿ ಹೆಚ್ಚು ಕಿರುಚಿತ್ರಗಳು 6 ಯಾವುದೇ ಸಂಭಾಷಣೆ ಇಲ್ಲದೆ ಇದ್ದು ಒಂದೇ ದಿನ ಬಿಡುಗಡೆ ಮಾಡಿದ್ದು, ಅತಿ ಹೆಚ್ಚು ಕಿರುಚಿತ್ರಗಳು 6 ಬೇರೆ ಬೇರೆ ಶೈಲಿಗಳಲ್ಲಿ ಚಿತ್ರೀಕರಣ ಮಾಡಿ ಒಂದೇ ದಿನ ಬಿಡುಗಡೆ ಮಾಡುವ ಮೂಲಕ ಕಿರುಚಿತ್ರ ಇತಿಹಾಸ ಮಾತ್ರವಲ್ಲ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ಮೈಲುಗಲ್ಲಾಗುವಂತಹ ಸಾಧನೆ ಮಾಡಿದ್ದಾರೆ.
ತಮ್ಮ ಈ ಸಾಧನೆ ಕುರಿತು ಮಾತನಾಡಿರುವ ಅನಿರುದ್, ನಾನು ಕನ್ನಡಿಗನಾಗಿ ಹಾಗೂ ಕರ್ನಾಟಕ ಚಲನಚಿತ್ರ ಕಲಾವಿದನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಈ ಎಲ್ಲಾ ದಾಖಲೆಗಳನ್ನು ನಿರ್ಮಿಸಲು ಅಪ್ಪಾಜಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಆಶೀರ್ವಾದ, ಕೀರ್ತಿ ಇನೋವೇಶನ್ಸ್ ತಂಡದ ಬೆಂಬಲ, ನನ್ನ ಕುಟುಂಬದ ನನ್ನ ಸಾಮರ್ಥ್ಯದ ಮೇಲಿರುವ ಭರವಸೆ ಮತ್ತು ಎಲ್ಲರ ಹಾರೈಕೆ ಕಾರಣ ಎನ್ನುತ್ತಾರೆ.
ನಾಲ್ಕು ದಶಕಗಳ ಕಾಲ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕನ್ನಡಿಗರು ಮೆಚ್ಚಿ ಪ್ರೋತ್ಸಾಹಿಸಿ, ತಮ್ಮ ಮನದಲ್ಲಿ ಒಂದು ಪೂಜ್ಯ ಸ್ಥಾನವನ್ನು ನೀಡಿದ್ದಾರೆ. ವಿಷ್ಣು ಜೀ ಕುಟುಂಬಕ್ಕೆ ಸೇರಿದ ಅನಿರುದ್ ಓರ್ವ ಪ್ರತಿಭಾನ್ವಿತ ನಟ, ಬರಹಗಾರ ಹಾಗೂ ನಿರ್ದೇಶಕ. ಇಂತಹ ಪ್ರತಿಭಾನ್ವಿತ ಕಲಾವಿದರ ಈ ಸಾಧನೆಯನ್ನು ಇಡಿಯ ಕನ್ನಡಿಗರು ಹಾರೈಸಿ, ಪ್ರೋತ್ಸಾಹಿಸಬೇಕಿದೆ.
ಅನಿರುದ್ ಅವರ ಈ ಸಾಧನೆಯನ್ನು ಮೆಚ್ಚಿ ಅವರನ್ನು ಅಭಿನಂದಿಸಲು ಇಚ್ಛಿಸುವ ವಿಷ್ಣುವರ್ಧನ್ ಕುಟುಂಬದ ಅಭಿಮಾನಿಗಳು ತಮ್ಮ ಹೆಸರು ಹಾಗೂ ಊರಿನ ಹೆಸರಿನೊಂದಿಗೆ ಈ ಕೆಳಗಿನ ಇಮೇಲ್ ಐಡಿ ಹಾಗೂ whatsapp ಸಂಖ್ಯೆಗೆ ಕಳುಹಿಸಬಹುದು.
kalpanews.kannada@gmail.com
Whatsapp: +91 94812 52093
Discussion about this post